ಹಲವು ವರ್ಷ ತಾಂತ್ರಿಕ ಕಾರಣದಿಂದ ಕೆರೆಗೆ ನೀರು ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿತ್ತು. ₹4.84 ಕೋಟಿ ವೆಚ್ಚದಲ್ಲಿ ನಗರದ ಎರಡು ಕೆರೆಗೆ ಕಾಲುವೆ ಮೂಲಕ ಮೂರು ತುಂಬಿಸುವ ಯೋಜನೆ ಇದಾಗಿದೆ. ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಉಂಟಾಗದು
ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
ಎರಡು ಕೆರೆಗಳ ಬಗ್ಗೆ ಒತ್ತುವರಿಯಾದ ಬಗ್ಗೆ ದೂರು ಬಂದಿಲ್ಲ. ಸಾರ್ವಜನಿಕರಿಂದ ಕೆರೆ ಒತ್ತುವರಿಯಾಗಿದ್ದರ ಬಗ್ಗೆ ದೂರು ಬಂದರೆ ಮರು ಸರ್ವೆ ಮಾಡಿ ಗಡಿ ಗುರುತು ಹಾಕಲಾಗುವುದು. ಒತ್ತುವರಿಯಾಗದಂತೆ ಕ್ರಮಕೈಗೊಳ್ಳಲಾಗುವುದು
ಉಮಾಕಾಂತ ಹಳ್ಳೆ ತಹಶೀಲ್ದಾರ್
ಕೆರೆಗೆ ನೀರು ತುಂಬಿಸುವ ಯೋಜನೆ ಉತ್ತಮವಾಗಿದೆ. ಎರಡು ಕೆರೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ವೆ ಮಾಡಿ ಗಡಿ ಗುರುತಿಸಿ ಒತ್ತುವರಿದಾರರನ್ನು ತೆರವುಗೊಳಿಸಬೇಕು. ಇದರಿಂದ ಕೆರೆಯಂಗಳದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಣೆಗೆ ಅನುಕೂಲವಾಗುತ್ತದೆ