<p><strong>ಕೆಂಭಾವಿ:</strong> ‘ಸಮಾಜದಿಂದ ಪಡೆದುಕೊಂಡವರಿಗಿಂತ, ಸಮಾಜಕ್ಕೆ ನೀಡಿದವರನ್ನು ಜಗತ್ತು ದಶಕಗಳು ಕಳೆದರು ಸ್ಮರಿಸುತ್ತದೆ’ ಎಂದು ನಂದಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಸಿ ಪಾಟೀಲ ಹೇಳಿದರು.</p>.<p>ಲಿಂ.ಗುರುಬಸಯ್ಯ ಚಿಕ್ಕಮಠ ಅವರ 2 ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತವಾಗಿ ಕೆಂಭಾವಿ ಪ್ರೌಢಶಾಲಾ ಗೆಳೆಯರ ಬಳಗದಿಂದ ವತಿಯಿಂದ ಜೈ ಭೀಮ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಎಲ್ಇಡಿ ಟಿವಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ಗೆಳೆಯನ ನೆನಪನ್ನು ಸದಾ ಸ್ಮರಿಸುತ್ತಾ ಸಮಾಜಸೇವೆಯಲ್ಲಿ ತೊಡಗಿರುವ ಪ್ರೌಢಶಾಲಾ ಗೆಳೆಯರ ಬಳಗದ ಕಾರ್ಯ ಅತ್ಯಂತ ಶ್ಲಾಘನೀಯ’ ಎಂದರು.</p>.<p>ಪ್ರಾಸ್ತಾವಿಕ ಮಾತನಾಡಿದ ಶಿಕ್ಷಕ ಮಲ್ಲಿಕಾರ್ಜುನ ಕುಂಬಾರ, ‘ಲಿಂ.ಗುರುಬಸಯ್ಯ ಚಿಕ್ಕಮಠ ಅವರು ವಿಶೇಷ ಚೇತನರಾಗಿದ್ದರೂ ಸಹ ವಿಶೇಷವಾದ ಜ್ಞಾನ ಉಳ್ಳುವರು ಆಗಿದ್ದರು. ನಮ್ಮ ಗೆಳೆಯರ ಬಳಗದಲ್ಲಿ ಅತ್ಯಂತ ಹೆಚ್ಚು ಕ್ರೀಯಾಶೀಲ ವ್ಯಕ್ತಿಯಾಗಿದ್ದರು’ ಎಂದರು.</p>.<p>ಸಿಆರ್ಪಿ ಬಂದೇನವಾಜ ನಾಲತವಾಡ ಮಾತನಾಡಿ, ‘ಗೆಳೆಯರ ಬಳಗದಿಂದ ನೀಡಿದಂತಹ ಟಿವಿಯನ್ನು ಸರಿಯಾದ ರೀತಿಯಲ್ಲಿ ಶಾಲೆಯಲ್ಲಿ ಉಪಯೋಗಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಬೌದ್ದಿಕಮಟ್ಟ ಹೆಚ್ಚುತ್ತದೆ’ ಎಂದು ಹೇಳಿದರು.</p>.<p>ಎಸ್ಡಿಎಮ್ಸಿ ಅಧ್ಯಕ್ಷ ಬಸವಣ್ಣೆಪ್ಪ ಮಾಳಳ್ಳಿಕರ, ಮುಖ್ಯಶಿಕ್ಷಕ ಮಂದಾಕಿನಿ.ಎಸ್, ಮಂಜುನಾಥ ಕುಲಕರ್ಣಿ, ಶಿವು ಗೂಗಲ, ಏಜಾಜ ವಡಕೇರಿ ವೇದಿಕೆ ಮೇಲಿದ್ದರು.</p>.<p>ಸಿದ್ದಣ್ಣ ಸ್ವಾಗತಿಸಿದರು, ರಾಘವೇಂದ್ರ ನಿರೂಪಿಸಿದರು, ಬಸವರಾಜ ಅವಂಟಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಭಾವಿ:</strong> ‘ಸಮಾಜದಿಂದ ಪಡೆದುಕೊಂಡವರಿಗಿಂತ, ಸಮಾಜಕ್ಕೆ ನೀಡಿದವರನ್ನು ಜಗತ್ತು ದಶಕಗಳು ಕಳೆದರು ಸ್ಮರಿಸುತ್ತದೆ’ ಎಂದು ನಂದಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಸಿ ಪಾಟೀಲ ಹೇಳಿದರು.</p>.<p>ಲಿಂ.ಗುರುಬಸಯ್ಯ ಚಿಕ್ಕಮಠ ಅವರ 2 ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತವಾಗಿ ಕೆಂಭಾವಿ ಪ್ರೌಢಶಾಲಾ ಗೆಳೆಯರ ಬಳಗದಿಂದ ವತಿಯಿಂದ ಜೈ ಭೀಮ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಎಲ್ಇಡಿ ಟಿವಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ಗೆಳೆಯನ ನೆನಪನ್ನು ಸದಾ ಸ್ಮರಿಸುತ್ತಾ ಸಮಾಜಸೇವೆಯಲ್ಲಿ ತೊಡಗಿರುವ ಪ್ರೌಢಶಾಲಾ ಗೆಳೆಯರ ಬಳಗದ ಕಾರ್ಯ ಅತ್ಯಂತ ಶ್ಲಾಘನೀಯ’ ಎಂದರು.</p>.<p>ಪ್ರಾಸ್ತಾವಿಕ ಮಾತನಾಡಿದ ಶಿಕ್ಷಕ ಮಲ್ಲಿಕಾರ್ಜುನ ಕುಂಬಾರ, ‘ಲಿಂ.ಗುರುಬಸಯ್ಯ ಚಿಕ್ಕಮಠ ಅವರು ವಿಶೇಷ ಚೇತನರಾಗಿದ್ದರೂ ಸಹ ವಿಶೇಷವಾದ ಜ್ಞಾನ ಉಳ್ಳುವರು ಆಗಿದ್ದರು. ನಮ್ಮ ಗೆಳೆಯರ ಬಳಗದಲ್ಲಿ ಅತ್ಯಂತ ಹೆಚ್ಚು ಕ್ರೀಯಾಶೀಲ ವ್ಯಕ್ತಿಯಾಗಿದ್ದರು’ ಎಂದರು.</p>.<p>ಸಿಆರ್ಪಿ ಬಂದೇನವಾಜ ನಾಲತವಾಡ ಮಾತನಾಡಿ, ‘ಗೆಳೆಯರ ಬಳಗದಿಂದ ನೀಡಿದಂತಹ ಟಿವಿಯನ್ನು ಸರಿಯಾದ ರೀತಿಯಲ್ಲಿ ಶಾಲೆಯಲ್ಲಿ ಉಪಯೋಗಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಬೌದ್ದಿಕಮಟ್ಟ ಹೆಚ್ಚುತ್ತದೆ’ ಎಂದು ಹೇಳಿದರು.</p>.<p>ಎಸ್ಡಿಎಮ್ಸಿ ಅಧ್ಯಕ್ಷ ಬಸವಣ್ಣೆಪ್ಪ ಮಾಳಳ್ಳಿಕರ, ಮುಖ್ಯಶಿಕ್ಷಕ ಮಂದಾಕಿನಿ.ಎಸ್, ಮಂಜುನಾಥ ಕುಲಕರ್ಣಿ, ಶಿವು ಗೂಗಲ, ಏಜಾಜ ವಡಕೇರಿ ವೇದಿಕೆ ಮೇಲಿದ್ದರು.</p>.<p>ಸಿದ್ದಣ್ಣ ಸ್ವಾಗತಿಸಿದರು, ರಾಘವೇಂದ್ರ ನಿರೂಪಿಸಿದರು, ಬಸವರಾಜ ಅವಂಟಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>