<p><strong>ಯಾದಗಿರಿ</strong>: ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಮೈಲಾಪುರದಲ್ಲಿ ದೀಪಾವಳಿ ಅಂಗವಾಗಿ ಮೈಲಾರಲಿಂಗೇಶ್ವರ ಜಾತ್ರೆ ಅದ್ದೂರಿಯಾಗಿ ಜರುಗಿತು. ಅತ್ತೆಯ ಮನೆಯಾದ ಹಳಗೇರಿ ಗ್ರಾಮದಲ್ಲಿ ಐದು ದಿನಗಳು ಉಳಿದುಕೊಂಡಿದ್ದ ಮೈಲಾರಲಿಂಗೇಶ್ವರನನ್ನು (ಕಂಡರಾಯ) ಭಕ್ತರು ಮೆರವಣಿಗೆಯೊಂದಿಗೆ ಕರೆತಂದರು.</p>.<p>ದೀಪಾವಳಿ ಜಾತ್ರೆಯ ಅಂಗವಾಗಿ ದೇವಸ್ಥಾನ ಹಾಗೂ ಗ್ರಾಮದಲ್ಲಿ ಹಲವು ವಿಧಿವಿಧಾನಗಳು ಜರುಗಿದವು. ಸ್ವಕ್ಷೇತ್ರಕ್ಕೆ ಬಂದ ಕಂಡರಾಯನನ್ನು ಭಕ್ತರು ದೀವಟಿಗೆ ಹಿಡಿದು ಡೊಳ್ಳು, ಬಾಜಾ–ಭಜಂತ್ರಿ, ಭಂಡಾರ ಎರಚುತ್ತಾ ಏಳು ಕೋಟಿ ಜಯಘೋಷಗಳೊಂದಿಗೆ ಬರ ಮಾಡಿಕೊಂಡರು.</p>.<p>ಮೈಲಾರಲಿಂಗೇಶ್ವರನ ತಾಯಿಯಾದ ಬನ್ನಿ ಮಹಾಂಕಾಳಿ ತಾಯಿಗೆ ಭಾನುವಾರ ರಾತ್ರಿ ಮಹಾಪೂಜೆ ಮತ್ತು ನೈವೇದ್ಯ (ಭೂಮದ ಪೂಜೆ)<br> ನೆರವೇರಿತು. </p>.<p>ಬನ್ನಿ ಮಹಾಂಕಾಳಿ ತಾಯಿಗೆ ಪೂಜೆ ಸಲ್ಲಿಸಿದ ಬಳಿಕ ನಡೆದ ದೇವರ ಹೇಳಿಕೆಯಲ್ಲಿ ‘ನಾಲ್ಕು ಮೂಲೆ ಎಂಟು ದಿಕ್ಕುಗಳು ಸಂಪೂರ್ಣ’ ಎಂದು ಭವಿಷ್ಯ ನುಡಿಯುತ್ತಿದಂತೆ ಜಯ ಘೋಷಗಳು ಮೊಳಗಿದವು. ಆ ನಂತರ ಸಂಪ್ರದಾಯದಂತೆ ದೇವಸ್ಥಾನದ ಬೆಟ್ಟದ ಆರಂಭಿಕ ಮೆಟ್ಟಿಲುಗಳ ಸಮೀಪದಲ್ಲಿ ಪೂಜಾರಿಯು ಕಬ್ಬಿಣದ ಸರಪಳಿಯನ್ನು ಹರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಮೈಲಾಪುರದಲ್ಲಿ ದೀಪಾವಳಿ ಅಂಗವಾಗಿ ಮೈಲಾರಲಿಂಗೇಶ್ವರ ಜಾತ್ರೆ ಅದ್ದೂರಿಯಾಗಿ ಜರುಗಿತು. ಅತ್ತೆಯ ಮನೆಯಾದ ಹಳಗೇರಿ ಗ್ರಾಮದಲ್ಲಿ ಐದು ದಿನಗಳು ಉಳಿದುಕೊಂಡಿದ್ದ ಮೈಲಾರಲಿಂಗೇಶ್ವರನನ್ನು (ಕಂಡರಾಯ) ಭಕ್ತರು ಮೆರವಣಿಗೆಯೊಂದಿಗೆ ಕರೆತಂದರು.</p>.<p>ದೀಪಾವಳಿ ಜಾತ್ರೆಯ ಅಂಗವಾಗಿ ದೇವಸ್ಥಾನ ಹಾಗೂ ಗ್ರಾಮದಲ್ಲಿ ಹಲವು ವಿಧಿವಿಧಾನಗಳು ಜರುಗಿದವು. ಸ್ವಕ್ಷೇತ್ರಕ್ಕೆ ಬಂದ ಕಂಡರಾಯನನ್ನು ಭಕ್ತರು ದೀವಟಿಗೆ ಹಿಡಿದು ಡೊಳ್ಳು, ಬಾಜಾ–ಭಜಂತ್ರಿ, ಭಂಡಾರ ಎರಚುತ್ತಾ ಏಳು ಕೋಟಿ ಜಯಘೋಷಗಳೊಂದಿಗೆ ಬರ ಮಾಡಿಕೊಂಡರು.</p>.<p>ಮೈಲಾರಲಿಂಗೇಶ್ವರನ ತಾಯಿಯಾದ ಬನ್ನಿ ಮಹಾಂಕಾಳಿ ತಾಯಿಗೆ ಭಾನುವಾರ ರಾತ್ರಿ ಮಹಾಪೂಜೆ ಮತ್ತು ನೈವೇದ್ಯ (ಭೂಮದ ಪೂಜೆ)<br> ನೆರವೇರಿತು. </p>.<p>ಬನ್ನಿ ಮಹಾಂಕಾಳಿ ತಾಯಿಗೆ ಪೂಜೆ ಸಲ್ಲಿಸಿದ ಬಳಿಕ ನಡೆದ ದೇವರ ಹೇಳಿಕೆಯಲ್ಲಿ ‘ನಾಲ್ಕು ಮೂಲೆ ಎಂಟು ದಿಕ್ಕುಗಳು ಸಂಪೂರ್ಣ’ ಎಂದು ಭವಿಷ್ಯ ನುಡಿಯುತ್ತಿದಂತೆ ಜಯ ಘೋಷಗಳು ಮೊಳಗಿದವು. ಆ ನಂತರ ಸಂಪ್ರದಾಯದಂತೆ ದೇವಸ್ಥಾನದ ಬೆಟ್ಟದ ಆರಂಭಿಕ ಮೆಟ್ಟಿಲುಗಳ ಸಮೀಪದಲ್ಲಿ ಪೂಜಾರಿಯು ಕಬ್ಬಿಣದ ಸರಪಳಿಯನ್ನು ಹರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>