1997ರಲ್ಲಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಳ್ಳಿ ಹಾಲುಶೀತಲೀಕರಣ ಕೇಂದ್ರ ಆರಂಭಗೊಂಡಿದ್ದರೂ ಆಗಾಗ ನಿಲ್ಲುವುದರಿಂದ ಹೈನುಗಾರಿಕೆಗೆ ಹಿನ್ನೆಡೆ ಉಂಟಾಗಿದೆ.
ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ವಂಚಿತ ಶಹಾಪುರ, ಯಾದಗಿರಿ ಪ್ರದೇಶಗಳ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಆರಂಭಿಸಿದ ಹಾಲು ಶೀತಲೀಕರಣ ಕೇಂದ್ರ ಆಗಾಗ ಕೆಲ ದಿನ ನಡೆಯುವುದು– ಬಂದ್ ಆಗುವುದು ನಡೆಯುತ್ತಿದ್ದು, ಇದರಿಂದ ಹೈನುಗಾರಿಕೆ ಚಟುವಟಿಕೆಗೆ ಸಮಸ್ಯೆ ಉಂಟಾಗಿದೆ.