<p><strong>ಯಾದಗಿರಿ:</strong> ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣಅವರ ಉಸ್ತುವಾರಿ ಜಿಲ್ಲೆಯಲ್ಲಿಹಾಲು ಶೀತಲೀಕರಣ ಕೇಂದ್ರಕ್ಕೆ ಬೀಗ ಹಾಕಿದ್ದರೂ ಪುನಶ್ಚೇತನಕ್ಕೆಯಾವುದೇ ಕ್ರಮ ಕೈಗೊಂಡಿಲ್ಲ.</p>.<p>1997ರಲ್ಲಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಳ್ಳಿ ಹಾಲುಶೀತಲೀಕರಣ ಕೇಂದ್ರ ಆರಂಭಗೊಂಡಿದ್ದರೂ ಆಗಾಗ ನಿಲ್ಲುವುದರಿಂದ ಹೈನುಗಾರಿಕೆಗೆ ಹಿನ್ನೆಡೆ ಉಂಟಾಗಿದೆ.<br />ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ವಂಚಿತ ಶಹಾಪುರ, ಯಾದಗಿರಿ ಪ್ರದೇಶಗಳ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಆರಂಭಿಸಿದ ಹಾಲು ಶೀತಲೀಕರಣ ಕೇಂದ್ರ ಆಗಾಗ ಕೆಲ ದಿನ ನಡೆಯುವುದು– ಬಂದ್ ಆಗುವುದು ನಡೆಯುತ್ತಿದ್ದು, ಇದರಿಂದ ಹೈನುಗಾರಿಕೆ ಚಟುವಟಿಕೆಗೆ ಸಮಸ್ಯೆ ಉಂಟಾಗಿದೆ.</p>.<p>ಅಂದಿನ ಕರ್ನಾಟಕ ಹಾಲು ಮಹಾ ಮಂಡಳಿ ಅಧ್ಯಕ್ಷ ಎಚ್.ಡಿ.ರೇವಣ್ಣ ಈ ಘಟಕವನ್ನು ಉದ್ಘಾಟಿಸಿದ್ದರು. ಆರಂಭದ ಕೆಲ ತಿಂಗಳು ನಡೆದರೂ ಸಿಬ್ಬಂದಿ, ಮತ್ತಿತರ ಕೊರತೆಗಳಿಂದ ಈಗ ಘಟಕಕ್ಕೆ ಬೀಗ ಜಡಿಯಲಾಗಿದೆ. ನಿರ್ವಹಣೆ ಕೊರತೆಯಿಂದ ಕಟ್ಟಡ, ಯಂತ್ರೋಪಕರಣಗಳು ಹಾಳಾಗುತ್ತಿವೆ.</p>.<p>ಕೇಂದ್ರವು ಹತ್ತು ಸಾವಿರ ಲೀಟರ್ ಹಾಲು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಕೇಂದ್ರಕ್ಕೆ 700ರಿಂದ 800 ಲೀಟರ್ ಹಾಲು ಬರುತ್ತಿಲ್ಲ. ಹೀಗಾಗಿ ಕೇಂದ್ರವನ್ನು ಮುಚ್ಚಲಾಗಿದೆ ಎಂಬುದು ಅಧಿಕಾರಿಗಳ ವಿವರಣೆ. ಆದರೆ, ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ಬೀಗ ಜಡಿಯಲಾಗಿದೆ ಎಂಬುದು ಗ್ರಾಮಸ್ಥರ ಆರೋಪ.</p>.<p>2012–13ರಲ್ಲಿ ಕೇಂದ್ರದ ಪುನಶ್ಚೇತನಕ್ಕಾಗಿ ₹22 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ನಂತರ ಮತ್ತೆ ನಿಂತಿದೆ.</p>.<p>‘ಜಿಲ್ಲೆಯಲ್ಲಿ ಹಾಲು ಉತ್ಪಾದಕರ 84 ಸಂಘಗಳು ನೋಂದಣಿಯಾಗಿವೆ. ಅದರಲ್ಲಿ 27 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಹಾಲು ಹೆಚ್ಚು ಉತ್ಪಾದನೆಯಾದರೆ ಮಾತ್ರ ಕೇಂದ್ರಗಳು ಕಾರ್ಯನಿರ್ವಹಿಸಲು ಸಾಧ್ಯ’ ಎಂದು ಕೆಎಂಎಫ್ ಅಧಿಕಾರಿಮನೋಹರ ಕುಲಕರ್ಣಿ ಹೇಳುತ್ತಾರೆ.</p>.<p>‘ಗ್ರಾಮಸ್ಥರು ಕೇಂದ್ರ ಆರಂಭಿಸಿ ನಮಗೆ ಆಕಳು ಒದಗಿಸಿಕೊಡಿ ಎಂದು ಹೇಳುತ್ತಿದ್ದಾರೆ. ಆದರೆ, ಅದು ನಮ್ಮ ಕೆಲಸ ಅಲ್ಲ. ಪಶು ಸಂಗೋಪನೆ ಇಲಾಖೆಯಿಂದ ಪಶುಗಳನ್ನು ಪಡೆಯಬೇಕು’ ಎನ್ನುತ್ತಾರೆ ಅವರು.</p>.<p>‘ಈ ಭಾಗದಲ್ಲಿ ಹೈನುಗಾರಿಕೆ ಬದಲಾಗಿ ಭತ್ತ ಬೆಳೆಯಲು ಆರಂಭಿಸಿದ್ದರಿಂದ ಹಾಲು ಉತ್ಪಾದನೆಗೆ ಹಿನ್ನಡೆಯಾಗಿದೆ. ರೈತರು ಭತ್ತ ಬೆಳೆಯಲು ಆಂಧ್ರವರಿಗೆ ಜಮೀನು ನೀಡಿದ್ದರಿಂದ ಹೈನುಗಾರಿಕೆಯತ್ತ ಯಾರೂ ಮನಸ್ಸು ಮಾಡುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣಅವರ ಉಸ್ತುವಾರಿ ಜಿಲ್ಲೆಯಲ್ಲಿಹಾಲು ಶೀತಲೀಕರಣ ಕೇಂದ್ರಕ್ಕೆ ಬೀಗ ಹಾಕಿದ್ದರೂ ಪುನಶ್ಚೇತನಕ್ಕೆಯಾವುದೇ ಕ್ರಮ ಕೈಗೊಂಡಿಲ್ಲ.</p>.<p>1997ರಲ್ಲಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಳ್ಳಿ ಹಾಲುಶೀತಲೀಕರಣ ಕೇಂದ್ರ ಆರಂಭಗೊಂಡಿದ್ದರೂ ಆಗಾಗ ನಿಲ್ಲುವುದರಿಂದ ಹೈನುಗಾರಿಕೆಗೆ ಹಿನ್ನೆಡೆ ಉಂಟಾಗಿದೆ.<br />ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ವಂಚಿತ ಶಹಾಪುರ, ಯಾದಗಿರಿ ಪ್ರದೇಶಗಳ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಆರಂಭಿಸಿದ ಹಾಲು ಶೀತಲೀಕರಣ ಕೇಂದ್ರ ಆಗಾಗ ಕೆಲ ದಿನ ನಡೆಯುವುದು– ಬಂದ್ ಆಗುವುದು ನಡೆಯುತ್ತಿದ್ದು, ಇದರಿಂದ ಹೈನುಗಾರಿಕೆ ಚಟುವಟಿಕೆಗೆ ಸಮಸ್ಯೆ ಉಂಟಾಗಿದೆ.</p>.<p>ಅಂದಿನ ಕರ್ನಾಟಕ ಹಾಲು ಮಹಾ ಮಂಡಳಿ ಅಧ್ಯಕ್ಷ ಎಚ್.ಡಿ.ರೇವಣ್ಣ ಈ ಘಟಕವನ್ನು ಉದ್ಘಾಟಿಸಿದ್ದರು. ಆರಂಭದ ಕೆಲ ತಿಂಗಳು ನಡೆದರೂ ಸಿಬ್ಬಂದಿ, ಮತ್ತಿತರ ಕೊರತೆಗಳಿಂದ ಈಗ ಘಟಕಕ್ಕೆ ಬೀಗ ಜಡಿಯಲಾಗಿದೆ. ನಿರ್ವಹಣೆ ಕೊರತೆಯಿಂದ ಕಟ್ಟಡ, ಯಂತ್ರೋಪಕರಣಗಳು ಹಾಳಾಗುತ್ತಿವೆ.</p>.<p>ಕೇಂದ್ರವು ಹತ್ತು ಸಾವಿರ ಲೀಟರ್ ಹಾಲು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಕೇಂದ್ರಕ್ಕೆ 700ರಿಂದ 800 ಲೀಟರ್ ಹಾಲು ಬರುತ್ತಿಲ್ಲ. ಹೀಗಾಗಿ ಕೇಂದ್ರವನ್ನು ಮುಚ್ಚಲಾಗಿದೆ ಎಂಬುದು ಅಧಿಕಾರಿಗಳ ವಿವರಣೆ. ಆದರೆ, ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ಬೀಗ ಜಡಿಯಲಾಗಿದೆ ಎಂಬುದು ಗ್ರಾಮಸ್ಥರ ಆರೋಪ.</p>.<p>2012–13ರಲ್ಲಿ ಕೇಂದ್ರದ ಪುನಶ್ಚೇತನಕ್ಕಾಗಿ ₹22 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ನಂತರ ಮತ್ತೆ ನಿಂತಿದೆ.</p>.<p>‘ಜಿಲ್ಲೆಯಲ್ಲಿ ಹಾಲು ಉತ್ಪಾದಕರ 84 ಸಂಘಗಳು ನೋಂದಣಿಯಾಗಿವೆ. ಅದರಲ್ಲಿ 27 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಹಾಲು ಹೆಚ್ಚು ಉತ್ಪಾದನೆಯಾದರೆ ಮಾತ್ರ ಕೇಂದ್ರಗಳು ಕಾರ್ಯನಿರ್ವಹಿಸಲು ಸಾಧ್ಯ’ ಎಂದು ಕೆಎಂಎಫ್ ಅಧಿಕಾರಿಮನೋಹರ ಕುಲಕರ್ಣಿ ಹೇಳುತ್ತಾರೆ.</p>.<p>‘ಗ್ರಾಮಸ್ಥರು ಕೇಂದ್ರ ಆರಂಭಿಸಿ ನಮಗೆ ಆಕಳು ಒದಗಿಸಿಕೊಡಿ ಎಂದು ಹೇಳುತ್ತಿದ್ದಾರೆ. ಆದರೆ, ಅದು ನಮ್ಮ ಕೆಲಸ ಅಲ್ಲ. ಪಶು ಸಂಗೋಪನೆ ಇಲಾಖೆಯಿಂದ ಪಶುಗಳನ್ನು ಪಡೆಯಬೇಕು’ ಎನ್ನುತ್ತಾರೆ ಅವರು.</p>.<p>‘ಈ ಭಾಗದಲ್ಲಿ ಹೈನುಗಾರಿಕೆ ಬದಲಾಗಿ ಭತ್ತ ಬೆಳೆಯಲು ಆರಂಭಿಸಿದ್ದರಿಂದ ಹಾಲು ಉತ್ಪಾದನೆಗೆ ಹಿನ್ನಡೆಯಾಗಿದೆ. ರೈತರು ಭತ್ತ ಬೆಳೆಯಲು ಆಂಧ್ರವರಿಗೆ ಜಮೀನು ನೀಡಿದ್ದರಿಂದ ಹೈನುಗಾರಿಕೆಯತ್ತ ಯಾರೂ ಮನಸ್ಸು ಮಾಡುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>