ಎರಡು ತಿಂಗಳ ಹಿಂದೆ ಅಡುಗೆ ಕಲಿತು ಬರುವಂತೆ ಪತ್ನಿಯನ್ನು ತಾಲ್ಲೂಕಿನ ಸೌರಾಷ್ಟ್ರಹಳ್ಳಿಯ ಮೃತಳ ತವರು ಮನೆಗೆ ಬಿಟ್ಟು ಬಂದಿದ್ದ ಆರೋಪಿ ಕೆಲ ದಿನಗಳ ಹಿಂದೆ ವಾಪಸ್ ಕರೆತಂದಿದ್ದ. ಶುಕ್ರವಾರ (ಮೇ 13 ) ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ನಂತರ ಮನೆಯ ಛಾವಣಿಯಲ್ಲಿ ಮಲಗಲು ಕರೆದೊಯ್ದಿದ್ದಾನೆ. ನಂತರ ಜಗಳವಾಡಿದ್ದು, ಅಲ್ಲಿದ್ದ ಕಾಟನ್ ಬಟ್ಟೆಯಂತಹ ದಾರದಿಂದ ನೇಣುಬಿಗಿದು ಕೊಲೆ ಮಾಡಿದ್ದಾನೆ.