ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಭಾವಿ: ನೂತನ ಬಸ್ ಸೇವೆ ಆರಂಭ

Published 12 ಡಿಸೆಂಬರ್ 2023, 13:20 IST
Last Updated 12 ಡಿಸೆಂಬರ್ 2023, 13:20 IST
ಅಕ್ಷರ ಗಾತ್ರ

ಕೆಂಭಾವಿ: ಕೆಂಭಾವಿ ಮಾರ್ಗವಾಗಿ ಬಸವಕಲ್ಯಾಣದಿಂದ ಬಾಗಲಕೋಟೆ ನಗರಕ್ಕೆ ನೂತನವಾಗಿ ಬಸ್ ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎಚ್.ಪುಲೆಕರ್ ತಿಳಿಸಿದ್ದಾರೆ.

ಬಸವಕಲ್ಯಾಣದಿಂದ ಬೆಳಿಗ್ಗೆ 10 ಗಂಟಗೆ ಹೊರಡುವ ಈ ಬಸ್‌ ಕಲಬುರಗಿ, ಶಹಾಪುರ, ಕೆಂಭಾವಿ, ಪೀರಾಪುರ, ತಾಳಿಕೋಟೆ, ಮುದ್ದೇಬಿಹಾಳ, ಆಲಮಟ್ಟಿ ಮಾರ್ಗವಾಗಿ ಬಾಗಲಕೋಟೆ ತಲುಪಲಿದೆ. ಇದೇ ಮಾರ್ಗವಾಗಿ ಬೆಳಿಗ್ಗೆ 6 ಗಂಟೆಗೆ ಬಾಗಲಕೋಟೆ ನಗರದಿಂದ ಹೊರಡುವ ಬಸ್‌ ಬಸವಕಲ್ಯಾಣಕ್ಕೆ 4 ಗಂಟೆಗೆ ತಲುಪಲಿದೆ ಎಂದು  ಸೋಮವಾರ ತಿಳಿಸಿದ್ದಾರೆ.

ಈ ಭಾಗದ ಪ್ರಯಾಣಿಕರ ಬಹು ದಿನಗಳ ಬೇಡಿಕೆಯಾಗಿದ್ದ ಈ ಮಾರ್ಗದ ಬಸ್ ಓಡಿಸಲು ಸಹಕರಿಸಿದ ಇಲಾಖೆಯ ಎಲ್ಲ ಮೇಲಧಿಕಾರಿಗಳಿಗೆ ನಾಗರಿಕ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಸಂಜೀವರಾವ ಕುಲಕರ್ಣಿ, ಉಪಾಧ್ಯಕ್ಷ ನೂರುಲ್ಲಾಖಾನ ಹಾಗೂ ಇತರೆ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT