<p><strong>ಕೆಂಭಾವಿ:</strong> ಪಟ್ಟಣದ ಉತ್ತರಾದಿಮಠದ ಯತಿಚತುಷ್ಟಯರ (ಜಯ ತೀರ್ಥರು, ರಘೂತ್ತಮ ತೀರ್ಥರು, ರಾಘವೇಂದ್ರ ತೀರ್ಥರು, ಸತ್ಯಪ್ರಮೋದ ತೀರ್ಥರು) ವೃಂದಾವನ ಸನ್ನಿಧಾನದಲ್ಲಿ ಉತ್ತರಾದಿ ಮಠದ ಸತ್ಯಪ್ರಮೋದ ತೀರ್ಥರ ಆರಾಧನಾ ಮಹೋತ್ಸವ ಬಹು ವಿಜೃಂಬಣೆಯಿಂದ ನೆರವೇರಿತು.</p>.<p>ಆರಾಧನೆ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಸುಪ್ರಭಾತ, ಅಷ್ಟೊತ್ತರ, ವಿಷ್ಣು ಸಹಸ್ರನಾಮ, ಸುಂದರಕಾಂಡ ಪಾರಾಯಣ, ಪಂಚಾಮೃತ, ವಿಶೇಷ ಅಲಂಕಾರ, ಸಂಗೀತ, ಭಜನೆ, ಪ್ರವಚನ, ರಥೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.</p>.<p>ಸತ್ಯಪ್ರಮೋದ ತೀರ್ಥರ 28ನೇ ಆರಾಧನಾ ಮಹೋತ್ಸವದ ನಿಮಿತ್ತ ಶನಿವಾರ ಉಪನ್ಯಾಸ ನೀಡಿದ ಕಲಬುರಗಿಯ ಮಾಧವಾಚಾರ್ಯರು, ‘ಮಹಾತ್ಮರ, ಯತಿಗಳ ಆರಾಧನೆಯಲ್ಲಿ ಜ್ಞಾನಕಾರ್ಯ ಮಾಡುವುದು ಅತೀ ಅವಶ್ಯ. ಜ್ಞಾನಕಾರ್ಯ ಮಾಡದೆ ಆರಾಧನೆಗಳಿಗೆ ಮಹತ್ವ ಬರುವುದಿಲ್ಲ’ ಎಂದರು.</p>.<p>‘ಗುರುಗಳ ಮತ್ತು ಭಗವಂತನ ಮಹಿಮೆಗಳನ್ನು ಕೇಳಬೇಕಾದರೆ ಜ್ಞಾನಕಾರ್ಯ ಏರ್ಪಡಿಬೇಕು. ಸತ್ಯಪ್ರಮೋದ ತೀರ್ಥರು ಉತ್ತರಾದಿ ಮಠದ ಮಹಾನ ಚೇತನರು. ಹಲವು ಗ್ರಂಥಗಳ ರಚನೆ ಹಾಗೂ ದೇಶದಲ್ಲಿ ನೂರಾರು ವಿದ್ವಾಂಸರನ್ನು ತಯಾರಿಸಿದ ಕೀರ್ತಿ ಸತ್ಯಪ್ರಮೋದ ತೀರ್ಥರಿಗೆ ಸಲ್ಲುತ್ತದೆ’ ಎಂದರು.</p>.<p>ರಾಯಚೂರಿನ ಮುಕುಂದಾಚಾರ್ಯ ಗುರುಗಳ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.</p>.<p>ಉತ್ತರಾರಾಧನೆಯ ದಿನವಾದ ಶನಿವಾರ ಪಲ್ಲಕ್ಕಿ ಮೆರವಣಿಗೆ ನಾಡಿಗೇರ ಹನುಮಂತ ದೇವರ ದೇವಸ್ಥಾನಕ್ಕೆ ಹೋಗಿ ಬರುವ ಮೂಲಕ ಮೂರು ದಿನಗಳ ಆರಾಧನಾ ಉತ್ಸವಕ್ಕೆ ತೆರೆ ಎಳೆಯಲಾಯಿತು.</p>.<p>ಮೋಹನರಾವ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ ಹಾಗೂ ವಾಮನರಾವ ದೇಶಪಾಂಡೆ ಅನ್ನ ಸಂತರ್ಪಣೆ ಸೇವೆ ಮಾಡಿದರು.</p>.<p>ಜಯ ಸತ್ಯಪ್ರಮೋದ ಸೇವಾ ಸಂಘದ ಕಾರ್ಯಕರ್ತರು, ಪ್ರಮೋದಿನ ಮಹಿಳಾ ಭಜನಾ ಮಂಡಳಿಯ ಕಾರ್ಯಕರ್ತರು ಹಾಗೂ ಸತ್ಯಪ್ರಮೋದ ಯುವ ಸೇನೆಯ ಪದಾಧಿಕಾರಿಗಳು ಸೇರಿದಂತೆ ಹಲವು ಭಕ್ತರು ಆರಾಧನೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಭಾವಿ:</strong> ಪಟ್ಟಣದ ಉತ್ತರಾದಿಮಠದ ಯತಿಚತುಷ್ಟಯರ (ಜಯ ತೀರ್ಥರು, ರಘೂತ್ತಮ ತೀರ್ಥರು, ರಾಘವೇಂದ್ರ ತೀರ್ಥರು, ಸತ್ಯಪ್ರಮೋದ ತೀರ್ಥರು) ವೃಂದಾವನ ಸನ್ನಿಧಾನದಲ್ಲಿ ಉತ್ತರಾದಿ ಮಠದ ಸತ್ಯಪ್ರಮೋದ ತೀರ್ಥರ ಆರಾಧನಾ ಮಹೋತ್ಸವ ಬಹು ವಿಜೃಂಬಣೆಯಿಂದ ನೆರವೇರಿತು.</p>.<p>ಆರಾಧನೆ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಸುಪ್ರಭಾತ, ಅಷ್ಟೊತ್ತರ, ವಿಷ್ಣು ಸಹಸ್ರನಾಮ, ಸುಂದರಕಾಂಡ ಪಾರಾಯಣ, ಪಂಚಾಮೃತ, ವಿಶೇಷ ಅಲಂಕಾರ, ಸಂಗೀತ, ಭಜನೆ, ಪ್ರವಚನ, ರಥೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.</p>.<p>ಸತ್ಯಪ್ರಮೋದ ತೀರ್ಥರ 28ನೇ ಆರಾಧನಾ ಮಹೋತ್ಸವದ ನಿಮಿತ್ತ ಶನಿವಾರ ಉಪನ್ಯಾಸ ನೀಡಿದ ಕಲಬುರಗಿಯ ಮಾಧವಾಚಾರ್ಯರು, ‘ಮಹಾತ್ಮರ, ಯತಿಗಳ ಆರಾಧನೆಯಲ್ಲಿ ಜ್ಞಾನಕಾರ್ಯ ಮಾಡುವುದು ಅತೀ ಅವಶ್ಯ. ಜ್ಞಾನಕಾರ್ಯ ಮಾಡದೆ ಆರಾಧನೆಗಳಿಗೆ ಮಹತ್ವ ಬರುವುದಿಲ್ಲ’ ಎಂದರು.</p>.<p>‘ಗುರುಗಳ ಮತ್ತು ಭಗವಂತನ ಮಹಿಮೆಗಳನ್ನು ಕೇಳಬೇಕಾದರೆ ಜ್ಞಾನಕಾರ್ಯ ಏರ್ಪಡಿಬೇಕು. ಸತ್ಯಪ್ರಮೋದ ತೀರ್ಥರು ಉತ್ತರಾದಿ ಮಠದ ಮಹಾನ ಚೇತನರು. ಹಲವು ಗ್ರಂಥಗಳ ರಚನೆ ಹಾಗೂ ದೇಶದಲ್ಲಿ ನೂರಾರು ವಿದ್ವಾಂಸರನ್ನು ತಯಾರಿಸಿದ ಕೀರ್ತಿ ಸತ್ಯಪ್ರಮೋದ ತೀರ್ಥರಿಗೆ ಸಲ್ಲುತ್ತದೆ’ ಎಂದರು.</p>.<p>ರಾಯಚೂರಿನ ಮುಕುಂದಾಚಾರ್ಯ ಗುರುಗಳ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.</p>.<p>ಉತ್ತರಾರಾಧನೆಯ ದಿನವಾದ ಶನಿವಾರ ಪಲ್ಲಕ್ಕಿ ಮೆರವಣಿಗೆ ನಾಡಿಗೇರ ಹನುಮಂತ ದೇವರ ದೇವಸ್ಥಾನಕ್ಕೆ ಹೋಗಿ ಬರುವ ಮೂಲಕ ಮೂರು ದಿನಗಳ ಆರಾಧನಾ ಉತ್ಸವಕ್ಕೆ ತೆರೆ ಎಳೆಯಲಾಯಿತು.</p>.<p>ಮೋಹನರಾವ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ ಹಾಗೂ ವಾಮನರಾವ ದೇಶಪಾಂಡೆ ಅನ್ನ ಸಂತರ್ಪಣೆ ಸೇವೆ ಮಾಡಿದರು.</p>.<p>ಜಯ ಸತ್ಯಪ್ರಮೋದ ಸೇವಾ ಸಂಘದ ಕಾರ್ಯಕರ್ತರು, ಪ್ರಮೋದಿನ ಮಹಿಳಾ ಭಜನಾ ಮಂಡಳಿಯ ಕಾರ್ಯಕರ್ತರು ಹಾಗೂ ಸತ್ಯಪ್ರಮೋದ ಯುವ ಸೇನೆಯ ಪದಾಧಿಕಾರಿಗಳು ಸೇರಿದಂತೆ ಹಲವು ಭಕ್ತರು ಆರಾಧನೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>