<p><strong>ಸುರಪುರ</strong>: ಬಡತನ, ತಂದೆಯ ಅನಾರೋಗ್ಯ, ವಲಸೆ, ಗಾರೆ ಕೆಲಸ, ಕಲಿತಿದ್ದು ಕೇವಲ ಪಿಯುಸಿ; ಆದರೂ ಈತ ಅಪ್ರತಿಮ ಕಲಾವಿದ. </p>.<p>ತಾಲ್ಲೂಕಿನ ಚಿಕ್ಕನಳ್ಳಿ ಗ್ರಾಮದ ಮಹೇಶ ಯಾದವ ಪೆನ್ಸಿಲ್ ಕಲಾವಿದನಾಗಿ ಬೆಳೆದ ಕಥೆಯೇ ರೋಚಕ. </p>.<p>ಮಹೇಶ ಅವರ ತಂದೆ ಶೇಖಪ್ಪ ಕೂಲಿ ಕಾರ್ಮಿಕ. ಹಾಗೂ ಹೀಗೂ ಮಗನನ್ನು ಪಿಯುಸಿವರೆಗೆ ಕಲಿಸಿದರು. ಮುಂದೆ ಓದಿಸುವುದು ಆಗುವುದಿಲ್ಲ. ನನಗೂ ದುಡಿಯಲು ಆರೋಗ್ಯ ನೆರವಿಗೆ ಬರುತ್ತಿಲ್ಲ ಅಂದಾಗ, ಮಹೇಶ ಮುಖ ಮಾಡಿದ್ದು ಬೆಂಗಳೂರಿನತ್ತ.</p>.<p>ಮೊದಲು ಗಾರೆ ಕೆಲಸ ಮಾಡಿದ ಮಹೇಶನಿಗೆ ಅದು ಸರಿ ಕಾಣದಂತಾಗಿ ಕಾರ್ಖಾನೆಯಲ್ಲಿ ಕೆಲಸಕ್ಕೆ ಹುಡುಕಾಟ ನಡೆಸಿದ. ಕೊನೆಗೂ ಒಂದು ಕಂಪನಿಯಲ್ಲಿ ತಿಂಗಳಿಗೆ ₹15 ಸಾವಿರದ ವೇತನದ ಕೆಲಸ ದೊರೆಯುತ್ತದೆ. </p>.<p>ಮಹಾನಗರ ಬೆಂಗಳೂರಿನಲ್ಲಿ ಈ ಸಂಬಳ ಏತಕ್ಕೂ ಸಾಲುವುದಿಲ್ಲ ಎಂಬ ಕೊರಗು. ಅಷ್ಟು ಇಷ್ಟು ಹಣ ಉಳಿಸಿ ಹಣ ಹೆತ್ತವರಿಗೆ ಕಳಿಸುತ್ತಿರುವ ನೆಮ್ಮದಿ ಇದ್ದರೂ ಮುಖದಲ್ಲಿ ನಗು ಇರಲಿಲ್ಲ.</p>.<p>ಇದನ್ನು ಗಮನಿಸಿದ ಸಹೋದ್ಯೋಗಿ ಶಾರದಾ ಅವರು, ‘ಚಿಂತೆ ಮರೆಯಲು ಇಷ್ಟವಾದ ಕಲೆಯಲ್ಲಿ ತೊಡಗಿಕೋ’ ಎಂದು ಮಹೇಶನಿಗೆ ಸಲಹೆ ನೀಡಿದರು. ಪೆನ್ಸಿಲ್ ಕಲೆಯಲ್ಲಿ ಪರಿಣಿತೆಯಾದ ಶಾರದಾ ಅವರನ್ನೇ ಮಹೇಶ ಗುರುವಾಗಿ ಸ್ವೀಕರಿಸಿ ಕಳೆದ ಒಂದು ವರ್ಷದಿಂದ ಈ ಕಲೆಯಲ್ಲಿ ನಿಷ್ಠೆಯಿಂದ ತೊಡಗಿಕೊಂಡು ಯಶ ಸಾಧಿಸಿದ್ದಾರೆ. </p>.<p>ಮಹೇಶ ನಿತ್ಯ ಚಿತ್ರ ಬಿಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬರುವ ಅಭಿಪ್ರಾಯಗಳಿಂದ ಖುಷಿ ಪಡುತ್ತಾರೆ. ಇದರಿಂದ ಮತ್ತಷ್ಟು ಚಿತ್ರ ಬಿಡಿಸುವ ಹುಮ್ಮಸ್ಸು ಬರುತ್ತಿದೆ. ಈಗ ಮಹೇಶ ಅವರು ಲವಲವಿಕೆಯಿಂದ ಇದ್ದಾರೆ. ಕೆಲಸದಲ್ಲೂ ಉತ್ಸಾಹ ಇದೆ. ಇದರಿಂದ ವೇತನದಲ್ಲೂ ಏರಿಕೆಯಾಗಿದೆ.<br> ಈಗಾಗಲೇ 500ಕ್ಕೂ ಹೆಚ್ಚು ಚಿತ್ರ ಬಿಡಿಸಿದ್ದಾರೆ. ದೇವರು, ಸ್ವಾತಂತ್ರ್ಯ ಹೋರಾಟಗಾರರು, ದಾರ್ಶನಿಕರು, ರಾಜಕೀಯ ಮುಖಂಡರು, ಸಿನಿಮಾ ನಟರ ಚಿತ್ರಗಳು ಸೇರಿವೆ. ಐದರಿಂದ ಹತ್ತು ನಿಮಿಷದಲ್ಲಿ ಒಂದು ಚಿತ್ರಬಿಡಿಸುವ ಚಾತುರ್ಯ ರೂಢಿಸಿಕೊಂಡಿದ್ದಾರೆ. </p>.<p>ಸಾಮಾಜಿಕ ಜಾಲತಾಣದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಮಹೇಶ ಈ ಕಲೆಯಲ್ಲಿ ಜನಪ್ರಿಯರಾಗುತ್ತಿದ್ದಾರೆ. ತಾಲ್ಲೂಕಿನ ಅನೇಕರು ತಮ್ಮ, ತಮ್ಮ ಮಕ್ಕಳ ಚಿತ್ರಗಳನ್ನು ಬಿಡಿಸಿಕೊಡಲು ಹೇಳುತ್ತಿದ್ದಾರೆ.</p>.<p>ಅಂದವಾದ ಚಿತ್ರ ಬಿಡಿಸಿ ಅದಕ್ಕೆ ಫ್ರೇಮ್ ಹಾಕಿಸಿ ಉಡುಗೊರೆ ಕೊಡುವ ಸಂಪ್ರದಾಯ ಈಗ ಬೆಳೆಯುತ್ತಿದೆ. ಸುರಪುರದಲ್ಲಿ ಚಿತ್ರಕಲೆಯ ಸ್ಟುಡಿಯೋ ಆರಂಭಿಸುವ ಕನಸು ಮಹೇಶ ಅವರಿಗೆ ಇದೆ. ಅವರಿಗೆ ಪ್ರೋತ್ಸಾಹ ಮತ್ತು ಹಣದ ನೆರವಿನ ಅವಶ್ಯಕತೆ ಇದೆ.</p>.<p>ಹಣ ತರುತ್ತಿರುವ ಕಲೆ: ಚಿತ್ರಗಳನ್ನು ಬಿಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದರಿಂದ ಹಲವರು ಅಭಿಪ್ರಾಯ ಹಾಕುತ್ತಾರೆ. ಅಭಿಪ್ರಾಯ ಹಾಕಿದವರ ಚಿತ್ರವನ್ನು ಬಿಡಿಸಿ ಮಹೇಶ ಅವರಿಗೆ ಮರಳಿ ಹಾಕುತ್ತಾರೆ. ಕೆಲವರು ಖುಷಿ ಪಟ್ಟು ₹ 500 ರಿಂದ ಒಂದು ಸಾವಿರದÀವರೆಗೆ ಹಣ ಕಳುಹಿಸಿದ ಉದಾಹರಣೆ ಇವೆ. ಇದೂ ಮಹೇಶ ಅವರಿಗೆ ಸಾಕಷ್ಟು ನೆರವಾಗಿದೆ. ಅಂದಹಾಗೆ ಹಣದ ನಿರೀಕ್ಷೆ ಮಾಡಿ ಚಿತ್ರ ಕಳಿಸುವ ಪರಿಪಾಠ ಮಹೇಶ ಅವರಿಗೆ ಇಲ್ಲ.</p>.<div><blockquote>ಪ್ರತಿ ಮನುಷ್ಯನಿಗೆ ವೃತ್ತಿಯ ಜತೆ ಯಾವುದಾದರೂ ಒಂದು ಕಲೆಯ ಪ್ರವೃತ್ತಿ ಇರಲೇಬೇಕು. ಇದು ಆತನ ವ್ಯಕ್ತಿತ್ವ ರೂಪಿಸುತ್ತದೆ. ಇದಕ್ಕೆ ನಾನೇ ನಿದರ್ಶನ </blockquote><span class="attribution">ಮಹೇಶ ಯಾದವ ಪೆನ್ಸಿಲ್ ಕಲಾವಿದ</span></div>.<div><blockquote>ಅಲ್ಪ ಸಮಯದಲ್ಲಿ ಮಹೇಶ ಅನನ್ಯ ಪೆನ್ಸಿಲ್ ಕಾಲವಿದನಾಗಿ ಬೆಳೆದಿದ್ದು ಅನುಕರಣೀಯ. ಈ ಕಲಾವಿದನಿಗೆ ನಮ್ಮ ಗೆಳೆಯರ ಬಳಗದಿಂದ ಎಲ್ಲ ನೆರವು ನೀಡಲಾಗುವುದು </blockquote><span class="attribution">ಕನಕಪ್ಪ ವಾಗಣಗೇರಿ ಸಾಹಿತಿ</span></div>.<h2> <strong>ಏನಿದು ಪೆನ್ಸಿಲ್ ಕಲೆ?</strong> </h2><p>ಗ್ರಾಫೈಟ್ ಉಪಕರಣಗಳನ್ನು ಬಳಸಿ ರೇಖಾ ಚಿತ್ರಗಳನ್ನು ಬಿಡಿಸುವುದಕ್ಕೆ ಪೆನ್ಸಿಲ್ ಕಲೆ ಎನ್ನುತ್ತಾರೆ. 16ನೇ ಶತಮಾನದಲ್ಲಿ ಗ್ರಾಫೈಟ್ ಗಣಿಗಾರಿಕೆ ಆರಂಭವಾದ ನಂತರ ಕಲಾವಿದರು ಚಿತ್ರಕಲೆಯಲ್ಲಿ ಗ್ರಾಫೈಟ್ ಬಳಸಲು ಆರಂಭಿಸಿದರು. 19ನೇ ಶತಮಾನದಲ್ಲಿ ಫ್ರಾನ್ಸ್ ದೇಶದ ಎಡ್ಗರ್ ಡೇಗಿಸ್ ಈ ಕಲೆಯಲ್ಲಿ ಅದ್ಭುತ ಸಾಧನೆ ಮಾಡಿದರು. ಅವರಿಂದ ಈ ಕಲೆ ಪ್ರವರ್ಧಮಾನಕ್ಕೆ ಬಂತು. ಪರಿಪೂರ್ಣ ಸ್ಕೆಂಚಿಂಗ್ ಈ ಕಲೆಯ ಜೀವಾಳ. ಈಗ ಪೆನ್ಸಿಲ್ನೊಂದಿಗೆ ಬ್ಲೆಂಡಿಂಗ್ ಸ್ಟಾಂಪ್ಗಳು ಎರೇಜರ್ ಶೀಲ್ಡ್ಗಳು ಗ್ರಾಫೈಟ್ ಸ್ಟಿಕ್ಗಳು ಆಯ್ದ ಬಣ್ಣಗಳನ್ನು ಬಳಸಲಾಗುತ್ತದೆ. ಈ ಕಲೆ ಶೇಡಿಂಗ್ ಮತ್ತು ದೃಶ್ಯ ಕಲಾ ಅಭಿವ್ಯಕ್ತಿಯ ಒಂದು ವಿಧಾನ. ಈ ಕಲೆ ಈಗ ನಮ್ಮ ದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ಬಡತನ, ತಂದೆಯ ಅನಾರೋಗ್ಯ, ವಲಸೆ, ಗಾರೆ ಕೆಲಸ, ಕಲಿತಿದ್ದು ಕೇವಲ ಪಿಯುಸಿ; ಆದರೂ ಈತ ಅಪ್ರತಿಮ ಕಲಾವಿದ. </p>.<p>ತಾಲ್ಲೂಕಿನ ಚಿಕ್ಕನಳ್ಳಿ ಗ್ರಾಮದ ಮಹೇಶ ಯಾದವ ಪೆನ್ಸಿಲ್ ಕಲಾವಿದನಾಗಿ ಬೆಳೆದ ಕಥೆಯೇ ರೋಚಕ. </p>.<p>ಮಹೇಶ ಅವರ ತಂದೆ ಶೇಖಪ್ಪ ಕೂಲಿ ಕಾರ್ಮಿಕ. ಹಾಗೂ ಹೀಗೂ ಮಗನನ್ನು ಪಿಯುಸಿವರೆಗೆ ಕಲಿಸಿದರು. ಮುಂದೆ ಓದಿಸುವುದು ಆಗುವುದಿಲ್ಲ. ನನಗೂ ದುಡಿಯಲು ಆರೋಗ್ಯ ನೆರವಿಗೆ ಬರುತ್ತಿಲ್ಲ ಅಂದಾಗ, ಮಹೇಶ ಮುಖ ಮಾಡಿದ್ದು ಬೆಂಗಳೂರಿನತ್ತ.</p>.<p>ಮೊದಲು ಗಾರೆ ಕೆಲಸ ಮಾಡಿದ ಮಹೇಶನಿಗೆ ಅದು ಸರಿ ಕಾಣದಂತಾಗಿ ಕಾರ್ಖಾನೆಯಲ್ಲಿ ಕೆಲಸಕ್ಕೆ ಹುಡುಕಾಟ ನಡೆಸಿದ. ಕೊನೆಗೂ ಒಂದು ಕಂಪನಿಯಲ್ಲಿ ತಿಂಗಳಿಗೆ ₹15 ಸಾವಿರದ ವೇತನದ ಕೆಲಸ ದೊರೆಯುತ್ತದೆ. </p>.<p>ಮಹಾನಗರ ಬೆಂಗಳೂರಿನಲ್ಲಿ ಈ ಸಂಬಳ ಏತಕ್ಕೂ ಸಾಲುವುದಿಲ್ಲ ಎಂಬ ಕೊರಗು. ಅಷ್ಟು ಇಷ್ಟು ಹಣ ಉಳಿಸಿ ಹಣ ಹೆತ್ತವರಿಗೆ ಕಳಿಸುತ್ತಿರುವ ನೆಮ್ಮದಿ ಇದ್ದರೂ ಮುಖದಲ್ಲಿ ನಗು ಇರಲಿಲ್ಲ.</p>.<p>ಇದನ್ನು ಗಮನಿಸಿದ ಸಹೋದ್ಯೋಗಿ ಶಾರದಾ ಅವರು, ‘ಚಿಂತೆ ಮರೆಯಲು ಇಷ್ಟವಾದ ಕಲೆಯಲ್ಲಿ ತೊಡಗಿಕೋ’ ಎಂದು ಮಹೇಶನಿಗೆ ಸಲಹೆ ನೀಡಿದರು. ಪೆನ್ಸಿಲ್ ಕಲೆಯಲ್ಲಿ ಪರಿಣಿತೆಯಾದ ಶಾರದಾ ಅವರನ್ನೇ ಮಹೇಶ ಗುರುವಾಗಿ ಸ್ವೀಕರಿಸಿ ಕಳೆದ ಒಂದು ವರ್ಷದಿಂದ ಈ ಕಲೆಯಲ್ಲಿ ನಿಷ್ಠೆಯಿಂದ ತೊಡಗಿಕೊಂಡು ಯಶ ಸಾಧಿಸಿದ್ದಾರೆ. </p>.<p>ಮಹೇಶ ನಿತ್ಯ ಚಿತ್ರ ಬಿಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬರುವ ಅಭಿಪ್ರಾಯಗಳಿಂದ ಖುಷಿ ಪಡುತ್ತಾರೆ. ಇದರಿಂದ ಮತ್ತಷ್ಟು ಚಿತ್ರ ಬಿಡಿಸುವ ಹುಮ್ಮಸ್ಸು ಬರುತ್ತಿದೆ. ಈಗ ಮಹೇಶ ಅವರು ಲವಲವಿಕೆಯಿಂದ ಇದ್ದಾರೆ. ಕೆಲಸದಲ್ಲೂ ಉತ್ಸಾಹ ಇದೆ. ಇದರಿಂದ ವೇತನದಲ್ಲೂ ಏರಿಕೆಯಾಗಿದೆ.<br> ಈಗಾಗಲೇ 500ಕ್ಕೂ ಹೆಚ್ಚು ಚಿತ್ರ ಬಿಡಿಸಿದ್ದಾರೆ. ದೇವರು, ಸ್ವಾತಂತ್ರ್ಯ ಹೋರಾಟಗಾರರು, ದಾರ್ಶನಿಕರು, ರಾಜಕೀಯ ಮುಖಂಡರು, ಸಿನಿಮಾ ನಟರ ಚಿತ್ರಗಳು ಸೇರಿವೆ. ಐದರಿಂದ ಹತ್ತು ನಿಮಿಷದಲ್ಲಿ ಒಂದು ಚಿತ್ರಬಿಡಿಸುವ ಚಾತುರ್ಯ ರೂಢಿಸಿಕೊಂಡಿದ್ದಾರೆ. </p>.<p>ಸಾಮಾಜಿಕ ಜಾಲತಾಣದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಮಹೇಶ ಈ ಕಲೆಯಲ್ಲಿ ಜನಪ್ರಿಯರಾಗುತ್ತಿದ್ದಾರೆ. ತಾಲ್ಲೂಕಿನ ಅನೇಕರು ತಮ್ಮ, ತಮ್ಮ ಮಕ್ಕಳ ಚಿತ್ರಗಳನ್ನು ಬಿಡಿಸಿಕೊಡಲು ಹೇಳುತ್ತಿದ್ದಾರೆ.</p>.<p>ಅಂದವಾದ ಚಿತ್ರ ಬಿಡಿಸಿ ಅದಕ್ಕೆ ಫ್ರೇಮ್ ಹಾಕಿಸಿ ಉಡುಗೊರೆ ಕೊಡುವ ಸಂಪ್ರದಾಯ ಈಗ ಬೆಳೆಯುತ್ತಿದೆ. ಸುರಪುರದಲ್ಲಿ ಚಿತ್ರಕಲೆಯ ಸ್ಟುಡಿಯೋ ಆರಂಭಿಸುವ ಕನಸು ಮಹೇಶ ಅವರಿಗೆ ಇದೆ. ಅವರಿಗೆ ಪ್ರೋತ್ಸಾಹ ಮತ್ತು ಹಣದ ನೆರವಿನ ಅವಶ್ಯಕತೆ ಇದೆ.</p>.<p>ಹಣ ತರುತ್ತಿರುವ ಕಲೆ: ಚಿತ್ರಗಳನ್ನು ಬಿಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದರಿಂದ ಹಲವರು ಅಭಿಪ್ರಾಯ ಹಾಕುತ್ತಾರೆ. ಅಭಿಪ್ರಾಯ ಹಾಕಿದವರ ಚಿತ್ರವನ್ನು ಬಿಡಿಸಿ ಮಹೇಶ ಅವರಿಗೆ ಮರಳಿ ಹಾಕುತ್ತಾರೆ. ಕೆಲವರು ಖುಷಿ ಪಟ್ಟು ₹ 500 ರಿಂದ ಒಂದು ಸಾವಿರದÀವರೆಗೆ ಹಣ ಕಳುಹಿಸಿದ ಉದಾಹರಣೆ ಇವೆ. ಇದೂ ಮಹೇಶ ಅವರಿಗೆ ಸಾಕಷ್ಟು ನೆರವಾಗಿದೆ. ಅಂದಹಾಗೆ ಹಣದ ನಿರೀಕ್ಷೆ ಮಾಡಿ ಚಿತ್ರ ಕಳಿಸುವ ಪರಿಪಾಠ ಮಹೇಶ ಅವರಿಗೆ ಇಲ್ಲ.</p>.<div><blockquote>ಪ್ರತಿ ಮನುಷ್ಯನಿಗೆ ವೃತ್ತಿಯ ಜತೆ ಯಾವುದಾದರೂ ಒಂದು ಕಲೆಯ ಪ್ರವೃತ್ತಿ ಇರಲೇಬೇಕು. ಇದು ಆತನ ವ್ಯಕ್ತಿತ್ವ ರೂಪಿಸುತ್ತದೆ. ಇದಕ್ಕೆ ನಾನೇ ನಿದರ್ಶನ </blockquote><span class="attribution">ಮಹೇಶ ಯಾದವ ಪೆನ್ಸಿಲ್ ಕಲಾವಿದ</span></div>.<div><blockquote>ಅಲ್ಪ ಸಮಯದಲ್ಲಿ ಮಹೇಶ ಅನನ್ಯ ಪೆನ್ಸಿಲ್ ಕಾಲವಿದನಾಗಿ ಬೆಳೆದಿದ್ದು ಅನುಕರಣೀಯ. ಈ ಕಲಾವಿದನಿಗೆ ನಮ್ಮ ಗೆಳೆಯರ ಬಳಗದಿಂದ ಎಲ್ಲ ನೆರವು ನೀಡಲಾಗುವುದು </blockquote><span class="attribution">ಕನಕಪ್ಪ ವಾಗಣಗೇರಿ ಸಾಹಿತಿ</span></div>.<h2> <strong>ಏನಿದು ಪೆನ್ಸಿಲ್ ಕಲೆ?</strong> </h2><p>ಗ್ರಾಫೈಟ್ ಉಪಕರಣಗಳನ್ನು ಬಳಸಿ ರೇಖಾ ಚಿತ್ರಗಳನ್ನು ಬಿಡಿಸುವುದಕ್ಕೆ ಪೆನ್ಸಿಲ್ ಕಲೆ ಎನ್ನುತ್ತಾರೆ. 16ನೇ ಶತಮಾನದಲ್ಲಿ ಗ್ರಾಫೈಟ್ ಗಣಿಗಾರಿಕೆ ಆರಂಭವಾದ ನಂತರ ಕಲಾವಿದರು ಚಿತ್ರಕಲೆಯಲ್ಲಿ ಗ್ರಾಫೈಟ್ ಬಳಸಲು ಆರಂಭಿಸಿದರು. 19ನೇ ಶತಮಾನದಲ್ಲಿ ಫ್ರಾನ್ಸ್ ದೇಶದ ಎಡ್ಗರ್ ಡೇಗಿಸ್ ಈ ಕಲೆಯಲ್ಲಿ ಅದ್ಭುತ ಸಾಧನೆ ಮಾಡಿದರು. ಅವರಿಂದ ಈ ಕಲೆ ಪ್ರವರ್ಧಮಾನಕ್ಕೆ ಬಂತು. ಪರಿಪೂರ್ಣ ಸ್ಕೆಂಚಿಂಗ್ ಈ ಕಲೆಯ ಜೀವಾಳ. ಈಗ ಪೆನ್ಸಿಲ್ನೊಂದಿಗೆ ಬ್ಲೆಂಡಿಂಗ್ ಸ್ಟಾಂಪ್ಗಳು ಎರೇಜರ್ ಶೀಲ್ಡ್ಗಳು ಗ್ರಾಫೈಟ್ ಸ್ಟಿಕ್ಗಳು ಆಯ್ದ ಬಣ್ಣಗಳನ್ನು ಬಳಸಲಾಗುತ್ತದೆ. ಈ ಕಲೆ ಶೇಡಿಂಗ್ ಮತ್ತು ದೃಶ್ಯ ಕಲಾ ಅಭಿವ್ಯಕ್ತಿಯ ಒಂದು ವಿಧಾನ. ಈ ಕಲೆ ಈಗ ನಮ್ಮ ದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>