<p><strong>ಯಾದಗಿರಿ</strong>: ಗಣೇಶ ಚತುರ್ಥಿ ತರಕಾರಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ತರಕಾರಿ ಬೆಲೆ ಕನಿಷ್ಠ ₹10ರಿಂದ ₹20 ಹೆಚ್ಚಳವಾಗಿದ್ದು, ಗ್ರಾಹಕರಿಗೆ ಹೊರೆಯಾಗಿದೆ.</p>.<p>ಟೊಮೆಟೊ, ಈರುಳ್ಳಿ, ಬದನೆಕಾಯಿ ದರದಲ್ಲಿ ಹೆಚ್ಚಳವಾಗಿದೆ. ಕಳೆದ ವಾರ ಬದನೆಕಾಯಿ ಬೆಲೆ ₹80 ಕೆ.ಜಿ ಇತ್ತು. ಈ ವಾರ ₹20 ಹೆಚ್ಚಳವಾಗಿ ₹100ಕ್ಕೆ ಕೆ.ಜಿ ಮಾರಾಟವಾಗುತ್ತಿದೆ. ಅದರಂತೆ ಈರುಳ್ಳಿ ಬೆಲೆಯೂ ₹20 ಹೆಚ್ಚಳವಾಗಿ ₹40ಕ್ಕೆ ಕೆ.ಜಿ ಮಾರಾಟವಾಗುತ್ತಿದೆ.ಮೆಣಸಿನಕಾಯಿಕಳೆದ ವಾರ ₹60ಇತ್ತು. ಈ ವಾರ ₹80 ಆಗಿ ₹20 ಹೆಚ್ಚಳವಾಗಿದೆ.</p>.<p>‘ಟೊಮೆಟೊ ಒಂದು ಕ್ಯಾನ್ ಬೆಲೆ ₹900 ಇದೆ. ಕಳೆದ ವಾರ ₹800 ದರವಿತ್ತು. ಅಲ್ಲದೆಈರುಳ್ಳಿ 40 ಕೆ.ಜಿಯ ಒಂದು ಚೀಲ ₹1,000 ಇದೆ. ಕಳೆದ ವಾರ ₹700 ಇತ್ತು. ಹೀಗಾಗಿ ನಾವು ದರ ಹೆಚ್ಚಿಸಿದ್ದೇವೆ’ ಎಂದು ತರಕಾರಿ ವ್ಯಾಪಾರಿ ಅಂಜಮ್ಮ ಮಂಜುಳಕರ್ ಹೇಳುತ್ತಾರೆ.</p>.<p>ಶ್ರಾವಣ ಮಾಸ ಮುಗಿಯಿತು. ತರಕಾರಿ ಬೆಲೆ ಇಳಿಕೆಯಾಗುತ್ತದೆ ಎಂದು ನಿರೀಕ್ಷಿಸಿದವರಿಗೆ ಗಣೇಶ ಹಬ್ಬ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ.</p>.<p>ಈ ಬಾರಿ ಬದನೆಕಾಯಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹುಳು ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಮಾರುಕಟ್ಟೆಗೆ ಬರುವ ಪ್ರಮಾಣವೂ ಕಡಿಮೆ ಇದೆ. ಹೀಗಾಗಿ ದರದಲ್ಲೂ ಹೆಚ್ಚಳವಾಗಿದೆ. ಜುಲೈ ತಿಂಗಳಲ್ಲಿ ಸುರಿದ ಮಳೆಯೇ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುವುದು ವ್ಯಾಪಾರಿಗಳ ಮಾತಾಗಿದೆ.</p>.<p>ಬೀಟ್ ರೂಟ್,ಹೀರೆಕಾಯಿ,ಹಾಗಲಕಾಯಿ,ತೊಂಡೆಕಾಯಿ,ಚವಳೆಕಾಯಿ,ಬೀನ್ಸ್,ಗಜ್ಜರಿಇನ್ನಿತರ ತರಕಾರಿಗಳು ಸ್ಥಿರ ದರ ಕಾಪಾಡಿಕೊಂಡಿವೆ.</p>.<p class="Subhead"><strong>ಏರುಗತಿಯಲ್ಲಿ ಸೊಪ್ಪುಗಳ ಬೆಲೆ:</strong> ಕಳೆದ ವಾರ ಸೊಪ್ಪುಗಳ ಅಭಾವ ಎದುರಾಗಿತ್ತು. ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹೆಚ್ಚಿನ ದರವಿದೆ.</p>.<p class="Subhead">ಪಾಲಕ್₹10ಗೆ ಒಂದು ಕಟ್ಟು,ಮೆಂತ್ಯೆ ₹20 ಗೆ ಒಂದು ಕಟ್ಟು, ಪುಂಡಿಪಲ್ಯೆ₹20ಕ್ಕೆ 3 ಕಟ್ಟು ಮಾರಾಟ ಮಾಡಲಾಗುತ್ತಿದೆ.ರಾಜಗಿರಿ ಸೊಪ್ಪು10ಕ್ಕೆ 1,ಸಬ್ಬಸಿಗಿ ಒಂದು ಕಟ್ಟು ₹10,ಕೋತಂಬರಿ ಒಂದು ಕಟ್ಟು ಕಳೆದ ವಾರ ₹30 ಇತ್ತು. ಈ ವಾರ ₹20 ಹೆಚ್ಚಳವಾಗಿ₹50ಗೆ ಮಾರಾಟವಾಗುತ್ತಿದೆ.ಈರುಳ್ಳಿ ಸೊಪ್ಪು ಕೇಜಿಗೆ ₹60 ಇದೆ.ನುಗ್ಗೆಕಾಯಿದರ ಕಡಿಮೆಯಾಗಿದ್ದು ₹80ಕ್ಕೆ ಕೆ.ಜಿ ಮಾರಾಟವಾಗುತ್ತಿದೆ.</p>.<p class="Subhead"><strong>ಹಣ್ಣುಗಳ ಬೆಲೆ: </strong>ಗಣೇಶ ಚತುರ್ಥಿಗೆ ಹಣ್ಣುಗಳ ಬೆಲೆ ಏರಿಕೆಯಾಗಿದೆ. ಮಧ್ಯಮ ಗಾತ್ರದ ಸೇಬು ಹಣ್ಣು ₹100ಕ್ಕೆ ಮೂರು, ಮೊಸಂಬಿ ₹20ಕ್ಕೆ ಒಂದು, ದಾಳಿಂಬೆ ₹10ಕ್ಕೆ ಒಂದು, ಬಾಳೆ ಡಜನ್ ₹40ಗೆ ಮಾರಾಟವಾಗುತ್ತಿದೆ.</p>.<p class="Subhead">***</p>.<p class="Subhead"><strong>ಅವರೆಕಾಯಿ, ಚವಳೆಕಾಯಿ, ಬೆಂಡೆಕಾಯಿಗೆ ಕಡಿಮೆ ಬೆಲೆ ಇದೆ. ವಾರಕೊಮ್ಮೆ ದರ ಏರಿಳಿಕೆಯಾಗುತ್ತಿದೆ. ಚೌತಿಗೆ ಬೆಲೆ ಹೆಚ್ಚಳವಾಗಿದೆ</strong></p>.<p class="Subhead"><strong>-ಪದ್ಮಾ ಅಂಜನೇಯ, ತರಕಾರಿ ವ್ಯಾಪಾರಿ</strong></p>.<p class="Subhead">***</p>.<p class="Subhead"><strong>ಮಳೆಗೆ ತರಕಾರಿ ಸೇರಿದಂತೆ ನಮ್ಮ ಬೆಳೆ ಎಲ್ಲ ನಾಶವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ</strong></p>.<p class="Subhead"><strong>-ಬೋರೆಡ್ಡಿ ಮುದಿಗೌಡ, ಗ್ರಾಹಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಗಣೇಶ ಚತುರ್ಥಿ ತರಕಾರಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ತರಕಾರಿ ಬೆಲೆ ಕನಿಷ್ಠ ₹10ರಿಂದ ₹20 ಹೆಚ್ಚಳವಾಗಿದ್ದು, ಗ್ರಾಹಕರಿಗೆ ಹೊರೆಯಾಗಿದೆ.</p>.<p>ಟೊಮೆಟೊ, ಈರುಳ್ಳಿ, ಬದನೆಕಾಯಿ ದರದಲ್ಲಿ ಹೆಚ್ಚಳವಾಗಿದೆ. ಕಳೆದ ವಾರ ಬದನೆಕಾಯಿ ಬೆಲೆ ₹80 ಕೆ.ಜಿ ಇತ್ತು. ಈ ವಾರ ₹20 ಹೆಚ್ಚಳವಾಗಿ ₹100ಕ್ಕೆ ಕೆ.ಜಿ ಮಾರಾಟವಾಗುತ್ತಿದೆ. ಅದರಂತೆ ಈರುಳ್ಳಿ ಬೆಲೆಯೂ ₹20 ಹೆಚ್ಚಳವಾಗಿ ₹40ಕ್ಕೆ ಕೆ.ಜಿ ಮಾರಾಟವಾಗುತ್ತಿದೆ.ಮೆಣಸಿನಕಾಯಿಕಳೆದ ವಾರ ₹60ಇತ್ತು. ಈ ವಾರ ₹80 ಆಗಿ ₹20 ಹೆಚ್ಚಳವಾಗಿದೆ.</p>.<p>‘ಟೊಮೆಟೊ ಒಂದು ಕ್ಯಾನ್ ಬೆಲೆ ₹900 ಇದೆ. ಕಳೆದ ವಾರ ₹800 ದರವಿತ್ತು. ಅಲ್ಲದೆಈರುಳ್ಳಿ 40 ಕೆ.ಜಿಯ ಒಂದು ಚೀಲ ₹1,000 ಇದೆ. ಕಳೆದ ವಾರ ₹700 ಇತ್ತು. ಹೀಗಾಗಿ ನಾವು ದರ ಹೆಚ್ಚಿಸಿದ್ದೇವೆ’ ಎಂದು ತರಕಾರಿ ವ್ಯಾಪಾರಿ ಅಂಜಮ್ಮ ಮಂಜುಳಕರ್ ಹೇಳುತ್ತಾರೆ.</p>.<p>ಶ್ರಾವಣ ಮಾಸ ಮುಗಿಯಿತು. ತರಕಾರಿ ಬೆಲೆ ಇಳಿಕೆಯಾಗುತ್ತದೆ ಎಂದು ನಿರೀಕ್ಷಿಸಿದವರಿಗೆ ಗಣೇಶ ಹಬ್ಬ ಬೆಲೆ ಏರಿಕೆ ಬಿಸಿ ಮುಟ್ಟಿಸಿದೆ.</p>.<p>ಈ ಬಾರಿ ಬದನೆಕಾಯಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹುಳು ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಮಾರುಕಟ್ಟೆಗೆ ಬರುವ ಪ್ರಮಾಣವೂ ಕಡಿಮೆ ಇದೆ. ಹೀಗಾಗಿ ದರದಲ್ಲೂ ಹೆಚ್ಚಳವಾಗಿದೆ. ಜುಲೈ ತಿಂಗಳಲ್ಲಿ ಸುರಿದ ಮಳೆಯೇ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುವುದು ವ್ಯಾಪಾರಿಗಳ ಮಾತಾಗಿದೆ.</p>.<p>ಬೀಟ್ ರೂಟ್,ಹೀರೆಕಾಯಿ,ಹಾಗಲಕಾಯಿ,ತೊಂಡೆಕಾಯಿ,ಚವಳೆಕಾಯಿ,ಬೀನ್ಸ್,ಗಜ್ಜರಿಇನ್ನಿತರ ತರಕಾರಿಗಳು ಸ್ಥಿರ ದರ ಕಾಪಾಡಿಕೊಂಡಿವೆ.</p>.<p class="Subhead"><strong>ಏರುಗತಿಯಲ್ಲಿ ಸೊಪ್ಪುಗಳ ಬೆಲೆ:</strong> ಕಳೆದ ವಾರ ಸೊಪ್ಪುಗಳ ಅಭಾವ ಎದುರಾಗಿತ್ತು. ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹೆಚ್ಚಿನ ದರವಿದೆ.</p>.<p class="Subhead">ಪಾಲಕ್₹10ಗೆ ಒಂದು ಕಟ್ಟು,ಮೆಂತ್ಯೆ ₹20 ಗೆ ಒಂದು ಕಟ್ಟು, ಪುಂಡಿಪಲ್ಯೆ₹20ಕ್ಕೆ 3 ಕಟ್ಟು ಮಾರಾಟ ಮಾಡಲಾಗುತ್ತಿದೆ.ರಾಜಗಿರಿ ಸೊಪ್ಪು10ಕ್ಕೆ 1,ಸಬ್ಬಸಿಗಿ ಒಂದು ಕಟ್ಟು ₹10,ಕೋತಂಬರಿ ಒಂದು ಕಟ್ಟು ಕಳೆದ ವಾರ ₹30 ಇತ್ತು. ಈ ವಾರ ₹20 ಹೆಚ್ಚಳವಾಗಿ₹50ಗೆ ಮಾರಾಟವಾಗುತ್ತಿದೆ.ಈರುಳ್ಳಿ ಸೊಪ್ಪು ಕೇಜಿಗೆ ₹60 ಇದೆ.ನುಗ್ಗೆಕಾಯಿದರ ಕಡಿಮೆಯಾಗಿದ್ದು ₹80ಕ್ಕೆ ಕೆ.ಜಿ ಮಾರಾಟವಾಗುತ್ತಿದೆ.</p>.<p class="Subhead"><strong>ಹಣ್ಣುಗಳ ಬೆಲೆ: </strong>ಗಣೇಶ ಚತುರ್ಥಿಗೆ ಹಣ್ಣುಗಳ ಬೆಲೆ ಏರಿಕೆಯಾಗಿದೆ. ಮಧ್ಯಮ ಗಾತ್ರದ ಸೇಬು ಹಣ್ಣು ₹100ಕ್ಕೆ ಮೂರು, ಮೊಸಂಬಿ ₹20ಕ್ಕೆ ಒಂದು, ದಾಳಿಂಬೆ ₹10ಕ್ಕೆ ಒಂದು, ಬಾಳೆ ಡಜನ್ ₹40ಗೆ ಮಾರಾಟವಾಗುತ್ತಿದೆ.</p>.<p class="Subhead">***</p>.<p class="Subhead"><strong>ಅವರೆಕಾಯಿ, ಚವಳೆಕಾಯಿ, ಬೆಂಡೆಕಾಯಿಗೆ ಕಡಿಮೆ ಬೆಲೆ ಇದೆ. ವಾರಕೊಮ್ಮೆ ದರ ಏರಿಳಿಕೆಯಾಗುತ್ತಿದೆ. ಚೌತಿಗೆ ಬೆಲೆ ಹೆಚ್ಚಳವಾಗಿದೆ</strong></p>.<p class="Subhead"><strong>-ಪದ್ಮಾ ಅಂಜನೇಯ, ತರಕಾರಿ ವ್ಯಾಪಾರಿ</strong></p>.<p class="Subhead">***</p>.<p class="Subhead"><strong>ಮಳೆಗೆ ತರಕಾರಿ ಸೇರಿದಂತೆ ನಮ್ಮ ಬೆಳೆ ಎಲ್ಲ ನಾಶವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ</strong></p>.<p class="Subhead"><strong>-ಬೋರೆಡ್ಡಿ ಮುದಿಗೌಡ, ಗ್ರಾಹಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>