ಯಾದಗಿರಿ ನಗರ ಹೊರ ವಲಯದ ಗುರುಸಣಗಿ ಬ್ರಿಜ್ ಕಂ ಬ್ಯಾರೇಜ್ನಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿರುವುದು
ಯಾದಗಿರಿ ತಾಲ್ಲೂಕಿನ ಬಂದಳ್ಳಿ ಕೆರೆ ಒಣಗಿರುವುದು
ಯಾದಗಿರಿ ನಗರದ ಲುಂಬಿನಿ ವನದ ಸಣ್ಣ ಕೆರೆಗೆ ನೀರಿನ ಪ್ರಮಾಣ ಕಡಿಮೆಯಾಗಿದೆ
ಯಾದಗಿರಿ ನಗರದ ದೊಡ್ಡ ಕೆರೆಗೆ ನೀರಿನ ಪ್ರಮಾಣ ಕಡಿಮೆಯಾಗಿದೆ
ಶಹಾಪುರ ನಗರದ ಮಾವಿನ ಕೆರೆ ಒಡಲು ಬರಿದಾಗಿದೆ
ಸುರಪುರ ತಾಲ್ಲೂಕಿನ ದೇವಪುರ ದೊಡ್ಡ ಹಳ್ಳದ ಒಡಲು ಬರಿದಾಗಿರುವುದು

ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ 4 ಲಕ್ಷ ಬಿತ್ತನೆ ಗುರಿ ಇದ್ದರೆ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ನೀರಾವರಿ ಪ್ರದೇಶದಲ್ಲಿ ಮಾತ್ರ ಹೆಚ್ಚಿನ ಬಿತ್ತನೆಯಾಗಿದೆ.
ಆಬಿದ್ ಎಸ್.ಎಸ್. ಜಂಟಿ ಕೃಷಿ ನಿರ್ದೇಶಕ
ಭೀಮಾ ನದಿ ಪಾತ್ರದ ರೈತರನ್ನು ಕರೆದು ಜಿಲ್ಲಾಡಳಿತ ಸಭೆ ಮಾಡಿಲ್ಲ. ಕೂಡಲೇ ರೈತರ ಸಭೆ ಕರೆದು ಭತ್ತ ನಾಟಿ ಕುರಿತು ಅವರ ಮನವೊಲಿಸಬೇಕು. ಲಘು ಬೆಳೆಗಳನ್ನು ಬೆಳೆಯುವಂತೆ ತಿಳಿವಳಿಕೆ ಮೂಡಿಸಬೇಕು. ದಿಢೀರನೆ ಬರ ಆವರಿಸಿದರೆ ಸಮಸ್ಯೆ ನಿಭಾಯಿಸಲು ಸಾಧ್ಯವಾಗಲಿದೆ.
ಉಮೇಶ ಕೆ. ಮುದ್ನಾಳ ಸಾಮಾಜಿಕ ಹೋರಾಟಗಾರ
ನಾರಾಯಣಪುರ ಅಣೆಕಟ್ಟೆಯಲ್ಲಿ ನೀರಿಲ್ಲ. ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಜಾನುವಾರುಗಳಿಗೂ ನೀರಿಲ್ಲ. ಕಾರಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ.
ಹಣಮಂತ್ರಾಯ ಮಡಿವಾಳ ತಾಲ್ಲೂಕು ಘಟಕದ ಅಧ್ಯಕ್ಷ ರೈತ ಸಂಘ
ಮುಂಗಾರು ಸಂಪೂರ್ಣ ವಿಫಲವಾಗಿದೆ. ಅಲ್ಲಲ್ಲಿ ಮಳೆ ಬಿದ್ದರೂ ಭೂಮಿಗೆ ತೇವಾಂಶವಿಲ್ಲ. ಸರ್ಕಾರ ಮೋಡ ಬಿತ್ತನೆ ನಿರ್ಧಾರ ಮಾಡಬೇಕು. ರೈತರಿಗೆ ಪರಿಹಾರ ನೀಡಬೇಕು.
ಮೇಲಪ್ಪ ಗುಳಿಗಿ ಬಿಜೆಪಿ ಸುರಪುರ ಮಂಡಲ ಅಧ್ಯಕ್ಷ