<p><strong>ಹುಣಸಗಿ</strong>: ತಾಲ್ಲೂಕಿನಲ್ಲಿ ಗುರುವಾರ ಮತ್ತು ಶುಕ್ರವಾರ ಸುರಿದ ತುಂತುರು ಮಳೆಯು ಬೆಳೆಗಳಿಗೆ ಅನುಕೂಲವಾಗಿದೆ. ಮಳೆಯಾಶ್ರಿತ ಜಮೀನುಗಳಲ್ಲಿ ಬಿತ್ತಿದ ಹತ್ತಿ, ತೊಗರಿ ಹಾಗೂ ಸಜ್ಜೆ ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ.</p>.<p>‘ಗುರುವಾರ ಬೆಂಬಿಡದೇ ಸುರಿದ ಮಳೆಯಿಂದ ಹೊಲದಲ್ಲಿ ನೀರು ಹರಿದಾಡದಿದ್ದರೂ ತೇವಾಂಶ ಮಾತ್ರ ಹೆಚ್ಚಾಗಿದೆ’ ಎಂದು ಮಂಜಲಾಪುರಹಳ್ಳಿ ಗ್ರಾಮದ ರೈತ ಪರಮೇಶ್ವರಪ್ಪ ಮೇಟಿ ಹೇಳಿದರು.</p>.<p>‘ಕಳೆದ ಇಪ್ಪತ್ತು ದಿನಗಳ ಹಿಂದೆ ಜಮೀನಿನಲ್ಲಿ ಹತ್ತಿ ಊರಲಾಗಿದ್ದು, ಸದ್ಯ ಬೆಳೆ ಚೆನ್ನಾಗಿದೆ. ನೀರಿನ ಕೊರತೆಯಿಂದಾಗಿ ಬೆಳೆ ಒಣಗುವ ಹಂತದಲ್ಲಿತ್ತು. ಆದರೆ ಈ ತುಂತುರು ಮಳೆ ಆಸರೆಯಾಗಿದ್ದು, ಹೊಲದಲ್ಲಿನ ಬೆಳೆಗಳು ಹುಲುಸಾಗಿ ಬೆಳೆಯುವ ಎಲ್ಲ ಲಕ್ಷಣಗಳಿವೆ’ ಎಂದು ಮಂಜಲಾಪುರಹಳ್ಳಿ ಗ್ರಾಮದ ಗುಡದಪ್ಪ ಕಕ್ಕೇರಿ, ದ್ಯಾಮವ್ವ ಮೇಟಿ, ಬಸಣ್ಣ, ಮಾನಯ್ಯ ಬಿರಾದಾರ ಹೇಳಿದರು.</p>.<p>‘ಇನ್ನೂ ಮಳೆ ಬರಬಹುದು ಎಂಬ ನಿರೀಕ್ಷೆಯಿಂದಾಗಿ ಒಣ ಹೊಲದಲ್ಲಿಯೇ ತೊಗರಿ ಬಿತ್ತನೆ ಮಾಡಲಾಗಿತ್ತು. ಬಿತ್ತಿದ ಮೂರು–ನಾಲ್ಕು ವಾರಗಳು ಗತಿಸಿದ್ದರೂ ಒಮ್ಮೆಯೂ ಮಳೆಯಾಗಿರಲಿಲ್ಲ. ಆದರೆ ಈ ಪುನರ್ವಸು ಮಳೆ ನಮಗೆ ವರದಾನವಾಗಿದ್ದು, ಅಲ್ಪ ಮಳೆಯಾದರೂ ಅದು ಹೆಚ್ಚು ಸಹಕಾರಿಯಾಗಿದೆ’ ಎಂದು ಶ್ರೀನಿವಾಸಪುರ ಗ್ರಾಮದ ರೈತರಾದ ಭೀಮರಾಯ ದೊಡ್ಡಮನಿ, ಹಣಮಂತ್ರಾಯ ಪೂಜಾರಿ ಕನಗಂಡನಹಳ್ಳಿ ಹಾಗೂ ಚಂದ್ರಶೇಖರ ಗಡದ ಹೇಳಿದರು.</p>.<p>ಶುಕ್ರವಾರ ಸಂಜೆ ಕೂಡ ಹುಣಸಗಿ ಪಟ್ಟಣ ಸೇರಿದಂತೆ ಇತರ ಗ್ರಾಮಗಳಲ್ಲಿ ತುಂತುರು ಮಳೆಯಾಗಿದೆ. ಬಹುತೇಕ ಜನರು ಕೊಡೆ ಹಿಡಿದುಕೊಂಡು ನಿತ್ಯದ ಕೆಲಸ ಕಾರ್ಯಗಳಿಗೆ ಓಡಾಡುತ್ತಿರುವುದು ಕಂಡುಬಂತು. ಮಳೆ ಹಿನ್ನೆಯಲ್ಲಿ ತಾಲ್ಲೂಕಿನ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ</strong>: ತಾಲ್ಲೂಕಿನಲ್ಲಿ ಗುರುವಾರ ಮತ್ತು ಶುಕ್ರವಾರ ಸುರಿದ ತುಂತುರು ಮಳೆಯು ಬೆಳೆಗಳಿಗೆ ಅನುಕೂಲವಾಗಿದೆ. ಮಳೆಯಾಶ್ರಿತ ಜಮೀನುಗಳಲ್ಲಿ ಬಿತ್ತಿದ ಹತ್ತಿ, ತೊಗರಿ ಹಾಗೂ ಸಜ್ಜೆ ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ.</p>.<p>‘ಗುರುವಾರ ಬೆಂಬಿಡದೇ ಸುರಿದ ಮಳೆಯಿಂದ ಹೊಲದಲ್ಲಿ ನೀರು ಹರಿದಾಡದಿದ್ದರೂ ತೇವಾಂಶ ಮಾತ್ರ ಹೆಚ್ಚಾಗಿದೆ’ ಎಂದು ಮಂಜಲಾಪುರಹಳ್ಳಿ ಗ್ರಾಮದ ರೈತ ಪರಮೇಶ್ವರಪ್ಪ ಮೇಟಿ ಹೇಳಿದರು.</p>.<p>‘ಕಳೆದ ಇಪ್ಪತ್ತು ದಿನಗಳ ಹಿಂದೆ ಜಮೀನಿನಲ್ಲಿ ಹತ್ತಿ ಊರಲಾಗಿದ್ದು, ಸದ್ಯ ಬೆಳೆ ಚೆನ್ನಾಗಿದೆ. ನೀರಿನ ಕೊರತೆಯಿಂದಾಗಿ ಬೆಳೆ ಒಣಗುವ ಹಂತದಲ್ಲಿತ್ತು. ಆದರೆ ಈ ತುಂತುರು ಮಳೆ ಆಸರೆಯಾಗಿದ್ದು, ಹೊಲದಲ್ಲಿನ ಬೆಳೆಗಳು ಹುಲುಸಾಗಿ ಬೆಳೆಯುವ ಎಲ್ಲ ಲಕ್ಷಣಗಳಿವೆ’ ಎಂದು ಮಂಜಲಾಪುರಹಳ್ಳಿ ಗ್ರಾಮದ ಗುಡದಪ್ಪ ಕಕ್ಕೇರಿ, ದ್ಯಾಮವ್ವ ಮೇಟಿ, ಬಸಣ್ಣ, ಮಾನಯ್ಯ ಬಿರಾದಾರ ಹೇಳಿದರು.</p>.<p>‘ಇನ್ನೂ ಮಳೆ ಬರಬಹುದು ಎಂಬ ನಿರೀಕ್ಷೆಯಿಂದಾಗಿ ಒಣ ಹೊಲದಲ್ಲಿಯೇ ತೊಗರಿ ಬಿತ್ತನೆ ಮಾಡಲಾಗಿತ್ತು. ಬಿತ್ತಿದ ಮೂರು–ನಾಲ್ಕು ವಾರಗಳು ಗತಿಸಿದ್ದರೂ ಒಮ್ಮೆಯೂ ಮಳೆಯಾಗಿರಲಿಲ್ಲ. ಆದರೆ ಈ ಪುನರ್ವಸು ಮಳೆ ನಮಗೆ ವರದಾನವಾಗಿದ್ದು, ಅಲ್ಪ ಮಳೆಯಾದರೂ ಅದು ಹೆಚ್ಚು ಸಹಕಾರಿಯಾಗಿದೆ’ ಎಂದು ಶ್ರೀನಿವಾಸಪುರ ಗ್ರಾಮದ ರೈತರಾದ ಭೀಮರಾಯ ದೊಡ್ಡಮನಿ, ಹಣಮಂತ್ರಾಯ ಪೂಜಾರಿ ಕನಗಂಡನಹಳ್ಳಿ ಹಾಗೂ ಚಂದ್ರಶೇಖರ ಗಡದ ಹೇಳಿದರು.</p>.<p>ಶುಕ್ರವಾರ ಸಂಜೆ ಕೂಡ ಹುಣಸಗಿ ಪಟ್ಟಣ ಸೇರಿದಂತೆ ಇತರ ಗ್ರಾಮಗಳಲ್ಲಿ ತುಂತುರು ಮಳೆಯಾಗಿದೆ. ಬಹುತೇಕ ಜನರು ಕೊಡೆ ಹಿಡಿದುಕೊಂಡು ನಿತ್ಯದ ಕೆಲಸ ಕಾರ್ಯಗಳಿಗೆ ಓಡಾಡುತ್ತಿರುವುದು ಕಂಡುಬಂತು. ಮಳೆ ಹಿನ್ನೆಯಲ್ಲಿ ತಾಲ್ಲೂಕಿನ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>