<p><strong>ಗೋಪುನಾಯ್ಕ ತಾಂಡಾ (ಯರಗೋಳ):</strong> ಹತ್ತಿಕುಣಿ ಗ್ರಾಮದಿಂದ ಹೋಗುವ ಗೋಪುನಾಯ್ಕ ತಾಂಡಾ ಮತ್ತು ದುಗನೂರ ಕ್ಯಾಂಪ್ಗೆ ಸಂಪರ್ಕ ಇರುವ ರಸ್ತೆ ಸಂಪೂರ್ಣ ಹಾಲಾಗಿದೆ. ಮಳೆಯಿಂದ ರಸ್ತೆ ಕೊಚ್ಚಿ ಹೋದರೂ ಈವರೆಗೂ ದುರಸ್ತಿ ಮಾಡಿಲ್ಲ, ಗ್ರಾಮಸ್ಥರು ತೊಂದರೆಗೆ ಒಳಗಾಗಿದ್ದಾರೆ ಎಂದು ಹೋರಾಟಗಾರ ಉಮೇಶ ಕೆ.ಮುದ್ನಾಳ ಆರೋಪಿಸಿದ್ದಾರೆ.</p>.<p>ಹದಗೆಟ್ಟ ರಸ್ತೆಯನ್ನು ಪರಿಶೀಲಿಸಿ ಬಳಿಕ ಮಾತನಾಡಿದ ಅವರು, ‘ರಸ್ತೆ ದುರಸ್ತಿ ಮಾಡದೇ ಇರುವುದರಲ್ಲಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷವೇ ಎದ್ದು ಕಾಣುತ್ತಿದೆ’ ಎಂದರು.</p>.<p>‘ಈ ಭಾಗದಲ್ಲಿ ಗುಡ್ಡಗಾಡು ಪ್ರದೇಶ, ಜಾಲಿಮುಳ್ಳು ಕಂಟಿಗಳು ಬೆಳೆದರಿರುವದರಿಂದ ಚಿರತೆಯ ವಾಸಸ್ಥಳವಾಗಿ ಮಾರ್ಪಡುತ್ತಿದೆ. ಚಿರತೆಯ ಭಯದಿಂದ ಈ ರಸ್ತೆಯಲ್ಲಿ ರೈತರು ಜಮೀನಿಗೆ ಹೋಗಲು, ಶಾಲಾ ಮಕ್ಕಳು, ಸಾರ್ವಜನಿಕರು ಈ ರಸ್ತೆಯಲ್ಲಿ ಭಯದ ವಾತವರಣದಲ್ಲಿ ಈಡಾಡುವ ಪರಸ್ಥಿತಿ ನಿರ್ಮಾಣವಾಗಿದೆ’ ಎಂದು ತಿಳಿಸಿದರು.</p>.<p>ರಾತ್ರಿ ಹೊತ್ತು ಹೊಸಬರು ಈ ರಸ್ತೆಗೆ ಬಂದರೆ ಅಪಘಾತವಾಗಿ ಕೈ–ಕಾಲು ಮುರಿದುಕೊಳ್ಳುವುದು ಖಚಿತ. ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಒಂದು ವಾರದ ಒಳಗಡೆ ರಸ್ತೆ ಸರಿಪಡಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಉಮೇಶ ಮುದ್ನಾಳ್ ಎಚ್ಚರಿಕೆ ನೀಡಿದರು.</p>.<p>ಪ್ರಭು ಪವನ, ತಾಯಪ್ಪ ಭೀಮರತ್, ಹಣಮಂತ, ದೊಡ್ಡ ಸಾಬಣ್ಣ, ಶರಣಪ್ಪ, ಅಯ್ಯಪ್ಪ, ಆಶಪ್ಪ, ಚನ್ನಬಸಪ್ಪ, ಭೀಮರಾಯ, ಬಸವರಾಜ, ಮುರಗೇಂದ್ರ, ಸಣ್ಣ ಮೀರಾ, ನರಸಪ್ಪ, ಪೂನ್ಯಾ, ಹರ್ಯಾ, ಸೋಮು, ಚಂದ್ರಕಾಂತ, ಹೀರಿಬಾಯಿ, ಸಕ್ರಿಬಾಯಿ, ಆನಂದ, ಬಸು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಪುನಾಯ್ಕ ತಾಂಡಾ (ಯರಗೋಳ):</strong> ಹತ್ತಿಕುಣಿ ಗ್ರಾಮದಿಂದ ಹೋಗುವ ಗೋಪುನಾಯ್ಕ ತಾಂಡಾ ಮತ್ತು ದುಗನೂರ ಕ್ಯಾಂಪ್ಗೆ ಸಂಪರ್ಕ ಇರುವ ರಸ್ತೆ ಸಂಪೂರ್ಣ ಹಾಲಾಗಿದೆ. ಮಳೆಯಿಂದ ರಸ್ತೆ ಕೊಚ್ಚಿ ಹೋದರೂ ಈವರೆಗೂ ದುರಸ್ತಿ ಮಾಡಿಲ್ಲ, ಗ್ರಾಮಸ್ಥರು ತೊಂದರೆಗೆ ಒಳಗಾಗಿದ್ದಾರೆ ಎಂದು ಹೋರಾಟಗಾರ ಉಮೇಶ ಕೆ.ಮುದ್ನಾಳ ಆರೋಪಿಸಿದ್ದಾರೆ.</p>.<p>ಹದಗೆಟ್ಟ ರಸ್ತೆಯನ್ನು ಪರಿಶೀಲಿಸಿ ಬಳಿಕ ಮಾತನಾಡಿದ ಅವರು, ‘ರಸ್ತೆ ದುರಸ್ತಿ ಮಾಡದೇ ಇರುವುದರಲ್ಲಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷವೇ ಎದ್ದು ಕಾಣುತ್ತಿದೆ’ ಎಂದರು.</p>.<p>‘ಈ ಭಾಗದಲ್ಲಿ ಗುಡ್ಡಗಾಡು ಪ್ರದೇಶ, ಜಾಲಿಮುಳ್ಳು ಕಂಟಿಗಳು ಬೆಳೆದರಿರುವದರಿಂದ ಚಿರತೆಯ ವಾಸಸ್ಥಳವಾಗಿ ಮಾರ್ಪಡುತ್ತಿದೆ. ಚಿರತೆಯ ಭಯದಿಂದ ಈ ರಸ್ತೆಯಲ್ಲಿ ರೈತರು ಜಮೀನಿಗೆ ಹೋಗಲು, ಶಾಲಾ ಮಕ್ಕಳು, ಸಾರ್ವಜನಿಕರು ಈ ರಸ್ತೆಯಲ್ಲಿ ಭಯದ ವಾತವರಣದಲ್ಲಿ ಈಡಾಡುವ ಪರಸ್ಥಿತಿ ನಿರ್ಮಾಣವಾಗಿದೆ’ ಎಂದು ತಿಳಿಸಿದರು.</p>.<p>ರಾತ್ರಿ ಹೊತ್ತು ಹೊಸಬರು ಈ ರಸ್ತೆಗೆ ಬಂದರೆ ಅಪಘಾತವಾಗಿ ಕೈ–ಕಾಲು ಮುರಿದುಕೊಳ್ಳುವುದು ಖಚಿತ. ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಒಂದು ವಾರದ ಒಳಗಡೆ ರಸ್ತೆ ಸರಿಪಡಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಉಮೇಶ ಮುದ್ನಾಳ್ ಎಚ್ಚರಿಕೆ ನೀಡಿದರು.</p>.<p>ಪ್ರಭು ಪವನ, ತಾಯಪ್ಪ ಭೀಮರತ್, ಹಣಮಂತ, ದೊಡ್ಡ ಸಾಬಣ್ಣ, ಶರಣಪ್ಪ, ಅಯ್ಯಪ್ಪ, ಆಶಪ್ಪ, ಚನ್ನಬಸಪ್ಪ, ಭೀಮರಾಯ, ಬಸವರಾಜ, ಮುರಗೇಂದ್ರ, ಸಣ್ಣ ಮೀರಾ, ನರಸಪ್ಪ, ಪೂನ್ಯಾ, ಹರ್ಯಾ, ಸೋಮು, ಚಂದ್ರಕಾಂತ, ಹೀರಿಬಾಯಿ, ಸಕ್ರಿಬಾಯಿ, ಆನಂದ, ಬಸು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>