<p><strong>ಸುರಪುರ</strong>: ಇಲ್ಲಿಯ ಐತಿಹಾಸಿಕ ಪ್ರಸಿದ್ಧ ವೇಣುಗೋಪಾಲಸ್ವಾಮಿ ‘ಹಾಲೋಕಳಿ’ ಜಾತ್ರೆ ಬುಧವಾರ ಸಡಗರ ಸಂಭ್ರಮದೊಂದಿಗೆ ಜರುಗಿತು. ಸಂಜೆ ನಡೆದ ದೇವರ ಸ್ತಂಭಾರೋಹಣಕ್ಕೆ ಸಾವಿರಾರು ಜನರು ಸಾಕ್ಷಿಯಾದರು.</p>.<p>ಮಂಗಳವಾರ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯೊಂದಿಗೆ ಜಾತ್ರಾ ಕಾರ್ಯಕ್ರಮಗಳು ಆರಂಭಗೊಂಡವು. ವೇಣುಗೋಪಾಲಸ್ವಾಮಿಗೆ ವಿಶೇಷ ಅಲಂಕಾರ, ವಿಶೇಷಪೂಜೆ, ಉಯ್ಯಾಲ ಸೇವೆ ನಡೆದವು. ಬುಧವಾರ ಜಾತ್ರೆಯ ಮುಖ್ಯ ಅಕರ್ಷಣೆ ದೇವರ ಸ್ತಂಭಾರೋಹಣ ಸಂಭ್ರಮದಿಂದ ನಡೆಯಿತು.</p>.<p>ಅರಮನೆಯಲ್ಲಿ ಸಂಸ್ಥಾನಿಕರ ಅಪ್ಪಣೆ ಪಡೆದು ಬಾಜಾ, ಭಜಂತ್ರಿಯೊಂದಿಗೆ ವತನದಾರರು ದೇವಸ್ಥಾನಕ್ಕೆ ಆಗಮಿಸಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಾಣ್ಯ ಚಿಮ್ಮುವ ಮೂಲಕ ಸ್ತಂಭಾರೋಹಣಕ್ಕೆ ಚಾಲನೆ ನೀಡಿದರು.</p>.<p>ದೇವಸ್ಥಾನದ ಕೆಳಗಿನ ಮೈದಾನದಲ್ಲಿ 50 ಅಡಿ ಉದ್ದದ 5 ಕಂಬಗಳನ್ನು ನೆಡುಹಾಕಲಾಗಿತ್ತು. ಅವುಗಳಿಗೆ ಜಾರುವ ಪದಾರ್ಥಗಳನ್ನು ಲೇಪಿಸಿ ನುಣ್ಣಗೆ ಮಾಡಲಾಗಿತ್ತು. ನಿರ್ದಿಷ್ಟ ಪಡಿಸಿದ ಗ್ರಾಮಗಳ ಜನರು ಕಂಬ ಹತ್ತಿದರು.</p>.<p>ಕಂಬದ ತುದಿಯಲ್ಲಿ ಕುಳಿತಿದ್ದ ವ್ಯಕ್ತಿ ಮತ್ತು ಕೆಳಗಡೆಯಿಂದ ಆರೋಹಿಗಳ ಮೇಲೆ ನೀರನ್ನು ಚಿಮ್ಮಿಸಲಾಗುತ್ತಿತ್ತು. ಇನ್ನೇನು ಕಂಬ ಹರಿದರು ಎನ್ನುವಾಗಲೇ ಜಾರಿ ಕೆಳಗೆ ಬೀಳುತ್ತಿದ್ದರು. ಈ ದೃಶ್ಯ ನೋಡುಗರಿಗೆ ಮನರಂಜನೆ ನೀಡಿತು. ಕೊನೆಗೆ ಒಬ್ಬರ ಸಹಾಯದಿಂದ ಮತ್ತೊಬ್ಬರು ಕಂಬ ಹತ್ತಿದರು. ಕಂಬದ ತುದಿಗೆ ಕಟ್ಟಿದ್ದ ಹಣ್ಣಿನ ಹೋಳುಗಳನ್ನು ಹರಿದರು. ನೆರೆದ ಜನರು ಹುರಿದುಂಬಿಸಿ, ಹೋ..ಎಂದು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.</p>.<p>ವತನದಾರರಾದ ಗಣೇಶ ಜಾಹಾಗೀರದಾರ, ಸುನೀಲ ಸರಪಟ್ಟಶೆಟ್ಟಿ, ಉಸ್ತಾದ ವಜಾಹತ್ ಹುಸೇನ್, ವೀರೇಶ ದೇಶಮುಖ, ಮುಬೀನ ದಖನಿ, ಸೈಯದ್ ಅಹ್ಮದ್ ಪಾಲ್ಕಿ ಸಾಹೇಬ, ಅಜೀಮ ಬೆಳ್ಳಿಬೆತ್ತ ಇತರರು ಭಾಗವಹಿಸಿದ್ದರು.</p>.<p>ಸ್ತಂಭಾರೋಹಣ ವೀಕ್ಷಿಸಿದ ಭಕ್ತರು ದೇವರ ದರ್ಶನ ಪಡೆದರು. ಜಾತ್ರೆಯಲ್ಲಿ ತಿರುಗಾಡಿ ಮಕ್ಕಳಿಗೆ ಜೋಕಾಲಿಗಳಲ್ಲಿ ಕುಳ್ಳಿರಿಸಿದರು. ಬೆಂಡು ಬತ್ತಾಸು, ಮಿಠಾಯಿ ಖರೀದಿಸಿದರು. ಮಹಿಳೆಯರು ಬಳೆ ಹಾಕಿಸಿಕೊಂಡರು.</p>.<p>ಸಂಜೆ ಗರುಡವಾಹನದಲ್ಲಿ ಉತ್ಸವ ಮೂರ್ತಿಯನ್ನಿಟ್ಟು ಭವ್ಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ದೇವಸ್ಥಾನದಿಂದ ಜೋಳಮಾರುವ ಹನುಮಾನ ದೇವಸ್ಥಾನಕ್ಕ ತೆರಳಿ ಪುನಃ ದೇವಸ್ಥಾನಕ್ಕೆ ತರಲಾಯಿತು. 52 ಮೆಟ್ಟಿಲುಗಳನ್ನು ಏರುವ ದೃಶ್ಯ ಕಣ್ಣಿಗೆ ಹಬ್ಬ ಉಂಟು ಮಾಡಿತು.</p>.<p>ಗುರುವಾರ ಬೆಳಿಗ್ಗೆ 11 ಗಂಟೆಗೆ ದೇವಸ್ಥಾನದ ಮೈದಾನದಲ್ಲಿ ಕುಸ್ತಿ ಪಂದ್ಯಗಳು, ಸಂಜೆ ರಮಣಪ್ಪನಾಯಕನ ಕಟ್ಟೆ ಹತ್ತಿರ ರಣಗಂಭಾರೋಹಣ ಜರುಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ಇಲ್ಲಿಯ ಐತಿಹಾಸಿಕ ಪ್ರಸಿದ್ಧ ವೇಣುಗೋಪಾಲಸ್ವಾಮಿ ‘ಹಾಲೋಕಳಿ’ ಜಾತ್ರೆ ಬುಧವಾರ ಸಡಗರ ಸಂಭ್ರಮದೊಂದಿಗೆ ಜರುಗಿತು. ಸಂಜೆ ನಡೆದ ದೇವರ ಸ್ತಂಭಾರೋಹಣಕ್ಕೆ ಸಾವಿರಾರು ಜನರು ಸಾಕ್ಷಿಯಾದರು.</p>.<p>ಮಂಗಳವಾರ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯೊಂದಿಗೆ ಜಾತ್ರಾ ಕಾರ್ಯಕ್ರಮಗಳು ಆರಂಭಗೊಂಡವು. ವೇಣುಗೋಪಾಲಸ್ವಾಮಿಗೆ ವಿಶೇಷ ಅಲಂಕಾರ, ವಿಶೇಷಪೂಜೆ, ಉಯ್ಯಾಲ ಸೇವೆ ನಡೆದವು. ಬುಧವಾರ ಜಾತ್ರೆಯ ಮುಖ್ಯ ಅಕರ್ಷಣೆ ದೇವರ ಸ್ತಂಭಾರೋಹಣ ಸಂಭ್ರಮದಿಂದ ನಡೆಯಿತು.</p>.<p>ಅರಮನೆಯಲ್ಲಿ ಸಂಸ್ಥಾನಿಕರ ಅಪ್ಪಣೆ ಪಡೆದು ಬಾಜಾ, ಭಜಂತ್ರಿಯೊಂದಿಗೆ ವತನದಾರರು ದೇವಸ್ಥಾನಕ್ಕೆ ಆಗಮಿಸಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಾಣ್ಯ ಚಿಮ್ಮುವ ಮೂಲಕ ಸ್ತಂಭಾರೋಹಣಕ್ಕೆ ಚಾಲನೆ ನೀಡಿದರು.</p>.<p>ದೇವಸ್ಥಾನದ ಕೆಳಗಿನ ಮೈದಾನದಲ್ಲಿ 50 ಅಡಿ ಉದ್ದದ 5 ಕಂಬಗಳನ್ನು ನೆಡುಹಾಕಲಾಗಿತ್ತು. ಅವುಗಳಿಗೆ ಜಾರುವ ಪದಾರ್ಥಗಳನ್ನು ಲೇಪಿಸಿ ನುಣ್ಣಗೆ ಮಾಡಲಾಗಿತ್ತು. ನಿರ್ದಿಷ್ಟ ಪಡಿಸಿದ ಗ್ರಾಮಗಳ ಜನರು ಕಂಬ ಹತ್ತಿದರು.</p>.<p>ಕಂಬದ ತುದಿಯಲ್ಲಿ ಕುಳಿತಿದ್ದ ವ್ಯಕ್ತಿ ಮತ್ತು ಕೆಳಗಡೆಯಿಂದ ಆರೋಹಿಗಳ ಮೇಲೆ ನೀರನ್ನು ಚಿಮ್ಮಿಸಲಾಗುತ್ತಿತ್ತು. ಇನ್ನೇನು ಕಂಬ ಹರಿದರು ಎನ್ನುವಾಗಲೇ ಜಾರಿ ಕೆಳಗೆ ಬೀಳುತ್ತಿದ್ದರು. ಈ ದೃಶ್ಯ ನೋಡುಗರಿಗೆ ಮನರಂಜನೆ ನೀಡಿತು. ಕೊನೆಗೆ ಒಬ್ಬರ ಸಹಾಯದಿಂದ ಮತ್ತೊಬ್ಬರು ಕಂಬ ಹತ್ತಿದರು. ಕಂಬದ ತುದಿಗೆ ಕಟ್ಟಿದ್ದ ಹಣ್ಣಿನ ಹೋಳುಗಳನ್ನು ಹರಿದರು. ನೆರೆದ ಜನರು ಹುರಿದುಂಬಿಸಿ, ಹೋ..ಎಂದು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.</p>.<p>ವತನದಾರರಾದ ಗಣೇಶ ಜಾಹಾಗೀರದಾರ, ಸುನೀಲ ಸರಪಟ್ಟಶೆಟ್ಟಿ, ಉಸ್ತಾದ ವಜಾಹತ್ ಹುಸೇನ್, ವೀರೇಶ ದೇಶಮುಖ, ಮುಬೀನ ದಖನಿ, ಸೈಯದ್ ಅಹ್ಮದ್ ಪಾಲ್ಕಿ ಸಾಹೇಬ, ಅಜೀಮ ಬೆಳ್ಳಿಬೆತ್ತ ಇತರರು ಭಾಗವಹಿಸಿದ್ದರು.</p>.<p>ಸ್ತಂಭಾರೋಹಣ ವೀಕ್ಷಿಸಿದ ಭಕ್ತರು ದೇವರ ದರ್ಶನ ಪಡೆದರು. ಜಾತ್ರೆಯಲ್ಲಿ ತಿರುಗಾಡಿ ಮಕ್ಕಳಿಗೆ ಜೋಕಾಲಿಗಳಲ್ಲಿ ಕುಳ್ಳಿರಿಸಿದರು. ಬೆಂಡು ಬತ್ತಾಸು, ಮಿಠಾಯಿ ಖರೀದಿಸಿದರು. ಮಹಿಳೆಯರು ಬಳೆ ಹಾಕಿಸಿಕೊಂಡರು.</p>.<p>ಸಂಜೆ ಗರುಡವಾಹನದಲ್ಲಿ ಉತ್ಸವ ಮೂರ್ತಿಯನ್ನಿಟ್ಟು ಭವ್ಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ದೇವಸ್ಥಾನದಿಂದ ಜೋಳಮಾರುವ ಹನುಮಾನ ದೇವಸ್ಥಾನಕ್ಕ ತೆರಳಿ ಪುನಃ ದೇವಸ್ಥಾನಕ್ಕೆ ತರಲಾಯಿತು. 52 ಮೆಟ್ಟಿಲುಗಳನ್ನು ಏರುವ ದೃಶ್ಯ ಕಣ್ಣಿಗೆ ಹಬ್ಬ ಉಂಟು ಮಾಡಿತು.</p>.<p>ಗುರುವಾರ ಬೆಳಿಗ್ಗೆ 11 ಗಂಟೆಗೆ ದೇವಸ್ಥಾನದ ಮೈದಾನದಲ್ಲಿ ಕುಸ್ತಿ ಪಂದ್ಯಗಳು, ಸಂಜೆ ರಮಣಪ್ಪನಾಯಕನ ಕಟ್ಟೆ ಹತ್ತಿರ ರಣಗಂಭಾರೋಹಣ ಜರುಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>