<p><strong>ಶಹಾಪುರ:</strong> ತಾಲ್ಲೂಕಿನ ಗಂಗನಾಳ, ಸಗರ ಹಾಗೂ ಇನ್ನಿತರ ಗ್ರಾಮಗಳಿಗೆ ಶನಿವಾರ ಬಿಜೆಪಿ ತಂಡವು ಭೇಟಿ ನೀಡಿ ಮಳೆ ಹಾನಿಯಿಂದ ಬೆಳೆ ಹಾಳಾದ ಹತ್ತಿ, ತೊಗರಿ ಬೆಳೆ ವೀಕ್ಷಣೆ ಮಾಡಿದರು.</p>.<p>ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಮಾತನಾಡಿ, ಸರ್ಕಾರ ಬೆಳೆ ಸರ್ವೆ ನಿಖರವಾಗಿ ಮಾಡುತ್ತಿಲ್ಲ. ಕಾಟಾಚಾರದ ಕೆಲಸ ನಡೆಯುತ್ತದೆ. ರೈತರ ಹಿತ ಬೇಕಿಲ್ಲ. ಜಾತಿ ಗಣತಿಯ ಬಗ್ಗೆ ಹೆಚ್ಚಿನ ಕಾಳಜಿವಹಿಸಿದೆ ಎಂದು ಆರೋಪಿಸಿದರು.</p>.<p>ಮುಖಂಡ ಅಮೀನರಡ್ಡಿ ಪಾಟೀಲ ಯಾಳಗಿ ಮಾತನಾಡಿ, ಸರ್ವೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ ಹೆಚ್ಚಿನ ಪರಿಹಾರ ಒದಗಿಸಬೇಕು. ರೈತರ ಹಿಂಗಾರಿ ಬೆಳೆ ಬಿತ್ತನೆಗೆ ನೆರವಾಗಬೇಕು ಎಂದರು.</p>.<p>ಮುಖಂಡರಾದ ಪರಶುರಾಮ ಕುರಕುಂದಿ, ಚಂದ್ರಶೇಖರ ಸುಬೇದಾರ, ರಾಜಶೇಖರ ಗೂಗಲ್, ಅಡಿವೆಪ್ಪ ಜಾಕಾ, ರಾಜೂಗೌಡ ಉಕ್ಕಿನಾಳ, ದೇವೀಂದ್ರ ಕೊನೆರ, ಅಮರೇಶ, ಗಿರೀಶ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ:</strong> ತಾಲ್ಲೂಕಿನ ಗಂಗನಾಳ, ಸಗರ ಹಾಗೂ ಇನ್ನಿತರ ಗ್ರಾಮಗಳಿಗೆ ಶನಿವಾರ ಬಿಜೆಪಿ ತಂಡವು ಭೇಟಿ ನೀಡಿ ಮಳೆ ಹಾನಿಯಿಂದ ಬೆಳೆ ಹಾಳಾದ ಹತ್ತಿ, ತೊಗರಿ ಬೆಳೆ ವೀಕ್ಷಣೆ ಮಾಡಿದರು.</p>.<p>ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಮಾತನಾಡಿ, ಸರ್ಕಾರ ಬೆಳೆ ಸರ್ವೆ ನಿಖರವಾಗಿ ಮಾಡುತ್ತಿಲ್ಲ. ಕಾಟಾಚಾರದ ಕೆಲಸ ನಡೆಯುತ್ತದೆ. ರೈತರ ಹಿತ ಬೇಕಿಲ್ಲ. ಜಾತಿ ಗಣತಿಯ ಬಗ್ಗೆ ಹೆಚ್ಚಿನ ಕಾಳಜಿವಹಿಸಿದೆ ಎಂದು ಆರೋಪಿಸಿದರು.</p>.<p>ಮುಖಂಡ ಅಮೀನರಡ್ಡಿ ಪಾಟೀಲ ಯಾಳಗಿ ಮಾತನಾಡಿ, ಸರ್ವೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ ಹೆಚ್ಚಿನ ಪರಿಹಾರ ಒದಗಿಸಬೇಕು. ರೈತರ ಹಿಂಗಾರಿ ಬೆಳೆ ಬಿತ್ತನೆಗೆ ನೆರವಾಗಬೇಕು ಎಂದರು.</p>.<p>ಮುಖಂಡರಾದ ಪರಶುರಾಮ ಕುರಕುಂದಿ, ಚಂದ್ರಶೇಖರ ಸುಬೇದಾರ, ರಾಜಶೇಖರ ಗೂಗಲ್, ಅಡಿವೆಪ್ಪ ಜಾಕಾ, ರಾಜೂಗೌಡ ಉಕ್ಕಿನಾಳ, ದೇವೀಂದ್ರ ಕೊನೆರ, ಅಮರೇಶ, ಗಿರೀಶ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>