<p><strong>ಹುಣಸಗಿ:</strong> ‘ದೇಶ ಎಲ್ಲ ಜನತೆಯ ಹೊಟ್ಟೆ ತುಂಬಿಸುವ ಕಾರ್ಯದಲ್ಲಿ ರೈತರು ಹಗಲಿರುಳು ಮಳೆ, ಗಾಳಿ ಎನ್ನದೇ ಬೆವರು ಸುರಿಸಿ ದುಡಿಯುತ್ತಾರೆ. ಅವರ ಸೇವೆ ಹಾಗೂ ಕೊಡುಗೆ ಅನನ್ಯವಾದದ್ದು’ ಎಂದು ದುರದುಂಡೇಶ್ವರ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಹೊರವಲಯದಲ್ಲಿ ರೈತ ಮುಖಂಡ ಮಲ್ಲಣ್ಣ ಆರಲಗಡ್ಡಿ ಜಮೀನಿನಲ್ಲಿ ಹಮ್ಮಿಕೊಂಡಿದ್ದ ಕೃಷಿ ವಿಚಾರ ಸಂಕಿರಣ ಹಾಗೂ ತಾಲ್ಲೂಕಿನ ವಿವಿಧೆಡೆ ಶಿಕ್ಷಣಕ್ಕಾಗಿ ಭೂದಾನ ಮಾಡಿದ ರೈತರಿಗೆ ಸನ್ಮಾನ ಮತ್ತು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.</p>.<p>‘ದೇಶದ ಪ್ರಗತಿಗೆ ಶಿಕ್ಷಣ ಹಾಗೂ ಕೃಷಿ ಪ್ರಮುಖ ಪಾತ್ರ ವಹಿಸುತ್ತದೆ. ಸುಶಿಕ್ಷಿತ ರೈತ ಯಾವತ್ತೂ ತೊಂದರೆಗೆ ಸಿಲುಕಲಾರ’ ಎಂದು ಪ್ರತಿಪಾದಿಸಿದರು.</p>.<p>ಕಲಬುರಗಿ ಕೇಂದ್ರ ಕೃಷಿ ಸಂಶೋಧನಾ ನಿರ್ದೇಶಕರಾದ ಬಿ.ಎಂ. ದೊಡ್ಡಮನಿ ಮಾತನಾಡಿ, ರೈತರು ಮೊದಲು ತಮ್ಮ ಜಮೀನಿನ ಮಣ್ಣಿನ ಗುಣ ಲಕ್ಷಣ ಹಾಗೂ ಅದರಲ್ಲಿನ ಕೊರತೆಗಳ ಕುರಿತು ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ಕೃಷಿಯಲ್ಲಿ ಏನಾದರೂ ಹೊಸತನ ಕಂಡುಕೊಳ್ಳಲು ಸಾಧ್ಯ ಎಂದರು.</p>.<p>ಮಾಳನೂರು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ವಿ.ಎಸ್. ಪಲ್ಲೇದ ಹಾಗೂ ವಿಜ್ಞಾನಿ ಸಿ.ವಿ ಗಜೇಂದ್ರ ಮಾತನಾಡಿದರು.</p>.<p>ಭೀಮರಾಯನ ಗುಡಿಯ ಕೃಷಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ದಯಾನಂದ ಸಾತಿಹಾಳ, ಕೆ.ವಿ. ಪ್ರಕಾಶ, ಆನಂದ ಪೊಲೀಸ್ಪಾಟೀಲ ಹಾಗೂ ಅಣ್ಣಾರಾಯ ತಳವಾರ ಮತ್ತು ಎಸ್.ಜಿ ಹಂಚಿನಾಳ ಇತರರು ಮಾತನಾಡಿದರು.</p>.<p>ಇದೇ ಸಂದರ್ಭದಲ್ಲಿ ಮಾಳನೂರು ಕೃಷಿ ಸಂಶೋದನಾ ಕೇಂದ್ರದಿಂದ ಡ್ರೋನ್ ಮೂಲಕ ಸಿಂಪಡಿಸಬಹುದಾದ ಕೀಟನಾಶಕ ಹಾಗೂ ಯಂತ್ರಗಳ ಬಳಸುವಿಕೆಯ ಕುರಿತು ಮಾಹಿತಿ ನೀಡಿದರು.</p>.<p>ಕೊಡೇಕಲ್ಲ ಮಹಲಿನ ಮಠದ ವೃಷಭೇಂದ್ರ ಅಪ್ಪ ನೇತೃತ್ವವಹಿಸಿದ್ದರು. ಕಾರ್ಯಕ್ರಮದಲ್ಲಿ ಹುಣಸಗಿ ತಾಲ್ಲೂಕಿನ ವಿವಿಧಡೆ ಶಿಕ್ಷಣಕ್ಕಾಗಿ ಭೂಧಾನ ಮಾಡಿದ ರೈತರನ್ನು ಗೌರವಿಸಲಾಯಿತು.</p>.<p>ಬಿ.ಬಿ. ಬಿರಾದಾರ, ಗುರುಪುತ್ರ ಅಥಣಿ, ಶರಣಪ್ಪ ಧನ್ನೂರ, ಗುರಣ್ಣ ಧನ್ನೂರ, ಸಂಗನಗೌಡ ಪೊಲೀಸ್ಪಾಟೀಲ, ನಾಗಣ್ಣ ಬಿರಾದಾರ, ಶಿವಣ್ಣ ಸಾತಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು. </p>.<p>ಭಾಗಣ್ಣ ಅರ್ನಾಡ ನಿರೂಪಿಸಿದರು. ಮಲ್ಲಣ್ಣ ಸ್ವಾಗತಿಸಿದರು. ಮುತ್ತು ಬಿರಾದಾರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ:</strong> ‘ದೇಶ ಎಲ್ಲ ಜನತೆಯ ಹೊಟ್ಟೆ ತುಂಬಿಸುವ ಕಾರ್ಯದಲ್ಲಿ ರೈತರು ಹಗಲಿರುಳು ಮಳೆ, ಗಾಳಿ ಎನ್ನದೇ ಬೆವರು ಸುರಿಸಿ ದುಡಿಯುತ್ತಾರೆ. ಅವರ ಸೇವೆ ಹಾಗೂ ಕೊಡುಗೆ ಅನನ್ಯವಾದದ್ದು’ ಎಂದು ದುರದುಂಡೇಶ್ವರ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಹೊರವಲಯದಲ್ಲಿ ರೈತ ಮುಖಂಡ ಮಲ್ಲಣ್ಣ ಆರಲಗಡ್ಡಿ ಜಮೀನಿನಲ್ಲಿ ಹಮ್ಮಿಕೊಂಡಿದ್ದ ಕೃಷಿ ವಿಚಾರ ಸಂಕಿರಣ ಹಾಗೂ ತಾಲ್ಲೂಕಿನ ವಿವಿಧೆಡೆ ಶಿಕ್ಷಣಕ್ಕಾಗಿ ಭೂದಾನ ಮಾಡಿದ ರೈತರಿಗೆ ಸನ್ಮಾನ ಮತ್ತು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.</p>.<p>‘ದೇಶದ ಪ್ರಗತಿಗೆ ಶಿಕ್ಷಣ ಹಾಗೂ ಕೃಷಿ ಪ್ರಮುಖ ಪಾತ್ರ ವಹಿಸುತ್ತದೆ. ಸುಶಿಕ್ಷಿತ ರೈತ ಯಾವತ್ತೂ ತೊಂದರೆಗೆ ಸಿಲುಕಲಾರ’ ಎಂದು ಪ್ರತಿಪಾದಿಸಿದರು.</p>.<p>ಕಲಬುರಗಿ ಕೇಂದ್ರ ಕೃಷಿ ಸಂಶೋಧನಾ ನಿರ್ದೇಶಕರಾದ ಬಿ.ಎಂ. ದೊಡ್ಡಮನಿ ಮಾತನಾಡಿ, ರೈತರು ಮೊದಲು ತಮ್ಮ ಜಮೀನಿನ ಮಣ್ಣಿನ ಗುಣ ಲಕ್ಷಣ ಹಾಗೂ ಅದರಲ್ಲಿನ ಕೊರತೆಗಳ ಕುರಿತು ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ಕೃಷಿಯಲ್ಲಿ ಏನಾದರೂ ಹೊಸತನ ಕಂಡುಕೊಳ್ಳಲು ಸಾಧ್ಯ ಎಂದರು.</p>.<p>ಮಾಳನೂರು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ವಿ.ಎಸ್. ಪಲ್ಲೇದ ಹಾಗೂ ವಿಜ್ಞಾನಿ ಸಿ.ವಿ ಗಜೇಂದ್ರ ಮಾತನಾಡಿದರು.</p>.<p>ಭೀಮರಾಯನ ಗುಡಿಯ ಕೃಷಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ದಯಾನಂದ ಸಾತಿಹಾಳ, ಕೆ.ವಿ. ಪ್ರಕಾಶ, ಆನಂದ ಪೊಲೀಸ್ಪಾಟೀಲ ಹಾಗೂ ಅಣ್ಣಾರಾಯ ತಳವಾರ ಮತ್ತು ಎಸ್.ಜಿ ಹಂಚಿನಾಳ ಇತರರು ಮಾತನಾಡಿದರು.</p>.<p>ಇದೇ ಸಂದರ್ಭದಲ್ಲಿ ಮಾಳನೂರು ಕೃಷಿ ಸಂಶೋದನಾ ಕೇಂದ್ರದಿಂದ ಡ್ರೋನ್ ಮೂಲಕ ಸಿಂಪಡಿಸಬಹುದಾದ ಕೀಟನಾಶಕ ಹಾಗೂ ಯಂತ್ರಗಳ ಬಳಸುವಿಕೆಯ ಕುರಿತು ಮಾಹಿತಿ ನೀಡಿದರು.</p>.<p>ಕೊಡೇಕಲ್ಲ ಮಹಲಿನ ಮಠದ ವೃಷಭೇಂದ್ರ ಅಪ್ಪ ನೇತೃತ್ವವಹಿಸಿದ್ದರು. ಕಾರ್ಯಕ್ರಮದಲ್ಲಿ ಹುಣಸಗಿ ತಾಲ್ಲೂಕಿನ ವಿವಿಧಡೆ ಶಿಕ್ಷಣಕ್ಕಾಗಿ ಭೂಧಾನ ಮಾಡಿದ ರೈತರನ್ನು ಗೌರವಿಸಲಾಯಿತು.</p>.<p>ಬಿ.ಬಿ. ಬಿರಾದಾರ, ಗುರುಪುತ್ರ ಅಥಣಿ, ಶರಣಪ್ಪ ಧನ್ನೂರ, ಗುರಣ್ಣ ಧನ್ನೂರ, ಸಂಗನಗೌಡ ಪೊಲೀಸ್ಪಾಟೀಲ, ನಾಗಣ್ಣ ಬಿರಾದಾರ, ಶಿವಣ್ಣ ಸಾತಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು. </p>.<p>ಭಾಗಣ್ಣ ಅರ್ನಾಡ ನಿರೂಪಿಸಿದರು. ಮಲ್ಲಣ್ಣ ಸ್ವಾಗತಿಸಿದರು. ಮುತ್ತು ಬಿರಾದಾರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>