’ನನಗೆ 9 ಮಕ್ಕಳಿದ್ದು, 50 ವರ್ಷಗಳಿಂದ ಗ್ರಾಮದ ಹನುಮಾನ ದೇವಸ್ಥಾನದ ಪೂಜಾರಿಯಾಗಿದ್ದೇನೆ. ಪ್ರತಿ ದಿನ ಪೂಜೆ ಕೈಂಕರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. 25 ದಿನದ ಹಿಂದೆ ಪೂಜೆ ಮಾಡುತ್ತಿದ್ದಾಗ ನನ್ನ ಮೇಲೆ ಹಲ್ಲೆ ಮಾಡಿ ಕೈಯಲ್ಲಿದ್ದ ಆರತಿಯನ್ನು ಬೀಳಿಸಿ ದೇವರನ್ನು ಗ್ರಾಮಸ್ಥರು ತೆಗೆದುಕೊಂಡು ಹೋಗಿದ್ದಾರೆ‘ ಎಂದು ಶರಣಪ್ಪ ಸುದ್ದಿಗಾರರಿಗೆ ತಿಳಿಸಿದರು.