ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ: ಭಾರತ–ಪಾಕ್‌ ಮುಖಾಮುಖಿಗೆ ಆಕ್ರೋಶ

Published : 13 ಸೆಪ್ಟೆಂಬರ್ 2025, 23:48 IST
Last Updated : 13 ಸೆಪ್ಟೆಂಬರ್ 2025, 23:48 IST
ಫಾಲೋ ಮಾಡಿ
Comments
ಪಂದ್ಯ ವಿರೋಧಿಸಲು ಉದ್ಧವ್‌ ಠಾಕ್ರೆ ಅವರಿಗೆ ನೈತಿಕತೆ ಇಲ್ಲ. ಸಂಬಂಧ ಹದಗೆಟ್ಟಿದ್ದ ಕಾಂಗ್ರೆಸ್‌ ಕಾಲಘಟ್ಟದಲ್ಲಿಯೂ ಭಾರತ– ಪಾಕಿಸ್ತಾನ ನಡುವೆ ಕ್ರಿಕೆಟ್‌ ಪಂದ್ಯಗಳು ನಡೆದಿದ್ದವು
ನರೇಶ್‌ ಗಣಪತ್‌ ಮಹಸ್ಕೆ ಸಂಸದ–ಏಕನಾಥ ಶಿಂದೆ ಶಿವಸೇನಾ ವಕ್ತಾರ
ಅರವಿಂದ್‌ ಕೇಜ್ರಿವಾಲ್‌
ಅರವಿಂದ್‌ ಕೇಜ್ರಿವಾಲ್‌
ಪಂದ್ಯ ರದ್ದುಗೊಳಿಸಿ: ಪಹಲ್ಗಾಮ್‌ ಸಂತ್ರಸ್ತೆ ಮನವಿ
ಲಖನೌ: ‘ದುಬೈನಲ್ಲಿ ನಡೆಯುತ್ತಿರುವ ಭಾರತ– ಪಾಕಿಸ್ತಾನ ಪಂದ್ಯವನ್ನು ಬಿಸಿಸಿಐ ಕೂಡಲೇ ರದ್ದುಗೊಳಿಸಬೇಕು. ಜನರು ಕೂಡ ಪಂದ್ಯವನ್ನು ಬಹಿಷ್ಕರಿಸಿ ವೀಕ್ಷಿಸಬಾರದು’ ಎಂದು ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಸಂತ್ರಸ್ತೆ ಆಗ್ರಹಿಸಿದ್ದಾರೆ. ಪಹಲ್ಗಾಮ್‌ನ ಭಯೋತ್ಪಾದಕರ ದಾಳಿಯಲ್ಲಿ ಕಾನ್ಪುರ ಮೂಲದ ಉದ್ಯಮಿ ಶುಭಂ ದ್ವಿವೇದಿ ಕೂಡ ಮೃತಪಟ್ಟಿದ್ದರು. ‘ಪಂದ್ಯ ಆಯೋಜಿಸುವ ಮೂಲಕ ಪಹಲ್ಗಾಮ್‌ ಹುತಾತ್ಮರಿಗೆ ಅಗೌರವ ತೋರಿದಂತಾಗಿದೆ’ ಎಂದು ಶುಭಂ ಪತ್ನಿ ಆಶಾನ್ಯ ದ್ವಿವೇದಿ ಕಿಡಿಕಾರಿದ್ದಾರೆ. ‘ಸಂತ್ರಸ್ತ ಕುಟುಂಬಗಳ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಜನರೇ ಪಂದ್ಯವನ್ನು ಬಹಿಷ್ಕರಿಸಿ ಪಂದ್ಯ ನೋಡಬಾರದು. ಕ್ರೀಡಾಂಗಣಕ್ಕೂ  ತೆರಳಬಾರದು’ ಎಂದು ಈ ವೇಳೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT