<p><strong>ಸುರಪುರ</strong>: ‘ಗಂಡು ಮಕ್ಕಳಂತೆ ಹೆಣ್ಣುಮಕ್ಕಳಿಗೂ ಪಾಲಕರು ಓದಲು ಸಮಾನ ಅವಕಾಶ ನೀಡಬೇಕು. ಈಗ ವಿದ್ಯಾರ್ಥಿನಿಯರಿಗೂ ಅಭ್ಯಾಸ ಮಾಡಲು ವಿಫುಲ ಅವಕಾಶಗಳಿವೆ’ ಎಂದು ಶಹಾಪುರ ಎಸ್ಡಿಎಂ ಮಹಿಳಾ ಕಾಲೇಜು ಪ್ರಾಚಾರ್ಯ ಶಿವಲಿಂಗಣ್ಣ ಸಾಹು ಹೇಳಿದರು.</p>.<p>ನಗರದ ಜನನಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ,‘ಹೆಣ್ಣು ಕಲಿತರೆ ಅವರ ಕುಟುಂಬವೇ ಶಾಲೆಯಾಗಿ ಪರಿವರ್ತನೆಯಾಗುತ್ತದೆ. ಉನ್ನತ ವ್ಯಾಸಂಗ ಮಾಡಿದ ಮಹಿಳೆ ಸರ್ವ ದೃಷ್ಟಿಕೋನದಿಂದಲೂ ಸಬಲಳಾಗುತ್ತಾಳೆ’ ಎಂದು ಪ್ರತಿಪಾದಿಸಿದರು.</p>.<p>ಉಪನ್ಯಾಸಕ ವೆಂಕಟೇಶ ಜಾಲಗಾರ ಮಾತನಾಡಿ, ಜನನಿ ಕಾಲೇಜು ಸತತ 10 ವರ್ಷಗಳಿಂದ ಶೇ100ರಷ್ಟು ಫಲಿತಾಂಶ ಪಡೆಯುತ್ತಿದೆ. ನಮ್ಮಲ್ಲಿ ಅಭ್ಯಾಸ ಮಾಡಿದ ಹಲವು ವಿದ್ಯಾರ್ಥಿನಿಯರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.</p>.<p>ಕಾರ್ಯದರ್ಶಿ ಆದಿಶೇಷ ನೀಲಗಾರ ಮಾತನಾಡಿ,‘ಮಹಿಳೆಯರು ಆತ್ಮ ಸ್ಥೈರ್ಯವನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಪಡಿಸಿಕೊಳ್ಳಬೇಕು. ಇದರಿಂದ ಮಹಿಳೆಯರ ಸಬಲೀಕರಣಕ್ಕೆ ನಾಂದಿಯಾಗುತ್ತದೆ’ ಎಂದು ಹೇಳಿದರು.</p>.<p>ಪ್ರಾಂಶುಪಾಲ ಬಸವರಾಜೇಶ್ವರಿ ಘಂಟಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ತಿರುಪತಿ ಕೆಂಭಾವಿ, ಅಂಬ್ರೇಶ ಚಿಲ್ಲಾಳ, ಮಹೇಶಕುಮಾರ ಗಂಜಿ, ಹಣಮಂತ್ರಾಯಗೌಡ, ಬೀರಲಿಂಗ ದೇವತ್ಕಲ್, ಶ್ರೀದೇವಿ ನಾಯಕ, ಜ್ಯೋತಿ, ಶೋಭಾ, ಅಶ್ವಿನಿ, ಶೃತಿಗೌಡ, ರೂಪಾ, ಬಸವರಾಜ ಲೂಟಿ ಭಾಗವಹಿಸಿದ್ದರು.</p>.<p>ಪೂಜಾ ಮತ್ತು ಮೇಘಾ ನಿರೂಪಿಸಿದರು. ಸಬೀನಾ ಸ್ವಾಗತಿಸಿದರು. ಶಾಂತಾ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ‘ಗಂಡು ಮಕ್ಕಳಂತೆ ಹೆಣ್ಣುಮಕ್ಕಳಿಗೂ ಪಾಲಕರು ಓದಲು ಸಮಾನ ಅವಕಾಶ ನೀಡಬೇಕು. ಈಗ ವಿದ್ಯಾರ್ಥಿನಿಯರಿಗೂ ಅಭ್ಯಾಸ ಮಾಡಲು ವಿಫುಲ ಅವಕಾಶಗಳಿವೆ’ ಎಂದು ಶಹಾಪುರ ಎಸ್ಡಿಎಂ ಮಹಿಳಾ ಕಾಲೇಜು ಪ್ರಾಚಾರ್ಯ ಶಿವಲಿಂಗಣ್ಣ ಸಾಹು ಹೇಳಿದರು.</p>.<p>ನಗರದ ಜನನಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ,‘ಹೆಣ್ಣು ಕಲಿತರೆ ಅವರ ಕುಟುಂಬವೇ ಶಾಲೆಯಾಗಿ ಪರಿವರ್ತನೆಯಾಗುತ್ತದೆ. ಉನ್ನತ ವ್ಯಾಸಂಗ ಮಾಡಿದ ಮಹಿಳೆ ಸರ್ವ ದೃಷ್ಟಿಕೋನದಿಂದಲೂ ಸಬಲಳಾಗುತ್ತಾಳೆ’ ಎಂದು ಪ್ರತಿಪಾದಿಸಿದರು.</p>.<p>ಉಪನ್ಯಾಸಕ ವೆಂಕಟೇಶ ಜಾಲಗಾರ ಮಾತನಾಡಿ, ಜನನಿ ಕಾಲೇಜು ಸತತ 10 ವರ್ಷಗಳಿಂದ ಶೇ100ರಷ್ಟು ಫಲಿತಾಂಶ ಪಡೆಯುತ್ತಿದೆ. ನಮ್ಮಲ್ಲಿ ಅಭ್ಯಾಸ ಮಾಡಿದ ಹಲವು ವಿದ್ಯಾರ್ಥಿನಿಯರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.</p>.<p>ಕಾರ್ಯದರ್ಶಿ ಆದಿಶೇಷ ನೀಲಗಾರ ಮಾತನಾಡಿ,‘ಮಹಿಳೆಯರು ಆತ್ಮ ಸ್ಥೈರ್ಯವನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಪಡಿಸಿಕೊಳ್ಳಬೇಕು. ಇದರಿಂದ ಮಹಿಳೆಯರ ಸಬಲೀಕರಣಕ್ಕೆ ನಾಂದಿಯಾಗುತ್ತದೆ’ ಎಂದು ಹೇಳಿದರು.</p>.<p>ಪ್ರಾಂಶುಪಾಲ ಬಸವರಾಜೇಶ್ವರಿ ಘಂಟಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ತಿರುಪತಿ ಕೆಂಭಾವಿ, ಅಂಬ್ರೇಶ ಚಿಲ್ಲಾಳ, ಮಹೇಶಕುಮಾರ ಗಂಜಿ, ಹಣಮಂತ್ರಾಯಗೌಡ, ಬೀರಲಿಂಗ ದೇವತ್ಕಲ್, ಶ್ರೀದೇವಿ ನಾಯಕ, ಜ್ಯೋತಿ, ಶೋಭಾ, ಅಶ್ವಿನಿ, ಶೃತಿಗೌಡ, ರೂಪಾ, ಬಸವರಾಜ ಲೂಟಿ ಭಾಗವಹಿಸಿದ್ದರು.</p>.<p>ಪೂಜಾ ಮತ್ತು ಮೇಘಾ ನಿರೂಪಿಸಿದರು. ಸಬೀನಾ ಸ್ವಾಗತಿಸಿದರು. ಶಾಂತಾ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>