ಸುರಪುರ: ಪ್ರಧಾನಮಂತ್ರಿ ಕಿಸಾನ ಸಮ್ಮಾನ್ ಯೋಜನೆ ಅಡಿ ತಮ್ಮ ಖಾತೆಗೆ ಜಮೆಯಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೊದಲ ಕಂತಿನ ಹಣ ಪಡೆದುಕೊಳ್ಳಲು ರೈತರು ಬ್ಯಾಂಕ್ಗಳಿಗೆ ಪರದಾಡುತ್ತಿದ್ದಾರೆ. ನಗರದ ಕೆನರಾ, ಎಸ್ಬಿಐ, ಪಿಕೆಜಿಬಿ. ಮತ್ತು ಸಹಕಾರಿ ಬ್ಯಾಂಕ್ಗಳ ಮುಂದೆ ರೈತರ ಉದ್ದನೆಯ ಸಾಲು ನಿತ್ಯವು ಕಂಡು ಬರುತ್ತಿದೆ. ಅಂತರವಿಲ್ಲದೆ, ಮಾಸ್ಕ್ ಧರಿಸದೆ ಇರುವುರಿಂದ ಸೋಂಕು ಹರಡುವ ಭೀತಿ ಎದುರಾಗಿದೆ.