<p><strong>ಸುರಪುರ</strong>: ‘ನಮ್ಮ ಸನಾತನ ಪರಂಪರೆಯಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಒಬ್ಬ ಅಧಿದೇವತೆಗಳಿದ್ದಾರೆ. ಸಂಪತ್ತಿಗೆ ಲಕ್ಷ್ಮೀಯ ಅನುಗ್ರಹ ಬೇಕು. ಲಕ್ಷ್ಮೀಪೂಜೆ ಭಕ್ತಿಯಿಂದ ಮಾಡಿದರೆ ಖಂಡಿತ ಅವಳ ಅನುಗ್ರಹ ದೊರಕುತ್ತದೆ’ ಎಂದು ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯರು ಹೇಳಿದರು.</p>.<p>ತಾಲ್ಲೂಕಿನ ರುಕ್ಮಾಪುರದ ಬನಶಂಕರಿ ದೇಗುಲದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ಲಕ್ಷ್ಮೀ ಪೂಜೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಧರ್ಮಸ್ಥಳದ ಡಿ. ವಿರೇಂದ್ರ ಹೆಗ್ಗಡೆಯವರು ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಎಂಬ ಸಿದ್ಧಾಂತದಡಿ ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಿದ್ದಾರೆ. ಯೋಜನೆಯಡಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಸಂಘದ ಸದಸ್ಯರನ್ನು ಆರ್ಥಿಕವಾಗಿ ಸದೃಢ ಮಾಡುತ್ತಿರುವುದು ಪ್ರಶಂಶನೀಯ’ ಎಂದರು.</p>.<p>ಯೋಜನೆಯ ಜಿಲ್ಲಾ ನಿರ್ದೇಶಕ ವಸಂತಗೌಡ ಮಾತನಾಡಿ, ‘ದೇವರ ಪೂಜೆಯಲ್ಲಿ ನಮ್ಮ ಜನ ಅಪಾರ ಶ್ರದ್ಧೆ ಹೊಂದಿದ್ದಾರೆ. ಹೀಗಾಗಿ ಆಗಾಗ ಸಾಮೂಹಿಕ ಲಕ್ಷ್ಮೀ ಮತ್ತು ಸತ್ಯನಾರಾಯಣ ಪೂಜೆಗಳನ್ನು ಏರ್ಪಡಿಸಿ ಜನರನ್ನು ಭಕ್ತಿಯ ಮಾರ್ಗದ ಮೂಲಕ ಸಂಘಟಿಸುತ್ತಿದ್ದೇವೆ’ ಎಂದರು.</p>.<p>‘ನಮ್ಮ ಯೋಜನೆಯ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ, ನಿರ್ಗತಿಕರಿಗೆ ಉಚಿತ ಮನೆ, ಜ್ಞಾನವಿಕಾಸ ಕಾರ್ಯಕ್ರಮ, ಕೆರೆ ಹೂಳು ಎತ್ತುವುದು. ದೇವಸ್ಥಾನದ ಅಭಿವೃದ್ಧಿಗೆ ಧನ ಸಹಾಯ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತಿವೆ’ ಎಂದು ಮಾಹಿತಿ ನೀಡಿದರು.</p>.<p>ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಪೂಜೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಕೆಂಗೂರಿ, ಮುಖಂಡರಾದ ಹಣಮಗೌಡ ದಳಪತಿ, ಸುರೇಂದ್ರನಾಯಕ, ಮಲ್ಲಯ್ಯ ಬಂಢಾರಿ, ಸುರೇಶ ಚೆಟ್ಟಿ, ಪೂಜಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ದೇವಮ್ಮ ದೊರೆ ಇತರರು ಭಾಗವಹಿಸಿದ್ದರು.</p>.<p>ತಾಲ್ಲೂಕು ಯೋಜನಾಧಿಕಾರಿ ನಾಗೇಶ್ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಜಯಶ್ರೀ ಅಂಗಡಿ ವಂದಿಸಿದರು. ಮೇಲ್ವಿಚಾರಕರಾದ ಅನಿತಾ, ವಿನೋದ, ಸಿದ್ದರಾಮ, ಅಶೋಕ, ದತ್ತಾತ್ರೇಯ, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಪ್ರಗತಿ ಬಂಧು ಸಂಘದ ಸದಸ್ಯರು ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ‘ನಮ್ಮ ಸನಾತನ ಪರಂಪರೆಯಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಒಬ್ಬ ಅಧಿದೇವತೆಗಳಿದ್ದಾರೆ. ಸಂಪತ್ತಿಗೆ ಲಕ್ಷ್ಮೀಯ ಅನುಗ್ರಹ ಬೇಕು. ಲಕ್ಷ್ಮೀಪೂಜೆ ಭಕ್ತಿಯಿಂದ ಮಾಡಿದರೆ ಖಂಡಿತ ಅವಳ ಅನುಗ್ರಹ ದೊರಕುತ್ತದೆ’ ಎಂದು ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯರು ಹೇಳಿದರು.</p>.<p>ತಾಲ್ಲೂಕಿನ ರುಕ್ಮಾಪುರದ ಬನಶಂಕರಿ ದೇಗುಲದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ಲಕ್ಷ್ಮೀ ಪೂಜೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಧರ್ಮಸ್ಥಳದ ಡಿ. ವಿರೇಂದ್ರ ಹೆಗ್ಗಡೆಯವರು ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಎಂಬ ಸಿದ್ಧಾಂತದಡಿ ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಿದ್ದಾರೆ. ಯೋಜನೆಯಡಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಸಂಘದ ಸದಸ್ಯರನ್ನು ಆರ್ಥಿಕವಾಗಿ ಸದೃಢ ಮಾಡುತ್ತಿರುವುದು ಪ್ರಶಂಶನೀಯ’ ಎಂದರು.</p>.<p>ಯೋಜನೆಯ ಜಿಲ್ಲಾ ನಿರ್ದೇಶಕ ವಸಂತಗೌಡ ಮಾತನಾಡಿ, ‘ದೇವರ ಪೂಜೆಯಲ್ಲಿ ನಮ್ಮ ಜನ ಅಪಾರ ಶ್ರದ್ಧೆ ಹೊಂದಿದ್ದಾರೆ. ಹೀಗಾಗಿ ಆಗಾಗ ಸಾಮೂಹಿಕ ಲಕ್ಷ್ಮೀ ಮತ್ತು ಸತ್ಯನಾರಾಯಣ ಪೂಜೆಗಳನ್ನು ಏರ್ಪಡಿಸಿ ಜನರನ್ನು ಭಕ್ತಿಯ ಮಾರ್ಗದ ಮೂಲಕ ಸಂಘಟಿಸುತ್ತಿದ್ದೇವೆ’ ಎಂದರು.</p>.<p>‘ನಮ್ಮ ಯೋಜನೆಯ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ, ನಿರ್ಗತಿಕರಿಗೆ ಉಚಿತ ಮನೆ, ಜ್ಞಾನವಿಕಾಸ ಕಾರ್ಯಕ್ರಮ, ಕೆರೆ ಹೂಳು ಎತ್ತುವುದು. ದೇವಸ್ಥಾನದ ಅಭಿವೃದ್ಧಿಗೆ ಧನ ಸಹಾಯ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತಿವೆ’ ಎಂದು ಮಾಹಿತಿ ನೀಡಿದರು.</p>.<p>ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಪೂಜೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಕೆಂಗೂರಿ, ಮುಖಂಡರಾದ ಹಣಮಗೌಡ ದಳಪತಿ, ಸುರೇಂದ್ರನಾಯಕ, ಮಲ್ಲಯ್ಯ ಬಂಢಾರಿ, ಸುರೇಶ ಚೆಟ್ಟಿ, ಪೂಜಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ದೇವಮ್ಮ ದೊರೆ ಇತರರು ಭಾಗವಹಿಸಿದ್ದರು.</p>.<p>ತಾಲ್ಲೂಕು ಯೋಜನಾಧಿಕಾರಿ ನಾಗೇಶ್ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಜಯಶ್ರೀ ಅಂಗಡಿ ವಂದಿಸಿದರು. ಮೇಲ್ವಿಚಾರಕರಾದ ಅನಿತಾ, ವಿನೋದ, ಸಿದ್ದರಾಮ, ಅಶೋಕ, ದತ್ತಾತ್ರೇಯ, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಪ್ರಗತಿ ಬಂಧು ಸಂಘದ ಸದಸ್ಯರು ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>