<p><strong>ಸುರಪುರ (ಯಾದಗಿರಿ ಜಿಲ್ಲೆ):</strong> ಕೌಟುಂಬಿಕ ವಿಚಾರಕ್ಕೆ ಭಾನುವಾರ ತಡರಾತ್ರಿ ಪತ್ನಿಯನ್ನು ಕೊಡಲಿಯಿಂದ ಕೊಲೆ ಮಾಡಿದ ಪತಿಯು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.</p>.<p>ನಗರದ ತವರು ಮನೆಯಲ್ಲಿದ್ದ ಕಕ್ಕೇರಾ ಸಮೀಪದ ಹಿರಿಹಳ್ಳ ನಿವಾಸಿ ಮರೆಮ್ಮ ಸಂಗಪ್ಪ (30) ಕೊಲೆಯಾದವರು. ಹಿರಿಹಳ್ಳದ ಸಂಗಪ್ಪ ಬಸಣ್ಣ ಕೊಲೆ ಮಾಡಿ ಸುರಪುರ ಠಾಣೆಯ ಪೊಲೀಸರಿಗೆ ಶರಣಾದವನು.</p>.<p>12 ವರ್ಷಗಳ ಹಿಂದೆ ಸಂಗಪ್ಪ–ಮರೆಮ್ಮ ಅವರ ಮದುವೆ ಆಗಿತ್ತು. ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ವರ್ಷದ ಹಿಂದೆಯೇ ಮರೆಮ್ಮ ತವರು ಮನೆಗೆ ಬಂದು ಉಳಿದುಕೊಂಡಿದ್ದು, ಸಂಗಪ್ಪ ಆಗಾಗ ಬಂದು ಹೋಗುತ್ತಿದ್ದ.</p>.<p>ದಸರಾ ಹಬ್ಬಕ್ಕೆ ಬಂದಿದ್ದ ಸಂಗಪ್ಪ ಭಾನುವಾರ ತಡರಾತ್ರಿ ಪತ್ನಿ ಜೊತೆಗೆ ಗಲಾಟೆ ಮಾಡಿಕೊಂಡಿದ್ದ. ಮರೆಮ್ಮ ಅವರ ಸಹೋದರರ ಕೋಣೆಗಳಿಗೆ ಹೊರಗಿನಿಂದ ಕೊಂಡಿ ಹಾಕಿ, ಕೊಡಲಿಯಿಂದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಆ ಬಳಿಕ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ (ಯಾದಗಿರಿ ಜಿಲ್ಲೆ):</strong> ಕೌಟುಂಬಿಕ ವಿಚಾರಕ್ಕೆ ಭಾನುವಾರ ತಡರಾತ್ರಿ ಪತ್ನಿಯನ್ನು ಕೊಡಲಿಯಿಂದ ಕೊಲೆ ಮಾಡಿದ ಪತಿಯು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.</p>.<p>ನಗರದ ತವರು ಮನೆಯಲ್ಲಿದ್ದ ಕಕ್ಕೇರಾ ಸಮೀಪದ ಹಿರಿಹಳ್ಳ ನಿವಾಸಿ ಮರೆಮ್ಮ ಸಂಗಪ್ಪ (30) ಕೊಲೆಯಾದವರು. ಹಿರಿಹಳ್ಳದ ಸಂಗಪ್ಪ ಬಸಣ್ಣ ಕೊಲೆ ಮಾಡಿ ಸುರಪುರ ಠಾಣೆಯ ಪೊಲೀಸರಿಗೆ ಶರಣಾದವನು.</p>.<p>12 ವರ್ಷಗಳ ಹಿಂದೆ ಸಂಗಪ್ಪ–ಮರೆಮ್ಮ ಅವರ ಮದುವೆ ಆಗಿತ್ತು. ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ವರ್ಷದ ಹಿಂದೆಯೇ ಮರೆಮ್ಮ ತವರು ಮನೆಗೆ ಬಂದು ಉಳಿದುಕೊಂಡಿದ್ದು, ಸಂಗಪ್ಪ ಆಗಾಗ ಬಂದು ಹೋಗುತ್ತಿದ್ದ.</p>.<p>ದಸರಾ ಹಬ್ಬಕ್ಕೆ ಬಂದಿದ್ದ ಸಂಗಪ್ಪ ಭಾನುವಾರ ತಡರಾತ್ರಿ ಪತ್ನಿ ಜೊತೆಗೆ ಗಲಾಟೆ ಮಾಡಿಕೊಂಡಿದ್ದ. ಮರೆಮ್ಮ ಅವರ ಸಹೋದರರ ಕೋಣೆಗಳಿಗೆ ಹೊರಗಿನಿಂದ ಕೊಂಡಿ ಹಾಕಿ, ಕೊಡಲಿಯಿಂದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಆ ಬಳಿಕ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>