<p>ಸುರಪುರ: ‘ಕೆಲವರು ಸರಳ ಅನುಕರಣೆ ಮಾಡಿ ಸಾಹಿತ್ಯ ಬರೆಯುತ್ತಾರೆ. ಇನ್ನು ಹಲವರು ಮಾದರಿಗಳನ್ನು ಅರಗಿಸಿಕೊಂಡು ರಚಿಸುತ್ತಾರೆ. ಆದರೆ ಸ್ವಾನುಭವದ ಸುಖವನ್ನು ಅನುಭವಿಸಿ ಬರೆಯುವ ಸಾಹಿತ್ಯ ಕೊನೆವರೆಗೆ ಉಳಿಯುತ್ತದೆ’ ಎಂದು ಖ್ಯಾತ ಕಥೆಗಾರ ಟಿ.ಎಸ್. ಗೊರವರ ಪ್ರತಿಪಾದಿಸಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅರುಣ ಪ್ರಕಾಶನ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಗಝಲ್ ಪುಸಕ್ತಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಓದುಗರ ಮುಗ್ಧತೆ ಮತ್ತು ತಲ್ಲೀನತೆ ಒಂದು ಕಾವ್ಯದ ಯಶಸ್ಸಿನ ಮೂಲಾಧಾರ. ಸಾಹಿತ್ಯ ರಚನೆ ಸದುದ್ದೇಶದಿಂದ ಕೂಡಿರಬೇಕು. ಸಮಾಜದ ಬದಲಾವಣೆಗೆ, ಅಭಿವೃದ್ಧಿಗೆ ನೆರವಾಗಬೇಕು. ಅಂತಹ ಸಾಹಿತ್ಯ ರಚಿಸಲು ಸಾಹಿತಿಗಳು ಉತ್ಸುಕರಾಗಬೇಕು’ ಎಂದು ಸಲಹೆ ನೀಡಿದರು.</p>.<p>ಮುಖಂಡರಾದ ರಾಜಾ ಮುಕುಂದನಾಯಕ, ಸುರೇಶ ಸಜ್ಜನ್, ಸಾಹಿತಿಗಳಾದ ಶಾಂತಪ್ಪ ಬೂದಿಹಾಳ, ಶ್ರೀನಿವಾಸ ಜಾಲವಾದಿ, ಪ್ರಾಧ್ಯಾಪಕ ಮಲ್ಲಿನಾಥ ಯಾಳವರ, ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿದರು.</p>.<p>ಎಚ್. ರಾಠೋಡ ಅವರ ‘ಎನ್ನದೆಯ ಭಾವ ಕುಸುಮಗಳು ಮತ್ತು ವೆಂಕಟೇಶ ಪಾಟೀಲ ಅವರ ‘ಬನದ ಕೋಗಿಲೆಗಳು’ ಗಝಲ್ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.</p>.<p>ಪ್ರಭುಲಿಂಗ ಸ್ವಾಮೀಜಿ ಕಡ್ಲೆಪ್ಪಮಠ, ಹೈಕೋರ್ಟ್ ವಕೀಲ ಜೆ. ಅಗಸ್ಟಿನ್, ಹುಣಸಗಿ ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಲಭೀಮರಾಯ ದೇಸಾಯಿ, ಅರುಣ ಪ್ರಕಾಶನದ ಬೋರಮ್ಮ ಯಾಳವಾರ ಉಪಸ್ಥಿತರಿದ್ದರು.</p>.<p>ಕನಕಪ್ಪ ವಾಗಣಗೇರಿ ಸ್ವಾಗತಿಸಿದರು. ದೇವು ಹೆಬ್ಬಾಳ ನಿರೂಪಿಸಿದರು. ರಜಾಕ ಭಾಗವಾನ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುರಪುರ: ‘ಕೆಲವರು ಸರಳ ಅನುಕರಣೆ ಮಾಡಿ ಸಾಹಿತ್ಯ ಬರೆಯುತ್ತಾರೆ. ಇನ್ನು ಹಲವರು ಮಾದರಿಗಳನ್ನು ಅರಗಿಸಿಕೊಂಡು ರಚಿಸುತ್ತಾರೆ. ಆದರೆ ಸ್ವಾನುಭವದ ಸುಖವನ್ನು ಅನುಭವಿಸಿ ಬರೆಯುವ ಸಾಹಿತ್ಯ ಕೊನೆವರೆಗೆ ಉಳಿಯುತ್ತದೆ’ ಎಂದು ಖ್ಯಾತ ಕಥೆಗಾರ ಟಿ.ಎಸ್. ಗೊರವರ ಪ್ರತಿಪಾದಿಸಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅರುಣ ಪ್ರಕಾಶನ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಗಝಲ್ ಪುಸಕ್ತಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಓದುಗರ ಮುಗ್ಧತೆ ಮತ್ತು ತಲ್ಲೀನತೆ ಒಂದು ಕಾವ್ಯದ ಯಶಸ್ಸಿನ ಮೂಲಾಧಾರ. ಸಾಹಿತ್ಯ ರಚನೆ ಸದುದ್ದೇಶದಿಂದ ಕೂಡಿರಬೇಕು. ಸಮಾಜದ ಬದಲಾವಣೆಗೆ, ಅಭಿವೃದ್ಧಿಗೆ ನೆರವಾಗಬೇಕು. ಅಂತಹ ಸಾಹಿತ್ಯ ರಚಿಸಲು ಸಾಹಿತಿಗಳು ಉತ್ಸುಕರಾಗಬೇಕು’ ಎಂದು ಸಲಹೆ ನೀಡಿದರು.</p>.<p>ಮುಖಂಡರಾದ ರಾಜಾ ಮುಕುಂದನಾಯಕ, ಸುರೇಶ ಸಜ್ಜನ್, ಸಾಹಿತಿಗಳಾದ ಶಾಂತಪ್ಪ ಬೂದಿಹಾಳ, ಶ್ರೀನಿವಾಸ ಜಾಲವಾದಿ, ಪ್ರಾಧ್ಯಾಪಕ ಮಲ್ಲಿನಾಥ ಯಾಳವರ, ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿದರು.</p>.<p>ಎಚ್. ರಾಠೋಡ ಅವರ ‘ಎನ್ನದೆಯ ಭಾವ ಕುಸುಮಗಳು ಮತ್ತು ವೆಂಕಟೇಶ ಪಾಟೀಲ ಅವರ ‘ಬನದ ಕೋಗಿಲೆಗಳು’ ಗಝಲ್ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.</p>.<p>ಪ್ರಭುಲಿಂಗ ಸ್ವಾಮೀಜಿ ಕಡ್ಲೆಪ್ಪಮಠ, ಹೈಕೋರ್ಟ್ ವಕೀಲ ಜೆ. ಅಗಸ್ಟಿನ್, ಹುಣಸಗಿ ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಲಭೀಮರಾಯ ದೇಸಾಯಿ, ಅರುಣ ಪ್ರಕಾಶನದ ಬೋರಮ್ಮ ಯಾಳವಾರ ಉಪಸ್ಥಿತರಿದ್ದರು.</p>.<p>ಕನಕಪ್ಪ ವಾಗಣಗೇರಿ ಸ್ವಾಗತಿಸಿದರು. ದೇವು ಹೆಬ್ಬಾಳ ನಿರೂಪಿಸಿದರು. ರಜಾಕ ಭಾಗವಾನ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>