<p><strong>ಯಾದಗಿರಿ:</strong> ಪರಿಚಯ ಪತ್ರ ನೀಡುವುದು, ಸ್ಲಂ ಘೋಷಣೆ ಮಾಡುವುದು, ಮನೆಗಳನ್ನು ಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾವಿತ್ರಿಬಾಯಿ ಫುಲೆ ಹಾಗೂ ಸ್ಲಂ ಜನಾಂದೋಲನ ನಡೆಸುತ್ತಿರುವ ಅನಿರ್ದಿಷ್ಟಾವಧಿಧರಣಿ ಭಾನುವಾರ 5ನೇ ದಿನ ಪೂರೈಸಿ ಆರನೇ ದಿನಕ್ಕೆ ಕಾಲಿಟ್ಟಿದೆ.</p>.<p>ಜಿಲ್ಲಾಡಳಿತ ಮೌಖಿಕ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯದೇ ಧರಣಿ ಮುಂದುವರಿಸಲಾಗಿದೆ ಎಂದು ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಹಾಗೂ ಸ್ಲಂ ಜನಾಂದೋಲನ ಮುಖಂಡರಾದ ರೇಣುಕಾ ಸರಡಗಿ, ಹಣಮಂತ ಶಹಾಪುರಕರ್ ತಿಳಿಸಿದ್ದಾರೆ.</p>.<p>ಧರಣಿಯ 4ನೇ ದಿನದ ಅಂತ್ಯಕ್ಕೆ ಜಿಲ್ಲಾಡಳಿತದ ಪರವಾಗಿ ನಡೆದ ಸಂಧಾನ ಮಾತುಕತೆ ವಿಫಲವಾಗಿದ್ದು, ಹೋರಾಟ ಮುಂದುವರೆದಿದೆ ಎಂದು ತಿಳಿಸಿದ್ದಾರೆ.</p>.<p>ಪರಿಚಯ ಪತ್ರ ನೀಡಲಾಗುವುದು ಮತ್ತು ಸ್ಲಂ ಘೋಷಣೆ ಮಾಡಲಾಗುವುದು ಎಂದು ಕೇವಲ ಮೌಖಿಕ ಭರವಸೆ ನೀಡಿದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಕೇವಲ ಹಾರಿಕೆ ಉತ್ತರ ನೀಡಿದ್ದರಿಂದ ಪ್ರತಿಭಟನೆ ಮುಂದುವರೆಯಲಿದೆ ಎಂದು ತಿಳಿಸಿದರು.</p>.<p>ಧರಣಿಯಲ್ಲಿ ಸಂಗೀತಾ ಹಪ್ಪಳ, ಯಂಕಮ್ಮ ಮಾಳಿಕೇರಿ, ಈರಮ್ಮ ಕೌಳೂರು, ಸಂಗೀತಾ ಅರಿಕೇರಿ, ಆನಂದ ಚಟ್ಟೆರಕರ್, ನಿರ್ಮಲಾ ಸುಂಗಲ್ಕರ್, ನಿರ್ಮಲಾ ನಾಟೇಕರ್, ಬಾಬುಮಿಯಾ, ಸ್ವಾಮಿನಾಥನ್, ಗಫೂರ ಸಾಬ, ಆನಂದ, ಗೌರಮ್ಮ, ಶ್ರೀಮತಿ ರುದ್ರಯ್ಯಸ್ವಾಮಿ, ಮಹಮ್ಮದ್, ಅಕ್ಬರ್ ಸೇರಿದಂತೆ ವಿವಿಧ ಸ್ಲಂ ನಿವಾಸಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಪರಿಚಯ ಪತ್ರ ನೀಡುವುದು, ಸ್ಲಂ ಘೋಷಣೆ ಮಾಡುವುದು, ಮನೆಗಳನ್ನು ಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾವಿತ್ರಿಬಾಯಿ ಫುಲೆ ಹಾಗೂ ಸ್ಲಂ ಜನಾಂದೋಲನ ನಡೆಸುತ್ತಿರುವ ಅನಿರ್ದಿಷ್ಟಾವಧಿಧರಣಿ ಭಾನುವಾರ 5ನೇ ದಿನ ಪೂರೈಸಿ ಆರನೇ ದಿನಕ್ಕೆ ಕಾಲಿಟ್ಟಿದೆ.</p>.<p>ಜಿಲ್ಲಾಡಳಿತ ಮೌಖಿಕ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯದೇ ಧರಣಿ ಮುಂದುವರಿಸಲಾಗಿದೆ ಎಂದು ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಹಾಗೂ ಸ್ಲಂ ಜನಾಂದೋಲನ ಮುಖಂಡರಾದ ರೇಣುಕಾ ಸರಡಗಿ, ಹಣಮಂತ ಶಹಾಪುರಕರ್ ತಿಳಿಸಿದ್ದಾರೆ.</p>.<p>ಧರಣಿಯ 4ನೇ ದಿನದ ಅಂತ್ಯಕ್ಕೆ ಜಿಲ್ಲಾಡಳಿತದ ಪರವಾಗಿ ನಡೆದ ಸಂಧಾನ ಮಾತುಕತೆ ವಿಫಲವಾಗಿದ್ದು, ಹೋರಾಟ ಮುಂದುವರೆದಿದೆ ಎಂದು ತಿಳಿಸಿದ್ದಾರೆ.</p>.<p>ಪರಿಚಯ ಪತ್ರ ನೀಡಲಾಗುವುದು ಮತ್ತು ಸ್ಲಂ ಘೋಷಣೆ ಮಾಡಲಾಗುವುದು ಎಂದು ಕೇವಲ ಮೌಖಿಕ ಭರವಸೆ ನೀಡಿದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಕೇವಲ ಹಾರಿಕೆ ಉತ್ತರ ನೀಡಿದ್ದರಿಂದ ಪ್ರತಿಭಟನೆ ಮುಂದುವರೆಯಲಿದೆ ಎಂದು ತಿಳಿಸಿದರು.</p>.<p>ಧರಣಿಯಲ್ಲಿ ಸಂಗೀತಾ ಹಪ್ಪಳ, ಯಂಕಮ್ಮ ಮಾಳಿಕೇರಿ, ಈರಮ್ಮ ಕೌಳೂರು, ಸಂಗೀತಾ ಅರಿಕೇರಿ, ಆನಂದ ಚಟ್ಟೆರಕರ್, ನಿರ್ಮಲಾ ಸುಂಗಲ್ಕರ್, ನಿರ್ಮಲಾ ನಾಟೇಕರ್, ಬಾಬುಮಿಯಾ, ಸ್ವಾಮಿನಾಥನ್, ಗಫೂರ ಸಾಬ, ಆನಂದ, ಗೌರಮ್ಮ, ಶ್ರೀಮತಿ ರುದ್ರಯ್ಯಸ್ವಾಮಿ, ಮಹಮ್ಮದ್, ಅಕ್ಬರ್ ಸೇರಿದಂತೆ ವಿವಿಧ ಸ್ಲಂ ನಿವಾಸಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>