<p><strong>ಯಾದಗಿರಿ</strong> : ತಮ್ಮ ಸಾಧನೆಯಿಂದ ಸಿದ್ದಿಯ ಶಿಖರವನ್ನೇರಿದ ವಿಶ್ವಾರಾಧ್ಯರು ಲೋಕವನ್ನು ಉದ್ದರಿಸಿದ ಸಿದ್ದಿಪುರುಷರೆಂದು ಕಾಶಿ ವಾರಣಾಸಿ ಪೀಠದ ನೂತನ ಜಗದ್ಗುರು ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.</p>.<p>ತಾಲ್ಲೂಕಿನ ಅಬ್ಬೆತುಮಕೂರಿನ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವರಾಧ್ಯರ ತೊಟ್ಟಿಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.</p>.<p>ಗಂವ್ಹಾರದ ಗರ್ಭಾಂಬುಧಿಯಲ್ಲಿ ಅವತರಿಸಿ ಬಾಲ್ಯದಲ್ಲಿಯೇ ಅನಂತ ಲೀಲಾ ವಿನೋದಗಳನ್ನು ತೋರಿಸಿದ ವಿಶ್ವಾರಾಧ್ಯರು ಕಾಶಿಯಲ್ಲಿ ವಿದ್ಯೆಯನ್ನು ಪಡೆದು ಪಾರಂಗತರಾಗಿ ಕಾಶಿ ಘನ ಪಂಡಿತರೆಂದು ಜನಜನಿತವಾದ ಮಹಿಮಾ ಪುರಷರು ಅವರಾಗಿದ್ದರೆಂದು ಬಣ್ಣಿಸಿದರು.</p>.<p>ತಾವು ಸಂಪಾದಿಸಿದ ಜ್ಞಾನಸುಧೆಯನ್ನು ನಾಡಿನ ಜನತೆಗೆ ಉಣಬಡಿಸಲು ಲೋಕಸಂಚಾರ ಕೈಗೊಳ್ಳುತ್ತಾರೆ. ಜಗದ ಜನರನ್ನು ಉದ್ದರಿಸುತ್ತಾ ನಾಡ ಸಂಚಾರ ಮಾಡಿದ ವಿಶ್ವಾರಾಧ್ಯರು ಜಗದೊಡೆಯ ಆಗಿದ್ದಾರೆ ಎಂದು<br />ಹೇಳಿದರು.</p>.<p>ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಮಠದ ಒಡೆಯರಾಗಿ ವಿಶ್ವಾರಾಧ್ಯರ ಪರಂಪರೆಯನ್ನು ಪುನರುತ್ಥಾನ ಮಾಡುವಲ್ಲಿ ಬದ್ದಕಂಕಣರಾಗಿ ಜನೋಪಯೋಗಿ ಮತ್ತು ಲೋಕಕಲ್ಯಾಣದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಶ್ರೀಮಠವನ್ನು ಉತ್ತರೋತ್ತರವಾಗಿ ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.</p>.<p>ಜಗದ ಜನರ ಒಳಿತನ್ನು ಬಯಸಿ ಲೋಕಕಲ್ಯಾಣಕ್ಕಾಗಿ ಇದೀಗ ಅತಿರುದ್ರಯಾಗದಂತಹ ಬೃಹತ್ ಸಮಾರಂಭವನ್ನು ಹಮ್ಮಿಕೊಳ್ಳುವ ಮೂಲಕ ಜನತೆಯಲ್ಲಿ ಭಕ್ತಿ, ಸದಾಚಾರ, ಸಾತ್ವಿಕತೆಗಳನ್ನು ಮೂಡುವಂತೆ ಮಾಡಲು ಈ ಕಾರ್ಯಕ್ರಮ ಕಾರಣೀಭೂತವಾಗುತ್ತದೆ ಎಂದು ಹೇಳಿದರು.</p>.<p>ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಮಾತನಾಡಿ, ವಿಶ್ವಾರಾಧ್ಯರ ಕೃಪಾಶೀರ್ವಾದದ ಬೆಳಕಿನಲ್ಲಿ ಮಠವನ್ನು ಮುನ್ನಡೆಸಿಕೊಂಡು ಬಂದು ಇಷ್ಟೊಂದು ಪ್ರಮಾಣದ ಅಭಿವೃದ್ಧಿ ಮತ್ತು ಏಳ್ಗೆಗೆ ವಿಶ್ವಾರಾಧ್ಯರ ಕೃಪೆ ಹಾಗೂ ಶ್ರೀಮಠದ ಸಮಸ್ತ ಭಕ್ತರ ಸಹಕಾರವೇ ಕಾರಣವೆಂದು ಸ್ಮರಿಸಿದರು.</p>.<p>ಶ್ರೀಮಠದಲ್ಲಿ ವಿಶ್ವಾರಾಧ್ಯರ ಮೂರ್ತಿ ಪುನರ್ಬಿಂಬ ಪ್ರತಿಷ್ಠಾಪನಾ ಹಿನ್ನಲೆಯಲ್ಲಿ ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ ಶ್ರೀಮಠದಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಈ ಬಾರಿ ಅತಿರುದ್ರಯಾಗ, 108 ಗೋಮಂಗಲ ಪೂಜೆ, ಅಷ್ಟಲಕ್ಷ್ಮೀ ಕುಬೇರ ಕುಂಕುಮ ಪೂಜೆ, 1008 ಉಮಾಮಹೇಶ್ವರಿ ಸಂತೃಪ್ತಿ ಸಮಾರಂಭ ಜೊತೆಗೆ ವಿಶ್ವಾರಾಧ್ಯರ ಭವ್ಯವಾದ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಹೀಗೆ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ವಾರವಿಡಿ ಶ್ರೀಮಠದಲ್ಲಿ ಜರುಗಲಿದ್ದು, ಭಕ್ತರು ಆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಶ್ವಾರಾಧ್ಯರ ಕೃಪಗೆ ಪಾತ್ರರಾಗುವಂತೆ<br />ಹೇಳಿದರು.</p>.<p>ಇದಕ್ಕೂ ಮುನ್ನ 108 ಗೋವುಗಳಿಗೆ ಭೀಮಾನದಿಯಲ್ಲಿ ಗಂಗಾಸ್ನಾನ ಮಾಡಿಸಿ ಮಂಗಲವಾದ್ಯಗಳ ಮೂಲಕ ಭವ್ಯವಾದ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಕರೆತರಲಾಯಿತು.</p>.<p>ಅಲ್ಲಿ ನಿರ್ಮಿಸಲಾದ 108 ಮಂಟಪಗಳಲ್ಲಿ 108 ಗೋವುಗಳನ್ನು ನಿಲ್ಲಿಸಿ 108 ದಂಪತಿಯಿಂದ ವಿಶೇಷ ಗೋಮಂಗಲ ಪೂಜೆ ನೆರವೇರಿಸಲಾಯಿತು.</p>.<p>ನಂತರ ವಿಶ್ವಾರಾಧ್ಯರ ತೊಟ್ಟಿಲೋತ್ಸವ ಜರುಗಿತು. ತರುವಾಯ ಬಾಲಮುತೈದೆಯರಿಗೆ ಉಡಿತುಂಬುವ ಕಾರ್ಯವನ್ನು ನೆರವೇರಿಸಲಾಯಿತು. ಆಗಮಿಸಿದ ಎಲ್ಲ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ<br />ಕಲ್ಪಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong> : ತಮ್ಮ ಸಾಧನೆಯಿಂದ ಸಿದ್ದಿಯ ಶಿಖರವನ್ನೇರಿದ ವಿಶ್ವಾರಾಧ್ಯರು ಲೋಕವನ್ನು ಉದ್ದರಿಸಿದ ಸಿದ್ದಿಪುರುಷರೆಂದು ಕಾಶಿ ವಾರಣಾಸಿ ಪೀಠದ ನೂತನ ಜಗದ್ಗುರು ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.</p>.<p>ತಾಲ್ಲೂಕಿನ ಅಬ್ಬೆತುಮಕೂರಿನ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವರಾಧ್ಯರ ತೊಟ್ಟಿಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.</p>.<p>ಗಂವ್ಹಾರದ ಗರ್ಭಾಂಬುಧಿಯಲ್ಲಿ ಅವತರಿಸಿ ಬಾಲ್ಯದಲ್ಲಿಯೇ ಅನಂತ ಲೀಲಾ ವಿನೋದಗಳನ್ನು ತೋರಿಸಿದ ವಿಶ್ವಾರಾಧ್ಯರು ಕಾಶಿಯಲ್ಲಿ ವಿದ್ಯೆಯನ್ನು ಪಡೆದು ಪಾರಂಗತರಾಗಿ ಕಾಶಿ ಘನ ಪಂಡಿತರೆಂದು ಜನಜನಿತವಾದ ಮಹಿಮಾ ಪುರಷರು ಅವರಾಗಿದ್ದರೆಂದು ಬಣ್ಣಿಸಿದರು.</p>.<p>ತಾವು ಸಂಪಾದಿಸಿದ ಜ್ಞಾನಸುಧೆಯನ್ನು ನಾಡಿನ ಜನತೆಗೆ ಉಣಬಡಿಸಲು ಲೋಕಸಂಚಾರ ಕೈಗೊಳ್ಳುತ್ತಾರೆ. ಜಗದ ಜನರನ್ನು ಉದ್ದರಿಸುತ್ತಾ ನಾಡ ಸಂಚಾರ ಮಾಡಿದ ವಿಶ್ವಾರಾಧ್ಯರು ಜಗದೊಡೆಯ ಆಗಿದ್ದಾರೆ ಎಂದು<br />ಹೇಳಿದರು.</p>.<p>ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಮಠದ ಒಡೆಯರಾಗಿ ವಿಶ್ವಾರಾಧ್ಯರ ಪರಂಪರೆಯನ್ನು ಪುನರುತ್ಥಾನ ಮಾಡುವಲ್ಲಿ ಬದ್ದಕಂಕಣರಾಗಿ ಜನೋಪಯೋಗಿ ಮತ್ತು ಲೋಕಕಲ್ಯಾಣದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಶ್ರೀಮಠವನ್ನು ಉತ್ತರೋತ್ತರವಾಗಿ ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.</p>.<p>ಜಗದ ಜನರ ಒಳಿತನ್ನು ಬಯಸಿ ಲೋಕಕಲ್ಯಾಣಕ್ಕಾಗಿ ಇದೀಗ ಅತಿರುದ್ರಯಾಗದಂತಹ ಬೃಹತ್ ಸಮಾರಂಭವನ್ನು ಹಮ್ಮಿಕೊಳ್ಳುವ ಮೂಲಕ ಜನತೆಯಲ್ಲಿ ಭಕ್ತಿ, ಸದಾಚಾರ, ಸಾತ್ವಿಕತೆಗಳನ್ನು ಮೂಡುವಂತೆ ಮಾಡಲು ಈ ಕಾರ್ಯಕ್ರಮ ಕಾರಣೀಭೂತವಾಗುತ್ತದೆ ಎಂದು ಹೇಳಿದರು.</p>.<p>ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಮಾತನಾಡಿ, ವಿಶ್ವಾರಾಧ್ಯರ ಕೃಪಾಶೀರ್ವಾದದ ಬೆಳಕಿನಲ್ಲಿ ಮಠವನ್ನು ಮುನ್ನಡೆಸಿಕೊಂಡು ಬಂದು ಇಷ್ಟೊಂದು ಪ್ರಮಾಣದ ಅಭಿವೃದ್ಧಿ ಮತ್ತು ಏಳ್ಗೆಗೆ ವಿಶ್ವಾರಾಧ್ಯರ ಕೃಪೆ ಹಾಗೂ ಶ್ರೀಮಠದ ಸಮಸ್ತ ಭಕ್ತರ ಸಹಕಾರವೇ ಕಾರಣವೆಂದು ಸ್ಮರಿಸಿದರು.</p>.<p>ಶ್ರೀಮಠದಲ್ಲಿ ವಿಶ್ವಾರಾಧ್ಯರ ಮೂರ್ತಿ ಪುನರ್ಬಿಂಬ ಪ್ರತಿಷ್ಠಾಪನಾ ಹಿನ್ನಲೆಯಲ್ಲಿ ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ ಶ್ರೀಮಠದಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಈ ಬಾರಿ ಅತಿರುದ್ರಯಾಗ, 108 ಗೋಮಂಗಲ ಪೂಜೆ, ಅಷ್ಟಲಕ್ಷ್ಮೀ ಕುಬೇರ ಕುಂಕುಮ ಪೂಜೆ, 1008 ಉಮಾಮಹೇಶ್ವರಿ ಸಂತೃಪ್ತಿ ಸಮಾರಂಭ ಜೊತೆಗೆ ವಿಶ್ವಾರಾಧ್ಯರ ಭವ್ಯವಾದ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಹೀಗೆ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ವಾರವಿಡಿ ಶ್ರೀಮಠದಲ್ಲಿ ಜರುಗಲಿದ್ದು, ಭಕ್ತರು ಆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಶ್ವಾರಾಧ್ಯರ ಕೃಪಗೆ ಪಾತ್ರರಾಗುವಂತೆ<br />ಹೇಳಿದರು.</p>.<p>ಇದಕ್ಕೂ ಮುನ್ನ 108 ಗೋವುಗಳಿಗೆ ಭೀಮಾನದಿಯಲ್ಲಿ ಗಂಗಾಸ್ನಾನ ಮಾಡಿಸಿ ಮಂಗಲವಾದ್ಯಗಳ ಮೂಲಕ ಭವ್ಯವಾದ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಕರೆತರಲಾಯಿತು.</p>.<p>ಅಲ್ಲಿ ನಿರ್ಮಿಸಲಾದ 108 ಮಂಟಪಗಳಲ್ಲಿ 108 ಗೋವುಗಳನ್ನು ನಿಲ್ಲಿಸಿ 108 ದಂಪತಿಯಿಂದ ವಿಶೇಷ ಗೋಮಂಗಲ ಪೂಜೆ ನೆರವೇರಿಸಲಾಯಿತು.</p>.<p>ನಂತರ ವಿಶ್ವಾರಾಧ್ಯರ ತೊಟ್ಟಿಲೋತ್ಸವ ಜರುಗಿತು. ತರುವಾಯ ಬಾಲಮುತೈದೆಯರಿಗೆ ಉಡಿತುಂಬುವ ಕಾರ್ಯವನ್ನು ನೆರವೇರಿಸಲಾಯಿತು. ಆಗಮಿಸಿದ ಎಲ್ಲ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ<br />ಕಲ್ಪಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>