<p><strong>ಯಾದಗಿರಿ: </strong>ಕ್ಷಯರೋಗ ಪತ್ತೆಯಲ್ಲಿ ಜಿಲ್ಲೆಯೂ 19ನೇ ಸ್ಥಾನಕ್ಕೆ ಇಳಿದಿದೆ. 2019ರಲ್ಲಿ 28ನೇ ಸ್ಥಾನದಲ್ಲಿತ್ತು. 2020ರಲ್ಲಿ ಹೆಚ್ಚು ಕ್ಷಯರೋಗಿಗಳನ್ನು ಪತ್ತೆ ಹಚ್ಚುವ ಮೂಲಕ ಕ್ಷಯ ರೋಗ ನಿರ್ಮೂಲನೆಗೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.</p>.<p>ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ದಿನ ಆಚರಿಸಲಾಗುತ್ತಿದೆ. ‘ಕ್ಷಯರೋಗ ನಿರ್ಮೂಲನೆಗೆ ಕಾಲ ಘಟಿಸುತ್ತಿದೆ’ ಎನ್ನುವುದು ಈ ವರ್ಷದ ಘೋಷ ವಾಕ್ಯವಾಗಿದೆ.</p>.<p>ಕ್ಷಯರೋಗ (ಟಿಬಿ) ಒಂದು ಸಾಂಕ್ರಾಮಿಕ ಕಾಯಿಲೆಯಾಗಿದೆ. ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್ಕ್ಯೂಲೋಸಿಸ್ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಕೆಮ್ಮುವುದರ ಮೂಲಕ ಗಾಳಿಯ ಮೂಲಕ ಹರಡುತ್ತದೆ. ನಿರಂತರವಾಗಿ ವಾಸಿಯಾಗದ ಕೆಮ್ಮು ಟಿಬಿಯ ಅತಿ ಸಾಮಾನ್ಯ ಲಕ್ಷಣವಾಗಿದೆ.</p>.<p>ಜಿಲ್ಲೆಯ ಸಾರ್ವಜನಿಕರು ಮಹಾನಗರಗಳಿಗೆ ವಲಸೆ ಹೋಗುವುದು ಸಾಮಾನ್ಯ ಸಂಗತಿ. ಇಂಥ ವೇಳೆ ಕ್ಷಯರೋಗಿಗಳು ಔಷಧಿ ಬಿಟ್ಟರೆ ಅದು ಮತ್ತೊಂದು ಅನಾಹುತಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ.</p>.<p>‘ಎಚ್ಐವಿ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷಯರೋಗ ಬಂದೆ ಸಾಯುತ್ತಾರೆ. ಹೀಗಾಗಿ ಕನಿಷ್ಠ 6 ತಿಂಗಳು ಚಿಕಿತ್ಸೆ ಪಡೆದರೆ ಗುಣಮುಖರಾಗಲು ಸಾಧ್ಯ. ಹೀಗಾಗಿ ಕ್ಷಯರೋಗಿಗಳು ತಪ್ಪದೇ ಚಿಕಿತ್ಸೆ ಪಡೆಯಬೇಕು ಎನ್ನುತ್ತಾರೆ’ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳು.</p>.<p class="Subhead">ಮರಣ ಪ್ರಮಾಣ: ಜಿಲ್ಲೆಯಲ್ಲಿ ಸಾವಿರ ಕ್ಷಯ ರೋಗಿಗಳಲ್ಲಿ ಕೇವಲ 10 ಜನರು ಮೃತಪಡುತ್ತಿದ್ದಾರೆ. 2015ರಲ್ಲಿ ಶೇ 10, 2016ರಲ್ಲಿ ಶೇ 11, 2017ರಲ್ಲಿ ಶೇ 6, 2018ರಲ್ಲಿ ಶೇ 6.2, 2019ರಲ್ಲಿ 7.6, 2020ರಲ್ಲಿ ಶೇ 6.3ರಷ್ಟು ಸಾವಿನ ಪ್ರಮಾಣ ದಾಖಲಾಗಿದೆ.</p>.<p>ಚಿಕಿತ್ಸೆ ಪಡೆದವರ ಸಂಖ್ಯೆ ಕಡಿಮೆ:ಜಿಲ್ಲೆಯಲ್ಲಿ 2015ರಲ್ಲಿ ಶೇ100ರಲ್ಲಿ ಶೇ 12ರಷ್ಟು ರೋಗಿಗಳು ಒಂದೆರಡು ತಿಂಗಳು ಪಡೆದು ನಂತರ ಔಷಧಿ ಸೇವನೆ ಬಿಟ್ಟುಬಿಡುತ್ತಿದ್ದರು. ಈಗ 2020ರಲ್ಲಿ ಶೇ 1.6ರಷ್ಟು ಮಾತ್ರ ಔಷಧಿ ಪಡೆಯದೇ ಇರುವ ರೋಗಿಗಳುಕಂಡು ಬರುತ್ತಿದ್ದಾರೆ.</p>.<p class="Subhead"><strong>ಕ್ಷಯ ರೋಗ ಶಂಕಿತರು: </strong>2015ರಿಂದ 2020ರ ವರೆಗೆ ಕ್ಷಯರೋಗ ಶಂಕಿತರನ್ನು ಪತ್ತೆ ಹಚ್ಚಿ ಅವರನ್ನು ತಪಾಸಣೆ ಮಾಡಲಾಗುತ್ತಿದೆ.<br />2015ರಲ್ಲಿ 9,289, 2016ರಲ್ಲಿ 9,258, 2017ರಲ್ಲಿ 8,821, 2018ರಲ್ಲಿ 11,721, 2019ರಲ್ಲಿ 17,715, 2020ರಲ್ಲಿ 11,337 ಶಂಕಿತರನ್ನು ಪತ್ತೆ ಹಚ್ಚಲಾಗಿದೆ.</p>.<p>‘ಒಬ್ಬ ಕ್ಷಯರೋಗಿ ತನ್ನ ಸುತ್ತಮುತ್ತಲಿನ 10 ಜನರಿಗೆ ಕ್ಷಯರೋಗವನ್ನು ಹರಡಬಲ್ಲನು. ಹೀಗಾಗಿ ನಾವು ಶಂಕಿತರನ್ನು ಪರೀಕ್ಷೆ ಮಾಡಿ ನಂತರ ಅವರಲ್ಲಿ ಕ್ಷಯ ಇರುವುದು ದೃಢಪಟ್ಟರೆ ಔಷಧಿ ಸೇವನೆಗೆ ಪ್ರೇರೇಪಿಸಲಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಲಕ್ಷ್ಮೀಕಾಂತ.</p>.<p>ಇದರ ಜೊತೆಗೆ ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಕ್ಷಯರೋಗಿಗೆ ಮಾಸಿಕ ₹500 ಆಹಾರದ ಸಲುವಾಗಿ ಗೌರವ ಧನ ಪೂರ್ಣ ಚಿಕಿತ್ಸೆ ಆಗುವವರಿಗೆ ನೀಡಲಾಗುತ್ತಿದೆ. ಕ್ಷಯ ರೋಗಿಯನ್ನು ಕಂಡು ಹಿಡಿದು ಕೊಟ್ಟ ಆಶಾ, ವೈದ್ಯರಿಗೂ ₹500 ಗೌರವ ಧನ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.</p>.<p class="Subhead">2025ರ ವೇಳೆ ಕ್ಷಯರೋಗ ನಿರ್ಮೂಲನೆ ಗುರಿ: ದೇಶದಲ್ಲಿ 2025ರ ವೇಳೆಗೆ ಕ್ಷಯರೋಗ ನಿರ್ಮೂಲನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಆದರಂತೆ ಜಿಲ್ಲೆಯಲ್ಲೂ ಈ ಗುರಿ ತಲುಪಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ.</p>.<p class="Subhead">ಡಯಾಲಿಸಿಸ್ಗಳಲ್ಲೂ ಟಿಬಿ: ಕ್ಷಯರೋಗ ಈಗ ಡಯಾಲಿಸಿಸ್ ರೋಗಿಗಳಲ್ಲೂ ಪತ್ತೆಯಾಗುತ್ತಿದೆ. ವೈದ್ಯರೂ ಕೂಡ ಡಯಾಲಿಸಿಸ್ ರೋಗಿಗಳನ್ನು ಟಿಬಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ.</p>.<p>ಜಿಲ್ಲೆಯಲ್ಲಿ 2017ರಿಂದ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. 2017ರಲ್ಲಿ ಶೇ 4.2, 2018ರಲ್ಲಿ ಶೇ 4.7, 2019ರಲ್ಲಿ ಶೇ 3.9, 2020ರಲ್ಲಿ ಶೇ 3.7 ರಷ್ಟು ರೋಗಿಗಳಲ್ಲಿ ಕ್ಷಯರೋಗ ಪತ್ತೆಯಾಗಿದೆ.</p>.<p>***<br />ಜಿಲ್ಲೆಯಲ್ಲಿ ಕ್ಷಯರೋಗಿಗಳ ಗುಣಮುಖದಲ್ಲಿ ಶೇ 83 ರಷ್ಟಿದೆ. ರೋಗಿಗಳು ನಿರಂತರ 6 ತಿಂಗಳು ಔಷಧಿ ತೆಗೆದುಕೊಂಡರೆ ನಿರ್ಮೂಲನೆ ಮಾಡಲು ಸಾಧ್ಯ.<br /><em><strong>-ಡಾ. ಲಕ್ಷ್ಮೀಕಾಂತ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ಕ್ಷಯರೋಗ ಪತ್ತೆಯಲ್ಲಿ ಜಿಲ್ಲೆಯೂ 19ನೇ ಸ್ಥಾನಕ್ಕೆ ಇಳಿದಿದೆ. 2019ರಲ್ಲಿ 28ನೇ ಸ್ಥಾನದಲ್ಲಿತ್ತು. 2020ರಲ್ಲಿ ಹೆಚ್ಚು ಕ್ಷಯರೋಗಿಗಳನ್ನು ಪತ್ತೆ ಹಚ್ಚುವ ಮೂಲಕ ಕ್ಷಯ ರೋಗ ನಿರ್ಮೂಲನೆಗೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.</p>.<p>ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ದಿನ ಆಚರಿಸಲಾಗುತ್ತಿದೆ. ‘ಕ್ಷಯರೋಗ ನಿರ್ಮೂಲನೆಗೆ ಕಾಲ ಘಟಿಸುತ್ತಿದೆ’ ಎನ್ನುವುದು ಈ ವರ್ಷದ ಘೋಷ ವಾಕ್ಯವಾಗಿದೆ.</p>.<p>ಕ್ಷಯರೋಗ (ಟಿಬಿ) ಒಂದು ಸಾಂಕ್ರಾಮಿಕ ಕಾಯಿಲೆಯಾಗಿದೆ. ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್ಕ್ಯೂಲೋಸಿಸ್ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಕೆಮ್ಮುವುದರ ಮೂಲಕ ಗಾಳಿಯ ಮೂಲಕ ಹರಡುತ್ತದೆ. ನಿರಂತರವಾಗಿ ವಾಸಿಯಾಗದ ಕೆಮ್ಮು ಟಿಬಿಯ ಅತಿ ಸಾಮಾನ್ಯ ಲಕ್ಷಣವಾಗಿದೆ.</p>.<p>ಜಿಲ್ಲೆಯ ಸಾರ್ವಜನಿಕರು ಮಹಾನಗರಗಳಿಗೆ ವಲಸೆ ಹೋಗುವುದು ಸಾಮಾನ್ಯ ಸಂಗತಿ. ಇಂಥ ವೇಳೆ ಕ್ಷಯರೋಗಿಗಳು ಔಷಧಿ ಬಿಟ್ಟರೆ ಅದು ಮತ್ತೊಂದು ಅನಾಹುತಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ.</p>.<p>‘ಎಚ್ಐವಿ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷಯರೋಗ ಬಂದೆ ಸಾಯುತ್ತಾರೆ. ಹೀಗಾಗಿ ಕನಿಷ್ಠ 6 ತಿಂಗಳು ಚಿಕಿತ್ಸೆ ಪಡೆದರೆ ಗುಣಮುಖರಾಗಲು ಸಾಧ್ಯ. ಹೀಗಾಗಿ ಕ್ಷಯರೋಗಿಗಳು ತಪ್ಪದೇ ಚಿಕಿತ್ಸೆ ಪಡೆಯಬೇಕು ಎನ್ನುತ್ತಾರೆ’ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳು.</p>.<p class="Subhead">ಮರಣ ಪ್ರಮಾಣ: ಜಿಲ್ಲೆಯಲ್ಲಿ ಸಾವಿರ ಕ್ಷಯ ರೋಗಿಗಳಲ್ಲಿ ಕೇವಲ 10 ಜನರು ಮೃತಪಡುತ್ತಿದ್ದಾರೆ. 2015ರಲ್ಲಿ ಶೇ 10, 2016ರಲ್ಲಿ ಶೇ 11, 2017ರಲ್ಲಿ ಶೇ 6, 2018ರಲ್ಲಿ ಶೇ 6.2, 2019ರಲ್ಲಿ 7.6, 2020ರಲ್ಲಿ ಶೇ 6.3ರಷ್ಟು ಸಾವಿನ ಪ್ರಮಾಣ ದಾಖಲಾಗಿದೆ.</p>.<p>ಚಿಕಿತ್ಸೆ ಪಡೆದವರ ಸಂಖ್ಯೆ ಕಡಿಮೆ:ಜಿಲ್ಲೆಯಲ್ಲಿ 2015ರಲ್ಲಿ ಶೇ100ರಲ್ಲಿ ಶೇ 12ರಷ್ಟು ರೋಗಿಗಳು ಒಂದೆರಡು ತಿಂಗಳು ಪಡೆದು ನಂತರ ಔಷಧಿ ಸೇವನೆ ಬಿಟ್ಟುಬಿಡುತ್ತಿದ್ದರು. ಈಗ 2020ರಲ್ಲಿ ಶೇ 1.6ರಷ್ಟು ಮಾತ್ರ ಔಷಧಿ ಪಡೆಯದೇ ಇರುವ ರೋಗಿಗಳುಕಂಡು ಬರುತ್ತಿದ್ದಾರೆ.</p>.<p class="Subhead"><strong>ಕ್ಷಯ ರೋಗ ಶಂಕಿತರು: </strong>2015ರಿಂದ 2020ರ ವರೆಗೆ ಕ್ಷಯರೋಗ ಶಂಕಿತರನ್ನು ಪತ್ತೆ ಹಚ್ಚಿ ಅವರನ್ನು ತಪಾಸಣೆ ಮಾಡಲಾಗುತ್ತಿದೆ.<br />2015ರಲ್ಲಿ 9,289, 2016ರಲ್ಲಿ 9,258, 2017ರಲ್ಲಿ 8,821, 2018ರಲ್ಲಿ 11,721, 2019ರಲ್ಲಿ 17,715, 2020ರಲ್ಲಿ 11,337 ಶಂಕಿತರನ್ನು ಪತ್ತೆ ಹಚ್ಚಲಾಗಿದೆ.</p>.<p>‘ಒಬ್ಬ ಕ್ಷಯರೋಗಿ ತನ್ನ ಸುತ್ತಮುತ್ತಲಿನ 10 ಜನರಿಗೆ ಕ್ಷಯರೋಗವನ್ನು ಹರಡಬಲ್ಲನು. ಹೀಗಾಗಿ ನಾವು ಶಂಕಿತರನ್ನು ಪರೀಕ್ಷೆ ಮಾಡಿ ನಂತರ ಅವರಲ್ಲಿ ಕ್ಷಯ ಇರುವುದು ದೃಢಪಟ್ಟರೆ ಔಷಧಿ ಸೇವನೆಗೆ ಪ್ರೇರೇಪಿಸಲಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಲಕ್ಷ್ಮೀಕಾಂತ.</p>.<p>ಇದರ ಜೊತೆಗೆ ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಕ್ಷಯರೋಗಿಗೆ ಮಾಸಿಕ ₹500 ಆಹಾರದ ಸಲುವಾಗಿ ಗೌರವ ಧನ ಪೂರ್ಣ ಚಿಕಿತ್ಸೆ ಆಗುವವರಿಗೆ ನೀಡಲಾಗುತ್ತಿದೆ. ಕ್ಷಯ ರೋಗಿಯನ್ನು ಕಂಡು ಹಿಡಿದು ಕೊಟ್ಟ ಆಶಾ, ವೈದ್ಯರಿಗೂ ₹500 ಗೌರವ ಧನ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.</p>.<p class="Subhead">2025ರ ವೇಳೆ ಕ್ಷಯರೋಗ ನಿರ್ಮೂಲನೆ ಗುರಿ: ದೇಶದಲ್ಲಿ 2025ರ ವೇಳೆಗೆ ಕ್ಷಯರೋಗ ನಿರ್ಮೂಲನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಆದರಂತೆ ಜಿಲ್ಲೆಯಲ್ಲೂ ಈ ಗುರಿ ತಲುಪಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ.</p>.<p class="Subhead">ಡಯಾಲಿಸಿಸ್ಗಳಲ್ಲೂ ಟಿಬಿ: ಕ್ಷಯರೋಗ ಈಗ ಡಯಾಲಿಸಿಸ್ ರೋಗಿಗಳಲ್ಲೂ ಪತ್ತೆಯಾಗುತ್ತಿದೆ. ವೈದ್ಯರೂ ಕೂಡ ಡಯಾಲಿಸಿಸ್ ರೋಗಿಗಳನ್ನು ಟಿಬಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ.</p>.<p>ಜಿಲ್ಲೆಯಲ್ಲಿ 2017ರಿಂದ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. 2017ರಲ್ಲಿ ಶೇ 4.2, 2018ರಲ್ಲಿ ಶೇ 4.7, 2019ರಲ್ಲಿ ಶೇ 3.9, 2020ರಲ್ಲಿ ಶೇ 3.7 ರಷ್ಟು ರೋಗಿಗಳಲ್ಲಿ ಕ್ಷಯರೋಗ ಪತ್ತೆಯಾಗಿದೆ.</p>.<p>***<br />ಜಿಲ್ಲೆಯಲ್ಲಿ ಕ್ಷಯರೋಗಿಗಳ ಗುಣಮುಖದಲ್ಲಿ ಶೇ 83 ರಷ್ಟಿದೆ. ರೋಗಿಗಳು ನಿರಂತರ 6 ತಿಂಗಳು ಔಷಧಿ ತೆಗೆದುಕೊಂಡರೆ ನಿರ್ಮೂಲನೆ ಮಾಡಲು ಸಾಧ್ಯ.<br /><em><strong>-ಡಾ. ಲಕ್ಷ್ಮೀಕಾಂತ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>