ಜಿಲ್ಲೆಗೆ ಸಂಬಂಧಿಸಿದಂತೆ ಚತುಷ್ಪಥ ರಸ್ತೆ ವೈದ್ಯಕೀಯ ಕಾಲೇಜು ಜಲಧಾರೆ ಯೋಜನೆಗಳನ್ನು ನೀಡಲಾಗಿದೆ. ಈ ಬಾರಿ ಮಂಡನೆಯಾಗುವ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಘೋಷಿಸುವ ನಿರೀಕ್ಷೆ ಇದೆ.
ರಾಜಾ ಅಮರೇಶ್ವರ ನಾಯಕ ರಾಯಚೂರು ಸಂಸದ
ಕಲ್ಯಾಣ ಕರ್ನಾಟಕದಲ್ಲಿ 371 (ಜೆ) ಜಾರಿಯಲ್ಲಿದ್ದು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಆದಾಯ ತೆರಿಗೆ ಸ್ಲ್ಯಾಬ್ ₹2 ಲಕ್ಷ ಹೆಚ್ಚುವರಿ ಮಾಡಬೇಕು. ಇದರಿಂದ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ.
ದಿನೇಶಕುಮಾರ ಜೈನ್ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಜಿಲ್ಲಾಧ್ಯಕ್ಷ
‘ರೈಲು ನಿಲುಗಡೆಯಾಗಲಿ’
ಗುಂತಕಲ್ ವ್ಯಾಪ್ತಿಯ ಯಾದಗಿರಿ ರೈಲು ನಿಲ್ದಾಣದಿಂದ ಗುಂತಕಲ್ ಬಿಟ್ಟರೆ ಎರಡನೇ ಸ್ಥಾನದಲ್ಲಿ ಹೆಚ್ಚು ಆದಾಯ ಕೊಡುವ ನಿಲ್ದಾಣವಾಗಿದೆ. ಆದರೂ ಅಭಿವೃದ್ಧಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯಿಸಲಾಗಿದೆ. ಜಿಲ್ಲಾ ಕೇಂದ್ರವಾದರೂ ಕೆಲವು ರೈಲುಗಳು ಯಾದಗಿರಿಯಲ್ಲಿ ನಿಲುಗಡೆಯಾಗುತ್ತಿಲ್ಲ. ಇದರಿಂದ ಪ್ರಯಾಣಿಕರು ಕೆಲವು ರೈಲುಗಳಲ್ಲಿ ಪ್ರಯಾಣಿಸುವಂತಾಗಿದೆ. ‘ಜಿಲ್ಲೆಯಲ್ಲಿ ಕೃಷ್ಣಾ ಭೀಮಾ ನದಿಗಳು ಹರಿಯುತ್ತಿದ್ದರೂ ಗುಳೆ ಹೋಗುವುದು ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಹೊಸ ಮತ್ತು ಹಳೆ ತಾಲ್ಲೂಕುಗಳು 6 ಇದ್ದು ಇಂದಿಗೂ ಹಳೆ ತಾಲ್ಲೂಕುಗಳಿಗೆ ಅಲೆದಾಟ ತಪ್ಪಿಲ್ಲ. ಹೊಸ ಕಚೇರಿಗಳು ಆರಂಭವಾಗಿಲ್ಲ. ಗುಳೆ ತೆರಳುವವರು ಸರಿಯಾದ ರೈಲು ಇಲ್ಲದೇ ನಿಂತುಕೊಂಡೆ ಪ್ರಯಾಣ ಮಾಡುತ್ತಿದ್ದಾರೆ. ಕಲುಬುರಗಿಯಿಂದ ಗುಂತಕಲ್ ವರೆಗೆ ಡೆಮೊ ರೈಲು ಆರಂಭಿಸಬೇಕು. ಎಕ್ಸ್ಪ್ರೆಸ್ ರೈಲುಗಳನ್ನು ನಿಲುಗಡೆ ಮಾಡಲು ಕ್ರಮ ವಹಿಸಬೇಕು ಎನ್ನುತ್ತಾರೆ ಹಿರಿಯ ವಕೀಲ ಭಾಸ್ಕರರಾವ ಮುಡಬೂಳ.