ಸದ್ಯ ಬಸವಸಾಗರಕ್ಕೆ ಆಲಮಟ್ಟಿ ಶಾಸ್ತ್ರೀ ಜಲಾಶಯದಿಂದ 7 ಸಾವಿರ ಕ್ಯೂಸೆಕ್ನಷ್ಟು ನೀರಿನ ಒಳಹರಿವು ಇದೆ. ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ(ಎನ್ಎಲ್ಬಿಸಿ) ಕಳೆದ ಮೂರು ದಿನಗಳಿಂದ ನಿತ್ಯ 1,700 ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿದೆ. ಒಟ್ಟು ಒಟ್ಟು 1.70 ಟಿಎಂಸಿ ಅಡಿಯಷ್ಟು ನೀರನ್ನು ಕಾಲುವೆಗೆ ಹರಿಬಿಡಲಾಗುವುದು. ನೀರು ಐಬಿಸಿ, ಎಸ್ಬಿಸಿ, ಐಎಲ್ಸಿ ಶಾಖಾ ಕಾಲುವೆಗಳಿಗೆ ಹರಿದು ಆಯಾ ಕಾಲುವೆ ಜಾಲಗಳಿಂದ ಕೆರೆಗಳಿಗೆ, ಬಹು ಹಳ್ಳಿ ಕುಡಿಯುವ ನೀರಿನ ಯೋಜನಾ ಸ್ಥಾವರಗಳ ಮೂಲಕ ಉದ್ದೇಶಿತ ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.