‘ಶಾಲೆಯಲ್ಲಿ ಐದು ವರ್ಷ ಚಿತ್ರಕಲಾ ಶಿಕ್ಷಕನಾಗಿದ್ದಾಗ ಜೀವನ ಚೆನ್ನಾಗಿತ್ತು. ವೇತನವೂ ಸಿಗುತ್ತಿತ್ತು. ಕೋವಿಡ್ ನನ್ನ ಉದ್ಯೋಗ ಕಸಿದುಕೊಂಡಿತು. ₹40 ಸಾವಿರ ಸಾಲ ಮಾಡಿ, ಈಗ ಗಣೇಶನ ಮಣ್ಣಿನ ಮೂರ್ತಿಗಳನ್ನು ತಯಾರಿಸಿದ್ದೇವೆ. ವಿಘ್ನನಿವಾರಕ ಕೈ ಹಿಡಿಯುತ್ತಾನೆ ಎನ್ನುವ ಭರವಸೆ ಇದೆ. ಸ್ನೇಹಿತರೊಂದಿಗೆ ಸೇರಿ ನಗರದಲ್ಲಿ ಮಾರಾಟ ಮಾಡುತ್ತೇನೆ’ ಎನ್ನುತ್ತಾರೆ ಭೀಮೇಶ ಮಿರ್ಜಾಪುರ.