<p><strong>ಯಾದಗಿರಿ:</strong> ಕೋವಿಡ್ ಕಾರಣದಿಂದ ಶಾಲೆ ಇಲ್ಲದೇ ಎರಡು ವರ್ಷಗಳಿಂದ ಖಾಲಿ ಕುಳಿತಿರುವ ಚಿತ್ರಕಲಾ ಶಿಕ್ಷಕರಿಬ್ಬರು ಈ ಬಾರಿ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಿ ತಾತ್ಕಾಲಿಕ ಉದ್ಯೋಗ ಕಂಡುಕೊಂಡಿದ್ದಾರೆ.</p>.<p>ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದ ಭೀಮೇಶ ಮಿರ್ಜಾಪುರ ಅವರಿಗೆ ಕೋವಿಡ್ ಕಾರಣದಿಂದ ಉದ್ಯೋಗ ನಷ್ಟವಾಗಿದೆ.ನಗರದ ಎಪಿಎಂಸಿ ಮಾರುಕಟ್ಟೆಯ ಸ್ನೇಹಿತರ ಮಳಿಗೆಯಲ್ಲಿ ಎರಡು ತಿಂಗಳಿನಿಂದ ಜೇಡಿಮಣ್ಣಿನಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p>ಅರುಣಕುಮಾರ ಯಾದಗಿರಿ ಅವರು ಗುರುಮಠಕಲ್ ಪಟ್ಟಣದ ಖಾಸಗಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು. ಈಗ ಅವರೂ ನಿರುದ್ಯೋಗಿ. ಭೀಮೇಶ ಜೊತೆಗೆ ಅವರೂ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p class="Subhead">140ಕ್ಕೂ ಹೆಚ್ಚು ಮೂರ್ತಿ ತಯಾರಿಕೆ: ಬೆಂಗಳೂರಿನಿಂದ 50 ಕೆ.ಜಿಯ 20 ಚೀಲ ಜೇಡಿ ಮಣ್ಣು ತರಿಸಿ 140ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಿದ್ದಾರೆ. ಎಂಟು ಇಂಚಿನಿಂದ ಎರಡೂವರೆ ಅಡಿ ಎತ್ತರದವರೆಗಿನ ಮೂರ್ತಿಗಳಿಗೆ ರೂಪಕೊಟ್ಟಿದ್ದಾರೆ. ‘3ಡಿ’ ಮಾದರಿಯಲ್ಲಿ ಮೂರ್ತಿಗಳನ್ನು ರೂಪಿಸಿದ್ದಾರೆ.</p>.<p>‘ಶಾಲೆಯಲ್ಲಿ ಐದು ವರ್ಷ ಚಿತ್ರಕಲಾ ಶಿಕ್ಷಕನಾಗಿದ್ದಾಗ ಜೀವನ ಚೆನ್ನಾಗಿತ್ತು. ವೇತನವೂ ಸಿಗುತ್ತಿತ್ತು. ಕೋವಿಡ್ ನನ್ನ ಉದ್ಯೋಗ ಕಸಿದುಕೊಂಡಿತು. ₹40 ಸಾವಿರ ಸಾಲ ಮಾಡಿ, ಈಗ ಗಣೇಶನ ಮಣ್ಣಿನ ಮೂರ್ತಿಗಳನ್ನು ತಯಾರಿಸಿದ್ದೇವೆ. ವಿಘ್ನನಿವಾರಕ ಕೈ ಹಿಡಿಯುತ್ತಾನೆ ಎನ್ನುವ ಭರವಸೆ ಇದೆ. ಸ್ನೇಹಿತರೊಂದಿಗೆ ಸೇರಿ ನಗರದಲ್ಲಿ ಮಾರಾಟ ಮಾಡುತ್ತೇನೆ’ ಎನ್ನುತ್ತಾರೆ ಭೀಮೇಶ ಮಿರ್ಜಾಪುರ.</p>.<p>‘ಪತ್ನಿ, ಮಕ್ಕಳನ್ನು ಸಾಕುವುದೇ ಕಷ್ಟವಾಗಿತ್ತು. ಸ್ನೇಹಿತರು ಸೇರಿ ಮೂರ್ತಿ ತಯಾರಿಸಿದ್ದೇವೆ. ನಮ್ಮ ಶ್ರಮಕ್ಕೆ ಬೆಲೆ ಸಿಗುವ ಭರವಸೆ ಇದೆ’ ಎನ್ನುವುದು ಅರುಣಕುಮಾರ ಯಾದಗಿರಿ ಅವರ ಹೇಳಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಕೋವಿಡ್ ಕಾರಣದಿಂದ ಶಾಲೆ ಇಲ್ಲದೇ ಎರಡು ವರ್ಷಗಳಿಂದ ಖಾಲಿ ಕುಳಿತಿರುವ ಚಿತ್ರಕಲಾ ಶಿಕ್ಷಕರಿಬ್ಬರು ಈ ಬಾರಿ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಿ ತಾತ್ಕಾಲಿಕ ಉದ್ಯೋಗ ಕಂಡುಕೊಂಡಿದ್ದಾರೆ.</p>.<p>ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದ ಭೀಮೇಶ ಮಿರ್ಜಾಪುರ ಅವರಿಗೆ ಕೋವಿಡ್ ಕಾರಣದಿಂದ ಉದ್ಯೋಗ ನಷ್ಟವಾಗಿದೆ.ನಗರದ ಎಪಿಎಂಸಿ ಮಾರುಕಟ್ಟೆಯ ಸ್ನೇಹಿತರ ಮಳಿಗೆಯಲ್ಲಿ ಎರಡು ತಿಂಗಳಿನಿಂದ ಜೇಡಿಮಣ್ಣಿನಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p>ಅರುಣಕುಮಾರ ಯಾದಗಿರಿ ಅವರು ಗುರುಮಠಕಲ್ ಪಟ್ಟಣದ ಖಾಸಗಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು. ಈಗ ಅವರೂ ನಿರುದ್ಯೋಗಿ. ಭೀಮೇಶ ಜೊತೆಗೆ ಅವರೂ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p class="Subhead">140ಕ್ಕೂ ಹೆಚ್ಚು ಮೂರ್ತಿ ತಯಾರಿಕೆ: ಬೆಂಗಳೂರಿನಿಂದ 50 ಕೆ.ಜಿಯ 20 ಚೀಲ ಜೇಡಿ ಮಣ್ಣು ತರಿಸಿ 140ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಿದ್ದಾರೆ. ಎಂಟು ಇಂಚಿನಿಂದ ಎರಡೂವರೆ ಅಡಿ ಎತ್ತರದವರೆಗಿನ ಮೂರ್ತಿಗಳಿಗೆ ರೂಪಕೊಟ್ಟಿದ್ದಾರೆ. ‘3ಡಿ’ ಮಾದರಿಯಲ್ಲಿ ಮೂರ್ತಿಗಳನ್ನು ರೂಪಿಸಿದ್ದಾರೆ.</p>.<p>‘ಶಾಲೆಯಲ್ಲಿ ಐದು ವರ್ಷ ಚಿತ್ರಕಲಾ ಶಿಕ್ಷಕನಾಗಿದ್ದಾಗ ಜೀವನ ಚೆನ್ನಾಗಿತ್ತು. ವೇತನವೂ ಸಿಗುತ್ತಿತ್ತು. ಕೋವಿಡ್ ನನ್ನ ಉದ್ಯೋಗ ಕಸಿದುಕೊಂಡಿತು. ₹40 ಸಾವಿರ ಸಾಲ ಮಾಡಿ, ಈಗ ಗಣೇಶನ ಮಣ್ಣಿನ ಮೂರ್ತಿಗಳನ್ನು ತಯಾರಿಸಿದ್ದೇವೆ. ವಿಘ್ನನಿವಾರಕ ಕೈ ಹಿಡಿಯುತ್ತಾನೆ ಎನ್ನುವ ಭರವಸೆ ಇದೆ. ಸ್ನೇಹಿತರೊಂದಿಗೆ ಸೇರಿ ನಗರದಲ್ಲಿ ಮಾರಾಟ ಮಾಡುತ್ತೇನೆ’ ಎನ್ನುತ್ತಾರೆ ಭೀಮೇಶ ಮಿರ್ಜಾಪುರ.</p>.<p>‘ಪತ್ನಿ, ಮಕ್ಕಳನ್ನು ಸಾಕುವುದೇ ಕಷ್ಟವಾಗಿತ್ತು. ಸ್ನೇಹಿತರು ಸೇರಿ ಮೂರ್ತಿ ತಯಾರಿಸಿದ್ದೇವೆ. ನಮ್ಮ ಶ್ರಮಕ್ಕೆ ಬೆಲೆ ಸಿಗುವ ಭರವಸೆ ಇದೆ’ ಎನ್ನುವುದು ಅರುಣಕುಮಾರ ಯಾದಗಿರಿ ಅವರ ಹೇಳಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>