<p><strong>ಯಾದಗಿರಿ: </strong>ನಗರದ ಹಳೆ ಬಸ್ ನಿಲ್ದಾಣದ ಬಳಿ ಹೊಸ ಕಟ್ಟಡ ಕಾಮಗಾರಿ ಕುಟುಂತ್ತಾ ಸಾಗಿದ್ದು, ಅಕ್ಷರಶಃ ಕುಡುಕರ ತಾಣವಾಗಿ ಮಾರ್ಪಟ್ಟಿದೆ.₹4 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿ ಮಾಡುತ್ತಿದ್ದು,ಗುತ್ತಿಗೆ ಪಡೆದು ಎರಡೂವರೆವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ.</p>.<p>ಅಕ್ಕಪಕ್ಕದಲ್ಲಿ ಮದ್ಯ ಮಾರಾಟ ಮಳಿಗೆಗಳಿದ್ದು, ಅಲ್ಲಿಂದ ಮದ್ಯ ತರುವ ಕುಡುಕರು ನೆನಗುದಿಗೆ ಬಿದ್ದ ಕಟ್ಟಡದಲ್ಲಿ ರಾಜಾರೋಷವಾಗಿ ಕುಡಿದು ಬಾಟಲಿಗಳನ್ನು ಅಲ್ಲಲ್ಲಿ ಬಿಸಾಕಿ ಗಬ್ಬೆಬ್ಬಿಸಿದ್ದಾರೆ.</p>.<p>ಬಸ್ ನಿಲ್ದಾಣದಲ್ಲಿ ಕುಡಿದುಬಿಸಾಕಿದ ಬಾಟಲಿಗಳು, ಜೊತೆಗೆ ನೀರಿನ ಖಾಲಿ ಬಾಟಲಿ, ಪ್ಲಾಸ್ಟಿಕ್ ಕಪ್, ಸಿಗರೇಟ್ ಪ್ಯಾಕ್ಗಳು ಬಿದ್ದಿವೆ.</p>.<p>ಹಾಡಹಗಲೇ ಮದ್ಯ ಕುಡಿಯುವ ಸ್ಥಳವಾಗಿ ಬಳಕೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.</p>.<p>‘ಕುಳಿತುಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಆದರೂ ಹಳೆ ಬಸ್ ನಿಲ್ದಾಣದಿಂದ ಕೆಲ ಊರುಗಳಿಗೆ ಬಸ್ ಬಿಡುತ್ತಿದ್ದಾರೆ. ಇಲ್ಲಿ ಸ್ವಚ್ಛತೆ ಕಾಪಾಡಿಲ್ಲ. ಬಸ್ನಲ್ಲಿ ಕುಂತರೂ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತದೆ' ಎಂದು ಪ್ರಯಾಣಿಕ ಮಲ್ಲು ಹಲಗಿ ಕುರಕುಂದಿ ಆಪಾದಿಸಿದರು.</p>.<p>‘ನಾವು ಹೇಗೋ ಸಹಿಸಿಕೊಳ್ಳುತ್ತೇವೆ. ಮಹಿಳೆಯರು, ಮಕ್ಕಳು ಪರದಾಡುತ್ತಿದ್ದಾರೆ. ಅಧಿಕಾರಿಗಳು ತಮ್ಮ ಆದಾಯವನ್ನು ಮಾತ್ರ ನೋಡುತ್ತಿದ್ದಾರೆ. ಪ್ರಯಾಣಿಕರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ' ಎನ್ನುತ್ತಾರೆ ಅವರು.</p>.<p class="Subhead">ನಿರಾಶ್ರಿತರ ತಾಣ: ಕುಡುಕರ ತಾಣದ ಜೊತೆಗೆ ನಿರಾಶ್ರಿತರ ತಾಣವಾಗಿಯೂ ಬಳಕೆ ಆಗುತ್ತಿದೆ. ಹಲವಾರು ಜನರು ಇಲ್ಲಿಯೇವಾಸಿಸುತ್ತಿದ್ದಾರೆ. ಗಂಟುಮೂಟೆ ಕಟ್ಟಿಕೊಂಡು ಆಶ್ರಯ ಪಡೆದಿದ್ದಾರೆ.</p>.<p class="Subhead">ಇಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ. ಎಲ್ಲಿ ನೋಡಿದರೂ ಸ್ವಚ್ಛತೆ ಇಲ್ಲ. ಕುಡುಕರುಬಿದ್ದು ಹೊರಳಾಡುತ್ತಿದ್ದಾರೆ ಸ್ವಚ್ಛತೆ ಕಾಪಾಡಬೇಕು</p>.<p class="Subhead">ಅಶೋಕ ಮೋಟ್ನಳ್ಳಿ, ಪ್ರಯಾಣಿಕ</p>.<p class="Subhead">***</p>.<p class="Subhead">ನಮ್ಮೂರಿಗೆ ತೆರಳುವ ಬಸ್ಗಾಗಿ ನೆಲದ ಮೇಲೆ ಕುಳಿತುಕೊಂಡು ಕಾಯುತ್ತಿದ್ದೇವೆ. ರಾಶಿ ರಾಶಿ ಕಸವಿದ್ದರೂ ವಿಲೇವಾರಿ ಮಾಡಿಲ್ಲ</p>.<p class="Subhead">ಮಹಾದೇವಿ ದೋರನಹಳ್ಳಿ, ಪ್ರಯಾಣಿಕರು</p>.<p>***</p>.<p>ಜುಲೈನಲ್ಲಿ ನಿಲ್ದಾಣ ಉದ್ಘಾಟನೆ ಆಗುತ್ತೆ. ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಗೇಟ್ ಇಲ್ಲದಿದ್ದರಿಂದ ಸಮಸ್ಯೆ ಆಗಿದೆ ಎಂ.ಪಿ.ಶ್ರೀಹರಿಬಾಬು, ವಿಭಾಗೀಯ ನಿಯಂತ್ರಣಾಧಿಕಾರಿ, ಎನ್ಈಕೆಆರ್ಟಿಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ನಗರದ ಹಳೆ ಬಸ್ ನಿಲ್ದಾಣದ ಬಳಿ ಹೊಸ ಕಟ್ಟಡ ಕಾಮಗಾರಿ ಕುಟುಂತ್ತಾ ಸಾಗಿದ್ದು, ಅಕ್ಷರಶಃ ಕುಡುಕರ ತಾಣವಾಗಿ ಮಾರ್ಪಟ್ಟಿದೆ.₹4 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿ ಮಾಡುತ್ತಿದ್ದು,ಗುತ್ತಿಗೆ ಪಡೆದು ಎರಡೂವರೆವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ.</p>.<p>ಅಕ್ಕಪಕ್ಕದಲ್ಲಿ ಮದ್ಯ ಮಾರಾಟ ಮಳಿಗೆಗಳಿದ್ದು, ಅಲ್ಲಿಂದ ಮದ್ಯ ತರುವ ಕುಡುಕರು ನೆನಗುದಿಗೆ ಬಿದ್ದ ಕಟ್ಟಡದಲ್ಲಿ ರಾಜಾರೋಷವಾಗಿ ಕುಡಿದು ಬಾಟಲಿಗಳನ್ನು ಅಲ್ಲಲ್ಲಿ ಬಿಸಾಕಿ ಗಬ್ಬೆಬ್ಬಿಸಿದ್ದಾರೆ.</p>.<p>ಬಸ್ ನಿಲ್ದಾಣದಲ್ಲಿ ಕುಡಿದುಬಿಸಾಕಿದ ಬಾಟಲಿಗಳು, ಜೊತೆಗೆ ನೀರಿನ ಖಾಲಿ ಬಾಟಲಿ, ಪ್ಲಾಸ್ಟಿಕ್ ಕಪ್, ಸಿಗರೇಟ್ ಪ್ಯಾಕ್ಗಳು ಬಿದ್ದಿವೆ.</p>.<p>ಹಾಡಹಗಲೇ ಮದ್ಯ ಕುಡಿಯುವ ಸ್ಥಳವಾಗಿ ಬಳಕೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.</p>.<p>‘ಕುಳಿತುಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಆದರೂ ಹಳೆ ಬಸ್ ನಿಲ್ದಾಣದಿಂದ ಕೆಲ ಊರುಗಳಿಗೆ ಬಸ್ ಬಿಡುತ್ತಿದ್ದಾರೆ. ಇಲ್ಲಿ ಸ್ವಚ್ಛತೆ ಕಾಪಾಡಿಲ್ಲ. ಬಸ್ನಲ್ಲಿ ಕುಂತರೂ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತದೆ' ಎಂದು ಪ್ರಯಾಣಿಕ ಮಲ್ಲು ಹಲಗಿ ಕುರಕುಂದಿ ಆಪಾದಿಸಿದರು.</p>.<p>‘ನಾವು ಹೇಗೋ ಸಹಿಸಿಕೊಳ್ಳುತ್ತೇವೆ. ಮಹಿಳೆಯರು, ಮಕ್ಕಳು ಪರದಾಡುತ್ತಿದ್ದಾರೆ. ಅಧಿಕಾರಿಗಳು ತಮ್ಮ ಆದಾಯವನ್ನು ಮಾತ್ರ ನೋಡುತ್ತಿದ್ದಾರೆ. ಪ್ರಯಾಣಿಕರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ' ಎನ್ನುತ್ತಾರೆ ಅವರು.</p>.<p class="Subhead">ನಿರಾಶ್ರಿತರ ತಾಣ: ಕುಡುಕರ ತಾಣದ ಜೊತೆಗೆ ನಿರಾಶ್ರಿತರ ತಾಣವಾಗಿಯೂ ಬಳಕೆ ಆಗುತ್ತಿದೆ. ಹಲವಾರು ಜನರು ಇಲ್ಲಿಯೇವಾಸಿಸುತ್ತಿದ್ದಾರೆ. ಗಂಟುಮೂಟೆ ಕಟ್ಟಿಕೊಂಡು ಆಶ್ರಯ ಪಡೆದಿದ್ದಾರೆ.</p>.<p class="Subhead">ಇಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ. ಎಲ್ಲಿ ನೋಡಿದರೂ ಸ್ವಚ್ಛತೆ ಇಲ್ಲ. ಕುಡುಕರುಬಿದ್ದು ಹೊರಳಾಡುತ್ತಿದ್ದಾರೆ ಸ್ವಚ್ಛತೆ ಕಾಪಾಡಬೇಕು</p>.<p class="Subhead">ಅಶೋಕ ಮೋಟ್ನಳ್ಳಿ, ಪ್ರಯಾಣಿಕ</p>.<p class="Subhead">***</p>.<p class="Subhead">ನಮ್ಮೂರಿಗೆ ತೆರಳುವ ಬಸ್ಗಾಗಿ ನೆಲದ ಮೇಲೆ ಕುಳಿತುಕೊಂಡು ಕಾಯುತ್ತಿದ್ದೇವೆ. ರಾಶಿ ರಾಶಿ ಕಸವಿದ್ದರೂ ವಿಲೇವಾರಿ ಮಾಡಿಲ್ಲ</p>.<p class="Subhead">ಮಹಾದೇವಿ ದೋರನಹಳ್ಳಿ, ಪ್ರಯಾಣಿಕರು</p>.<p>***</p>.<p>ಜುಲೈನಲ್ಲಿ ನಿಲ್ದಾಣ ಉದ್ಘಾಟನೆ ಆಗುತ್ತೆ. ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಗೇಟ್ ಇಲ್ಲದಿದ್ದರಿಂದ ಸಮಸ್ಯೆ ಆಗಿದೆ ಎಂ.ಪಿ.ಶ್ರೀಹರಿಬಾಬು, ವಿಭಾಗೀಯ ನಿಯಂತ್ರಣಾಧಿಕಾರಿ, ಎನ್ಈಕೆಆರ್ಟಿಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>