ಸರ್ವಣೀಯರು ನೀರು ತೆಗೆದುಕೊಂಡ ನಂತರವೇ ದಲಿತರು ನೀರು ತೆಗೆದುಕೊಳ್ಳಬೇಕು ಇದು ವಾಸ್ತವಿಕ ಸ್ಥಿತಿ. ಭಾನುವಾರ ಬೆಳಗ್ಗೆ ದಲಿತರು ನೀರು ತೆಗೆದುಕೊಳ್ಳಲು ಹೋದಾಗ ತಳವಾರಗೇರಾ ಗ್ರಾಮದ ಸರ್ವರ್ಣೀಯರು ತಕರಾರು ತೆಗೆದಿದ್ದಾರೆ. ಪರಸ್ಪರ ಎರಡು ಕೋಮುಗಳ ನಡುವೆ ವಾಗ್ವಾದ ನಡೆದು ಮಾರಾಮಾರಿಗೆ ತಿರುಗಿದೆ. ಘಟನೆಯಲ್ಲಿ ದಲಿತ ಸಮುದಾಯದ ಮಾನಪ್ಪ ಕಟ್ಟಿಮನಿ, ಗೋಪಾಲಪ್ಪ ಕಟ್ಟಿಮನಿ, ಬಸವರಾಜ ಕಟ್ಟಿಮನಿ, ಮಹೇಶಕುಮಾರ ಕಟ್ಟಿಮನಿ, ಶರಣಪ್ಪ ಕಟ್ಟಿಮನಿ, ಮಾನಯ್ಯ ಕಟ್ಟಿಮನಿ ಗಂಭಿರವಾಗಿ ಗಾಯಗೊಂಡಿದ್ದು ,ಹೆಚ್ಚಿನ ಚಿಕಿತ್ಸೆಗಾಗಿ ಜಿಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದ 12 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.