<p><strong>ಯಾದಗಿರಿ:</strong> ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಬೆಳೆಯುವ ಬ್ಯಾಡಗಿ ತಳಿ ಮೆಣಸಿನಕಾಯಿಗೆ ಸೂಕ್ತ ಮಾರುಕಟ್ಟೆ, ಶೈತ್ಯಗಾರವೂ ಇಲ್ಲದಿದ್ದರಿಂದ ಸಿಕ್ಕ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿ ಇದೆ.</p>.<p>ಜಿಲ್ಲೆಯಲ್ಲಿ ಒಟ್ಟಾರೆ 676 ಹೆಕ್ಟೇರ್ ಪ್ರದೇಶದಲ್ಲಿ ಮೆಣನಕಾಯಿಬೆಳೆಇದ್ದು, ಇದರಲ್ಲಿ ಶಹಾಪುರ ತಾಲ್ಲೂಕಿನಲ್ಲಿ ಮಾತ್ರ ಹೆಚ್ಚು ಬ್ಯಾಡಗಿ ಮೆಣಸಿನಕಾಯಿ ಬೆಳೆಯಲಾಗಿದೆ.</p>.<p>ದೂರದ ಮಾರುಕಟ್ಟೆಗಳೆ ಆಶ್ರಯ: ಶಹಾಪುರ ತಾಲ್ಲೂಕಿನಲ್ಲಿ ಮೆಣಸಿನಕಾಯಿ ಬೆಳೆದರೂ ಸೂಕ್ತ ಮಾರುಕಟ್ಟೆಯೇ ಇಲ್ಲದಂತಾಗಿದೆ. ಕಲಬುರ್ಗಿ, ಬ್ಯಾಡಗಿ, ಗುಂಟೂರುಮಾರುಕಟ್ಟೆಯನ್ನೇ ಆಶ್ರಯಿಸಬೇಕಾಗಿದೆ.</p>.<p>‘ಒಂದು ಲಾರಿಯಲ್ಲಿ 350ರಿಂದ 400 ಚೀಲ ಕೊಂಡ್ಯೊಯ್ಯಬಹುದು. ಒಂದು ಕ್ವಿಂಟಲ್ಗೆ ಒಂದು ಸಾವಿರ ಖರ್ಚು ಬರುತ್ತದೆ. ಬ್ಯಾಡಗಿಗೆ ತೆರಳಲು ಒಂದು ಲಾರಿಬಾಡಿಗೆ ಸೇರಿ ₹25ರಿಂದ ₹27ರ ಸಾವಿರ. ಇದು ನಮಗೆ ಭಾರವಾಗಿದೆ. ಸೂಕ್ತ ಮಾರುಕಟ್ಟೆ ನಮ್ಮ ಭಾಗದಲ್ಲೇ ಇದ್ದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಬೆಳೆಗಾರರು.</p>.<p>ಶಹಾಪುರದಬೆಳೆಗೆ ಬೆಲೆ ಇಲ್ಲ: ಹಾವೇರಿ ಜಿಲ್ಲೆಯ ಬ್ಯಾಡಗಿ ಮಾರುಕಟ್ಟೆಯಲ್ಲಿ ಶಹಾಪುರದ ಬ್ಯಾಡಗಿ ಮೆಣಸಿನಕಾಯಿಗೆ ಬೆಲೆ ಇಲ್ಲ ಇಲ್ಲದಂತಾಗಿದೆ. ವಾಹನದ ಬಾಡಿಗೆ ತೆತ್ತು ತೆಗೆದುಕೊಂಡು ಹೋದರೂ ಬೆಲೆ ಇಲ್ಲದಂತಾಗಿದೆ ಎಂದು ಬೆಳೆಗಾರರು ತಿಳಿಸುತ್ತಾರೆ.</p>.<p>‘ಶಹಾಪುರ ತಾಲ್ಲೂಕಿನ ಮದ್ರಕಿ, ಮೂಡಬೂಳ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶದಲ್ಲಿ ಬ್ಯಾಡಗಿ ತಳಿಯ ಒಣಮೆಣಸಿನಕಾಯಿಯ ದರ ಬ್ಯಾಡಗಿ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ₹28ರಿಂದ 30 ಸಾವಿರ ಮಾತ್ರ ಇದೆ. ಇದರಿಂದ ಇದೇ ಭಾಗದಲ್ಲಿ ಮಾರುಕಟ್ಟೆ ಇದ್ದರೆ ನಮಗೆ ಅನುಕೂಲವಾಗುತ್ತದೆ’ ಎಂದು ಮದ್ರಕಿ ಗ್ರಾಮದ ಯುವ ರೈತ ಮಲ್ಲಿಕಾರ್ಜುನ ಜಿ ಅವಂಟಿ ಹೇಳುತ್ತಾರೆ.</p>.<p>‘ಕಲಬುರ್ಗಿಯಲ್ಲಿ ಬೆಳೆಗಾರರನ್ನು ನಿರ್ಲಕ್ಷ್ಯ ಮನೋಭಾವದಿಂದ ನೋಡಲಾಗುತ್ತಿದೆ. ಬೆಳೆಗೆ ಸೂಕ್ತ ಬೆಲೆ ಸಿಗುವುದಿಲ್ಲ. ಇಲ್ಲಿ ಖಾಸಗಿಯವರು ಮಾರುಕಟ್ಟೆ ನಡೆಸುವುದರಿಂದ ಬೆಲೆ ಹೆಚ್ಚು ಸಿಗುವುದಿಲ್ಲ’ ಎಂದು ತಿಳಿಸುತ್ತಾರೆ.</p>.<p>ವಿಮೆ ಬೆಲೆ ಭದ್ರತೆ ಇಲ್ಲ: ಜಿಲ್ಲೆಯಲ್ಲಿ ಬೆಳೆಯುವ ಮೆಣಸಿನಕಾಯಿಗೆ ಮುಂಗಾರು ಅವಧಿಯಲ್ಲಿ ಮಾತ್ರ ಬೆಳೆ ವಿಮೆ ಮಾಡಿಸಲು ಅವಕಾಶವಿದೆ. ಹಿಂಗಾರಿನಲ್ಲಿ ಬೆಳೆ ವಿಮೆ ವ್ಯಾಪ್ತಿಗೆ ಒಳಪಡುವುದಿಲ್ಲ. ಋತುಮಾನಕ್ಕೆ ತಕ್ಕ ಬೆಳೆಯಾಗಿದ್ದರಿಂದ ಇದು ಬರುವುದಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.</p>.<p>‘ಈ ಭಾಗದ ರೈತರಿಗೆ ಬ್ಯಾಡಗಿ ತಳಿ ಬೆಳೆಯುವ ಬಗ್ಗೆಸೂಕ್ತ ತರಬೇತಿ ಇಲ್ಲ. ಇದರಿಂದ ಹೆಚ್ಚಿನ ರೈತರು ಇದರಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಸಂಬಂಧಿಸಿದವರು ಸೂಕ್ತ ಮಾರ್ಗದರ್ಶನ ನೀಡಿದರೆ ಬೆಳೆಗಾರರು ಹೆಚ್ಚಾಗಬಹುದು’ ಎಂದು ಮಲ್ಲಿಕಾರ್ಜುನ ಹೇಳುತ್ತಾರೆ. yad</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಬೆಳೆಯುವ ಬ್ಯಾಡಗಿ ತಳಿ ಮೆಣಸಿನಕಾಯಿಗೆ ಸೂಕ್ತ ಮಾರುಕಟ್ಟೆ, ಶೈತ್ಯಗಾರವೂ ಇಲ್ಲದಿದ್ದರಿಂದ ಸಿಕ್ಕ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿ ಇದೆ.</p>.<p>ಜಿಲ್ಲೆಯಲ್ಲಿ ಒಟ್ಟಾರೆ 676 ಹೆಕ್ಟೇರ್ ಪ್ರದೇಶದಲ್ಲಿ ಮೆಣನಕಾಯಿಬೆಳೆಇದ್ದು, ಇದರಲ್ಲಿ ಶಹಾಪುರ ತಾಲ್ಲೂಕಿನಲ್ಲಿ ಮಾತ್ರ ಹೆಚ್ಚು ಬ್ಯಾಡಗಿ ಮೆಣಸಿನಕಾಯಿ ಬೆಳೆಯಲಾಗಿದೆ.</p>.<p>ದೂರದ ಮಾರುಕಟ್ಟೆಗಳೆ ಆಶ್ರಯ: ಶಹಾಪುರ ತಾಲ್ಲೂಕಿನಲ್ಲಿ ಮೆಣಸಿನಕಾಯಿ ಬೆಳೆದರೂ ಸೂಕ್ತ ಮಾರುಕಟ್ಟೆಯೇ ಇಲ್ಲದಂತಾಗಿದೆ. ಕಲಬುರ್ಗಿ, ಬ್ಯಾಡಗಿ, ಗುಂಟೂರುಮಾರುಕಟ್ಟೆಯನ್ನೇ ಆಶ್ರಯಿಸಬೇಕಾಗಿದೆ.</p>.<p>‘ಒಂದು ಲಾರಿಯಲ್ಲಿ 350ರಿಂದ 400 ಚೀಲ ಕೊಂಡ್ಯೊಯ್ಯಬಹುದು. ಒಂದು ಕ್ವಿಂಟಲ್ಗೆ ಒಂದು ಸಾವಿರ ಖರ್ಚು ಬರುತ್ತದೆ. ಬ್ಯಾಡಗಿಗೆ ತೆರಳಲು ಒಂದು ಲಾರಿಬಾಡಿಗೆ ಸೇರಿ ₹25ರಿಂದ ₹27ರ ಸಾವಿರ. ಇದು ನಮಗೆ ಭಾರವಾಗಿದೆ. ಸೂಕ್ತ ಮಾರುಕಟ್ಟೆ ನಮ್ಮ ಭಾಗದಲ್ಲೇ ಇದ್ದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಬೆಳೆಗಾರರು.</p>.<p>ಶಹಾಪುರದಬೆಳೆಗೆ ಬೆಲೆ ಇಲ್ಲ: ಹಾವೇರಿ ಜಿಲ್ಲೆಯ ಬ್ಯಾಡಗಿ ಮಾರುಕಟ್ಟೆಯಲ್ಲಿ ಶಹಾಪುರದ ಬ್ಯಾಡಗಿ ಮೆಣಸಿನಕಾಯಿಗೆ ಬೆಲೆ ಇಲ್ಲ ಇಲ್ಲದಂತಾಗಿದೆ. ವಾಹನದ ಬಾಡಿಗೆ ತೆತ್ತು ತೆಗೆದುಕೊಂಡು ಹೋದರೂ ಬೆಲೆ ಇಲ್ಲದಂತಾಗಿದೆ ಎಂದು ಬೆಳೆಗಾರರು ತಿಳಿಸುತ್ತಾರೆ.</p>.<p>‘ಶಹಾಪುರ ತಾಲ್ಲೂಕಿನ ಮದ್ರಕಿ, ಮೂಡಬೂಳ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶದಲ್ಲಿ ಬ್ಯಾಡಗಿ ತಳಿಯ ಒಣಮೆಣಸಿನಕಾಯಿಯ ದರ ಬ್ಯಾಡಗಿ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ₹28ರಿಂದ 30 ಸಾವಿರ ಮಾತ್ರ ಇದೆ. ಇದರಿಂದ ಇದೇ ಭಾಗದಲ್ಲಿ ಮಾರುಕಟ್ಟೆ ಇದ್ದರೆ ನಮಗೆ ಅನುಕೂಲವಾಗುತ್ತದೆ’ ಎಂದು ಮದ್ರಕಿ ಗ್ರಾಮದ ಯುವ ರೈತ ಮಲ್ಲಿಕಾರ್ಜುನ ಜಿ ಅವಂಟಿ ಹೇಳುತ್ತಾರೆ.</p>.<p>‘ಕಲಬುರ್ಗಿಯಲ್ಲಿ ಬೆಳೆಗಾರರನ್ನು ನಿರ್ಲಕ್ಷ್ಯ ಮನೋಭಾವದಿಂದ ನೋಡಲಾಗುತ್ತಿದೆ. ಬೆಳೆಗೆ ಸೂಕ್ತ ಬೆಲೆ ಸಿಗುವುದಿಲ್ಲ. ಇಲ್ಲಿ ಖಾಸಗಿಯವರು ಮಾರುಕಟ್ಟೆ ನಡೆಸುವುದರಿಂದ ಬೆಲೆ ಹೆಚ್ಚು ಸಿಗುವುದಿಲ್ಲ’ ಎಂದು ತಿಳಿಸುತ್ತಾರೆ.</p>.<p>ವಿಮೆ ಬೆಲೆ ಭದ್ರತೆ ಇಲ್ಲ: ಜಿಲ್ಲೆಯಲ್ಲಿ ಬೆಳೆಯುವ ಮೆಣಸಿನಕಾಯಿಗೆ ಮುಂಗಾರು ಅವಧಿಯಲ್ಲಿ ಮಾತ್ರ ಬೆಳೆ ವಿಮೆ ಮಾಡಿಸಲು ಅವಕಾಶವಿದೆ. ಹಿಂಗಾರಿನಲ್ಲಿ ಬೆಳೆ ವಿಮೆ ವ್ಯಾಪ್ತಿಗೆ ಒಳಪಡುವುದಿಲ್ಲ. ಋತುಮಾನಕ್ಕೆ ತಕ್ಕ ಬೆಳೆಯಾಗಿದ್ದರಿಂದ ಇದು ಬರುವುದಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.</p>.<p>‘ಈ ಭಾಗದ ರೈತರಿಗೆ ಬ್ಯಾಡಗಿ ತಳಿ ಬೆಳೆಯುವ ಬಗ್ಗೆಸೂಕ್ತ ತರಬೇತಿ ಇಲ್ಲ. ಇದರಿಂದ ಹೆಚ್ಚಿನ ರೈತರು ಇದರಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಸಂಬಂಧಿಸಿದವರು ಸೂಕ್ತ ಮಾರ್ಗದರ್ಶನ ನೀಡಿದರೆ ಬೆಳೆಗಾರರು ಹೆಚ್ಚಾಗಬಹುದು’ ಎಂದು ಮಲ್ಲಿಕಾರ್ಜುನ ಹೇಳುತ್ತಾರೆ. yad</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>