<p>ಕೆಎಸ್ಪಿ, ಕೆಪಿಎಸ್ಸಿ ಗ್ರೂಪ್ ‘ಸಿ’ ಸೇರಿದಂತೆ ವಿವಿಧ ಇಲಾಖೆಗಳ ಹುದ್ದೆಗಳಿಗಾಗಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಮೂರು ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.</p>.<p>1) ಕೆಳಗಿನ ಹೇಳಿಕೆಗಳನ್ನು ಗಮನಿಸಿ</p>.<p>1) ಸುಪ್ರೀಂ ಕೋರ್ಟ್ನ 150ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್ ಅಧಿಕಾರ ಸ್ವೀಕರಿಸಿದ್ದಾರೆ.</p>.<p>2) ಡಿ ವೈ ಚಂದ್ರಚೂಡ್ ಅವರು 1998ರಲ್ಲಿ ಮುಂಬೈ ಹೈಕೋರ್ಟ್ನಲ್ಲಿ ವಕೀಲರಾಗಿ ಕಾರ್ಯ ಆರಂಭಿಸಿದರು. 1998-2000ರ ಅವಧಿಯಲ್ಲಿ ಭಾರತದ ಸಾಲಿಸಿಟರ್ ಜನರಲ್ ಅಗಿ ನೇಮಕಗೊಂಡಿದ್ದರು. ನಂತರದ ದಿನಗಳಲ್ಲಿ ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2016ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು.</p>.<p>ಉತ್ತರ ಸಂಕೇತಗಳು:</p>.<p>ಎ) ಹೇಳಿಕೆ 2 ಮಾತ್ರ ಸರಿಯಾಗಿದೆ</p>.<p>ಬಿ) ಹೇಳಿಕೆ 1 ಮತ್ತು 2 ಎಲ್ಲವೂ ತಪ್ಪಾಗಿವೆ</p>.<p>ಸಿ) ಹೇಳಿಕೆ 1 ಮತ್ತು 2 ಎಲ್ಲವೂ ಸರಿಯಾಗಿವೆ</p>.<p>ಡಿ) ಹೇಳಿಕೆ 1 ಮಾತ್ರ ಸರಿಯಾಗಿದೆ</p>.<p>ಉತ್ತರ: ಸಿ</p>.<p>2) ಮೀನು ತ್ಯಾಜ್ಯದಿಂದ ಬಯೋಡೀಸೆಲ್ ಉತ್ಪಾದಿಸುವ ಯೋಜನೆಯನ್ನು ಎಲ್ಲಿ ಜಾರಿಗೆ ತರಲಾಗುತ್ತಿದೆ?</p>.<p>ಎ) ಮೂಲ್ಕಿ→ಬಿ) ಸುರತ್ಕಲ್<br />ಸಿ) ಕಾರವಾರ→ಡಿ) ತದಡಿ</p>.<p>ಉತ್ತರ: ಎ</p>.<p>3) ಕೆಳಗಿನ ಹೇಳಿಕೆಗಳನ್ನು ಗಮನಿಸಿ</p>.<p>1) ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ನಿರ್ಮಾಣವಾಗಿದೆ. ಇದು 108 ಅಡಿ ಎತ್ತರ, 120 ಟನ್ ತೂಕವಿದೆ. ಗುಜರಾತ್ನ ‘ಏಕತಾ ಪ್ರತಿಮೆ’ ನಿರ್ಮಾಣ ಮಾಡಿದ ಶಿಲ್ಪಿ ರಾಮ್ ಸುತಾರ್ ಈ ಮೂರ್ತಿಯನ್ನು ನಿರ್ಮಿಸಿದ್ದಾರೆ.</p>.<p>2) 1510ರಲ್ಲಿ ಯಲಹಂಕದಲ್ಲಿ ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳ ಪುತ್ರರಾಗಿ ಕೆಂಪೇಗೌಡರು ಜನಿಸಿದರು. ಅವರು 1513ರಲ್ಲಿ ನಾಡಪ್ರಭುಗಳಾಗಿ ಅಧಿಕಾರ ವಹಿಸಿಕೊಂಡರು.</p>.<p>3) ಬಾಲ್ಯದಿಂದ ಶ್ರೀಕೃಷ್ಣದೇವರಾಯರ ಆಡಳಿತಾವಧಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರು ತಮ್ಮ ನಾಡಿನಲ್ಲಿಯೂ ಈ ಎಲ್ಲಾ ವೈಭವಗಳನ್ನು ಪ್ರತಿಷ್ಠಾಪಿಸುವ ಆಸೆಯನ್ನು ಹೊಂದಿದ್ದರು.</p>.<p>4) ಬೆಂಗಳೂರು ನಗರ ನಿರ್ಮಾಣಕ್ಕೆ ಜಾಗ ಹುಡುಕಿದ ಕೆಂಪೇಗೌಡರು ಭೂಗರ್ಭ-ನೀರಾವರಿ ತಜ್ಞರನ್ನು, ವಾಸ್ತುಶಿಲ್ಪಿಗಳನ್ನು ಕರೆದು ಸ್ಥಳ ಮತ್ತು ಪರಿಸರದ ಪರೀಶಿಲನೆ ಮಾಡಿಸಿ ಮಾಹಿತಿ ಪಡೆಯುತ್ತಾರೆ. ವಿಜಯನಗರದ ಅರಸ ಅಚ್ಯುತರಾಯರನ್ನು ಭೇಟಿ ಮಾಡಿ ರಾಜಧಾನಿ ಬೆಂಗಳೂರಿನ ನಿರ್ಮಾಣದ ಅನುಮತಿಯ ಜತೆಗೆ ಧನ ಸಹಾಯಕ್ಕಾಗಿ ಕೋರಿಕೊಳ್ಳುತ್ತಾರೆ.</p>.<p>5) ಕೆಂಪೇಗೌಡರು ಆಸ್ಥಾನದ ಪ್ರಮುಖರೊಂದಿಗೆ ಚರ್ಚಿಸಿ ಗುರುತಿಸಿದ ಪ್ರದೇಶದಲ್ಲಿ ಕೋಟೆ, ಪೇಟೆ, ಗುಡಿ, ಕೆರೆ ಮತ್ತು ಉದ್ಯಾನ ಈ 5 ವಿಭಾಗಗಳನ್ನು ಒಳಗೊಂಡ ನಗರದ ನಿರ್ಮಾಣಕ್ಕೆ ನೀಲ ನಕ್ಷೆ ತಯಾರಿಸುತ್ತಾರೆ.</p>.<p>ಉತ್ತರ ಸಂಕೇತಗಳು<br />ಎ) 1, 2, 3ನೇ ಹೇಳಿಕೆಗಳು ಮಾತ್ರ ಸರಿಯಾಗಿದೆ<br />ಬಿ) 1, 3, 4 ಮತ್ತು 5ನೇ ಹೇಳಿಕೆಗಳು ಸರಿಯಾಗಿವೆ.<br />ಸಿ) ಎಲ್ಲಾ ಹೇಳಿಕೆಗಳು ತಪ್ಪಾಗಿವೆ<br />ಡಿ) ಎಲ್ಲಾ ಹೇಳಿಕೆಗಳು ಸರಿಯಾಗಿವೆ.</p>.<p>ಉತ್ತರ: ಡಿ</p>.<p>4) ಬ್ರೆಜಿಲ್ ದೇಶದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?</p>.<p>ಎ) ಜೈರ್ ಬೋಲ್ಸನಾರಾ</p>.<p>ಬಿ) ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವಾ</p>.<p>ಸಿ) ಪೀಟರ್ ಬೋಲ್ಸನಾರಾ ಡ ಸಿಲ್ವಾ</p>.<p>ಡಿ) ಮೇಲಿನ ಯಾರೂ ಅಲ್ಲ</p>.<p>ಉತ್ತರ: ಬಿ</p>.<p>5) ಕೆಳಗಿನ ಹೇಳಿಕೆಗಳನ್ನು ಗಮನಿಸಿ</p>.<p>1) ಜಗತ್ತಿನ ಜನಸಂಖ್ಯೆ 800 ಕೋಟಿ ದಾಟಲಿದೆ ಎಂದು ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿ ತಿಳಿಸಿದೆ. 1950ರಲ್ಲಿ ಇದ್ದ ಜನಸಂಖ್ಯಾ ಸ್ಥಿತಿಗೆ ಹೋಲಿಸಿದರೆ ಇದು ತುಂಬಾ ಹೆಚ್ಚು.</p>.<p>2) 2023ರ ಹೊತ್ತಿಗೆ ಭಾರತವು ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಕ್ಕಿ ಮೊದಲ ಸ್ಥಾನದಲ್ಲಿ ನಿಲ್ಲಲಿದೆ.</p>.<p>3) ಚೀನಾದಲ್ಲಿ 140 ಕೋಟಿ ಇರುವ ಜನ ಸಂಖ್ಯೆಯು ಕ್ರಮೇಣವಾಗಿ ಇಳಿಯಲಿದೆ, 2050ರ ಹೊತ್ತಿಗೆ 130 ಕೋಟಿಗೆ ಇಳಿದರೆ ಈ ಶತಮಾನ ಅಂತ್ಯಕ್ಕೆ 80 ಕೋಟಿಗೆ ಇಳಿಯಲಿದೆ.</p>.<p>4) 2050ರ ಹೊತ್ತಿಗೆ ಭಾರತದಲ್ಲಿ ಜನಸಂಖ್ಯೆ 170 ಕೋಟಿಗೆ ಏರುವ ಸಾಧ್ಯತೆ ಇದೆ.</p>.<p>ಉತ್ತರ ಸಂಕೇತಗಳು:</p>.<p>ಎ) 1, 3 ಮತ್ತು 4 ಹೇಳಿಕೆಗಳು ಮಾತ್ರ ಸರಿಯಾಗಿವೆ</p>.<p>ಬಿ) 1 ರಿಂದ 4ರ ತನಕ ಎಲ್ಲಾ ಹೇಳಿಕೆ ಸರಿಯಾಗಿವೆ</p>.<p>ಸಿ) 1, 3, ಮತ್ತು 4 ಹೇಳಿಕೆಗಳು ಸರಿಯಾಗಿವೆ</p>.<p>ಡಿ)1, 3 ಮತ್ತು 4 ಹೇಳಿಕೆಗಳು ಮಾತ್ರ ಸರಿಯಾಗಿವೆ</p>.<p>ಉತ್ತರ: ಬಿ</p>.<p>6) ಅಕ್ಟೋಬರ್ 31 ಅನ್ನು ರಾಷ್ಟ್ರೀಯ ಏಕತಾ ದಿನ ಎಂದು ಆಚರಿಸಲಾಗುತ್ತದೆ. ಹಾಗಾದರೆ ಈ ದಿನ ಯಾರ ಜನ್ಮದಿನವಾಗಿದೆ?</p>.<p>ಎ) ಸರ್ದಾರ್ ವಲ್ಲಭಭಾಯಿ ಪಟೇಲ್</p>.<p>ಬಿ) ಜವಾಹರ ಲಾಲ್ ನೆಹರು</p>.<p>ಸಿ) ಇಂದಿರಾ ಗಾಂಧಿ</p>.<p>ಡಿ) ಅಟಲ್ ಬಿಹಾರಿ ವಾಜಪೇಯಿ</p>.<p>ಉತ್ತರ: ಎ</p>.<p>7) ಕೆಳಗಿನ ಹೇಳಿಕೆಗಳನ್ನು ಗಮನಿಸಿ</p>.<p>1) ಫೊರೆನ್ಸಿಕ್ಸ್ ಮೆಡಿಸಿನ್(ನ್ಯಾಯ ವೈದ್ಯ ಶಾಸ್ತ್ರ) ತಂಡದಿಂದ ಡಯಾಟಮ್ ಟೆಸ್ಟ್ ನಡೆಸಲಾಗುತ್ತದೆ.</p>.<p>2) ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣಗಳಲ್ಲಿ ಕೊಲೆಯಾಗಿರುವ ಅನುಮಾನಗಳಿದ್ದರೆ ಡಯಾಟಮ್ ಟೆಸ್ಟ್(ಪರೀಕ್ಷೆ)ಯನ್ನು ನಡೆಸಲಾಗುತ್ತದೆ. ಆಗ ಮೃತರ ಬಟ್ಟೆಗಳು, ಬೂಟು ಇಲ್ಲವೇ ಚಪ್ಪಲಿ ವಾಹನಗಳು ಇತ್ಯಾದಿಗಳಲ್ಲಿ ಸಿಲುಕಿರುವ ಮಣ್ಣು, ತ್ಯಾಜ್ಯವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತದೆ.</p>.<p>3) ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶವದ ಅಂಗಾಂಗ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆ ವ್ಯಕ್ತಿಯ ಶ್ವಾಸಕೋಶದೊಳಗೆ ಡಯಾಟಮ್ ಅಂಶವು ಪತ್ತೆಯಾದರೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ದೃಢವಾಗುತ್ತದೆ. ಒಂದು ವೇಳೆ ಡಯಾಟಮ್ ಅಂಶಗಳು ಇಲ್ಲದೇ ಹೋದರೆ ಆ ವ್ಯಕ್ತಿಯನ್ನು ಯಾರೋ ಸಾಯಿಸಿ ನೀರಿಗೆ ಹಾಕಿದ್ದಾರೆಂಬ ನಿರ್ಧಾರಕ್ಕೆ ಬರಲಾಗುತ್ತದೆ.</p>.<p>ಉತ್ತರ ಸಂಕೇತಗಳು:</p>.<p>ಎ) 1, 2, ಮತ್ತು 3 ಹೇಳಿಕೆಗಳು ಸರಿಯಾಗಿವೆ<br />ಬಿ) 1 ಮತ್ತು 2 ಹೇಳಿಕೆ ಮಾತ್ರ ಸರಿಯಾಗಿವೆ<br />ಸಿ) 1 ಮತ್ತು 3 ಹೇಳಿಕೆ ಮಾತ್ರ ಸರಿಯಾಗಿವೆ.<br />ಡಿ) 1 ರಿಂದ 3ರ ತನಕ ಎಲ್ಲ ಹೇಳಿಕೆಗಳು ತಪ್ಪಾಗಿವೆ</p>.<p>ಉತ್ತರ: ಎ</p>.<p>(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಎಸ್ಪಿ, ಕೆಪಿಎಸ್ಸಿ ಗ್ರೂಪ್ ‘ಸಿ’ ಸೇರಿದಂತೆ ವಿವಿಧ ಇಲಾಖೆಗಳ ಹುದ್ದೆಗಳಿಗಾಗಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಮೂರು ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.</p>.<p>1) ಕೆಳಗಿನ ಹೇಳಿಕೆಗಳನ್ನು ಗಮನಿಸಿ</p>.<p>1) ಸುಪ್ರೀಂ ಕೋರ್ಟ್ನ 150ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ ವೈ ಚಂದ್ರಚೂಡ್ ಅಧಿಕಾರ ಸ್ವೀಕರಿಸಿದ್ದಾರೆ.</p>.<p>2) ಡಿ ವೈ ಚಂದ್ರಚೂಡ್ ಅವರು 1998ರಲ್ಲಿ ಮುಂಬೈ ಹೈಕೋರ್ಟ್ನಲ್ಲಿ ವಕೀಲರಾಗಿ ಕಾರ್ಯ ಆರಂಭಿಸಿದರು. 1998-2000ರ ಅವಧಿಯಲ್ಲಿ ಭಾರತದ ಸಾಲಿಸಿಟರ್ ಜನರಲ್ ಅಗಿ ನೇಮಕಗೊಂಡಿದ್ದರು. ನಂತರದ ದಿನಗಳಲ್ಲಿ ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2016ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು.</p>.<p>ಉತ್ತರ ಸಂಕೇತಗಳು:</p>.<p>ಎ) ಹೇಳಿಕೆ 2 ಮಾತ್ರ ಸರಿಯಾಗಿದೆ</p>.<p>ಬಿ) ಹೇಳಿಕೆ 1 ಮತ್ತು 2 ಎಲ್ಲವೂ ತಪ್ಪಾಗಿವೆ</p>.<p>ಸಿ) ಹೇಳಿಕೆ 1 ಮತ್ತು 2 ಎಲ್ಲವೂ ಸರಿಯಾಗಿವೆ</p>.<p>ಡಿ) ಹೇಳಿಕೆ 1 ಮಾತ್ರ ಸರಿಯಾಗಿದೆ</p>.<p>ಉತ್ತರ: ಸಿ</p>.<p>2) ಮೀನು ತ್ಯಾಜ್ಯದಿಂದ ಬಯೋಡೀಸೆಲ್ ಉತ್ಪಾದಿಸುವ ಯೋಜನೆಯನ್ನು ಎಲ್ಲಿ ಜಾರಿಗೆ ತರಲಾಗುತ್ತಿದೆ?</p>.<p>ಎ) ಮೂಲ್ಕಿ→ಬಿ) ಸುರತ್ಕಲ್<br />ಸಿ) ಕಾರವಾರ→ಡಿ) ತದಡಿ</p>.<p>ಉತ್ತರ: ಎ</p>.<p>3) ಕೆಳಗಿನ ಹೇಳಿಕೆಗಳನ್ನು ಗಮನಿಸಿ</p>.<p>1) ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ನಿರ್ಮಾಣವಾಗಿದೆ. ಇದು 108 ಅಡಿ ಎತ್ತರ, 120 ಟನ್ ತೂಕವಿದೆ. ಗುಜರಾತ್ನ ‘ಏಕತಾ ಪ್ರತಿಮೆ’ ನಿರ್ಮಾಣ ಮಾಡಿದ ಶಿಲ್ಪಿ ರಾಮ್ ಸುತಾರ್ ಈ ಮೂರ್ತಿಯನ್ನು ನಿರ್ಮಿಸಿದ್ದಾರೆ.</p>.<p>2) 1510ರಲ್ಲಿ ಯಲಹಂಕದಲ್ಲಿ ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳ ಪುತ್ರರಾಗಿ ಕೆಂಪೇಗೌಡರು ಜನಿಸಿದರು. ಅವರು 1513ರಲ್ಲಿ ನಾಡಪ್ರಭುಗಳಾಗಿ ಅಧಿಕಾರ ವಹಿಸಿಕೊಂಡರು.</p>.<p>3) ಬಾಲ್ಯದಿಂದ ಶ್ರೀಕೃಷ್ಣದೇವರಾಯರ ಆಡಳಿತಾವಧಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರು ತಮ್ಮ ನಾಡಿನಲ್ಲಿಯೂ ಈ ಎಲ್ಲಾ ವೈಭವಗಳನ್ನು ಪ್ರತಿಷ್ಠಾಪಿಸುವ ಆಸೆಯನ್ನು ಹೊಂದಿದ್ದರು.</p>.<p>4) ಬೆಂಗಳೂರು ನಗರ ನಿರ್ಮಾಣಕ್ಕೆ ಜಾಗ ಹುಡುಕಿದ ಕೆಂಪೇಗೌಡರು ಭೂಗರ್ಭ-ನೀರಾವರಿ ತಜ್ಞರನ್ನು, ವಾಸ್ತುಶಿಲ್ಪಿಗಳನ್ನು ಕರೆದು ಸ್ಥಳ ಮತ್ತು ಪರಿಸರದ ಪರೀಶಿಲನೆ ಮಾಡಿಸಿ ಮಾಹಿತಿ ಪಡೆಯುತ್ತಾರೆ. ವಿಜಯನಗರದ ಅರಸ ಅಚ್ಯುತರಾಯರನ್ನು ಭೇಟಿ ಮಾಡಿ ರಾಜಧಾನಿ ಬೆಂಗಳೂರಿನ ನಿರ್ಮಾಣದ ಅನುಮತಿಯ ಜತೆಗೆ ಧನ ಸಹಾಯಕ್ಕಾಗಿ ಕೋರಿಕೊಳ್ಳುತ್ತಾರೆ.</p>.<p>5) ಕೆಂಪೇಗೌಡರು ಆಸ್ಥಾನದ ಪ್ರಮುಖರೊಂದಿಗೆ ಚರ್ಚಿಸಿ ಗುರುತಿಸಿದ ಪ್ರದೇಶದಲ್ಲಿ ಕೋಟೆ, ಪೇಟೆ, ಗುಡಿ, ಕೆರೆ ಮತ್ತು ಉದ್ಯಾನ ಈ 5 ವಿಭಾಗಗಳನ್ನು ಒಳಗೊಂಡ ನಗರದ ನಿರ್ಮಾಣಕ್ಕೆ ನೀಲ ನಕ್ಷೆ ತಯಾರಿಸುತ್ತಾರೆ.</p>.<p>ಉತ್ತರ ಸಂಕೇತಗಳು<br />ಎ) 1, 2, 3ನೇ ಹೇಳಿಕೆಗಳು ಮಾತ್ರ ಸರಿಯಾಗಿದೆ<br />ಬಿ) 1, 3, 4 ಮತ್ತು 5ನೇ ಹೇಳಿಕೆಗಳು ಸರಿಯಾಗಿವೆ.<br />ಸಿ) ಎಲ್ಲಾ ಹೇಳಿಕೆಗಳು ತಪ್ಪಾಗಿವೆ<br />ಡಿ) ಎಲ್ಲಾ ಹೇಳಿಕೆಗಳು ಸರಿಯಾಗಿವೆ.</p>.<p>ಉತ್ತರ: ಡಿ</p>.<p>4) ಬ್ರೆಜಿಲ್ ದೇಶದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?</p>.<p>ಎ) ಜೈರ್ ಬೋಲ್ಸನಾರಾ</p>.<p>ಬಿ) ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವಾ</p>.<p>ಸಿ) ಪೀಟರ್ ಬೋಲ್ಸನಾರಾ ಡ ಸಿಲ್ವಾ</p>.<p>ಡಿ) ಮೇಲಿನ ಯಾರೂ ಅಲ್ಲ</p>.<p>ಉತ್ತರ: ಬಿ</p>.<p>5) ಕೆಳಗಿನ ಹೇಳಿಕೆಗಳನ್ನು ಗಮನಿಸಿ</p>.<p>1) ಜಗತ್ತಿನ ಜನಸಂಖ್ಯೆ 800 ಕೋಟಿ ದಾಟಲಿದೆ ಎಂದು ವಿಶ್ವ ಸಂಸ್ಥೆಯ ಜನಸಂಖ್ಯಾ ನಿಧಿ ತಿಳಿಸಿದೆ. 1950ರಲ್ಲಿ ಇದ್ದ ಜನಸಂಖ್ಯಾ ಸ್ಥಿತಿಗೆ ಹೋಲಿಸಿದರೆ ಇದು ತುಂಬಾ ಹೆಚ್ಚು.</p>.<p>2) 2023ರ ಹೊತ್ತಿಗೆ ಭಾರತವು ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಕ್ಕಿ ಮೊದಲ ಸ್ಥಾನದಲ್ಲಿ ನಿಲ್ಲಲಿದೆ.</p>.<p>3) ಚೀನಾದಲ್ಲಿ 140 ಕೋಟಿ ಇರುವ ಜನ ಸಂಖ್ಯೆಯು ಕ್ರಮೇಣವಾಗಿ ಇಳಿಯಲಿದೆ, 2050ರ ಹೊತ್ತಿಗೆ 130 ಕೋಟಿಗೆ ಇಳಿದರೆ ಈ ಶತಮಾನ ಅಂತ್ಯಕ್ಕೆ 80 ಕೋಟಿಗೆ ಇಳಿಯಲಿದೆ.</p>.<p>4) 2050ರ ಹೊತ್ತಿಗೆ ಭಾರತದಲ್ಲಿ ಜನಸಂಖ್ಯೆ 170 ಕೋಟಿಗೆ ಏರುವ ಸಾಧ್ಯತೆ ಇದೆ.</p>.<p>ಉತ್ತರ ಸಂಕೇತಗಳು:</p>.<p>ಎ) 1, 3 ಮತ್ತು 4 ಹೇಳಿಕೆಗಳು ಮಾತ್ರ ಸರಿಯಾಗಿವೆ</p>.<p>ಬಿ) 1 ರಿಂದ 4ರ ತನಕ ಎಲ್ಲಾ ಹೇಳಿಕೆ ಸರಿಯಾಗಿವೆ</p>.<p>ಸಿ) 1, 3, ಮತ್ತು 4 ಹೇಳಿಕೆಗಳು ಸರಿಯಾಗಿವೆ</p>.<p>ಡಿ)1, 3 ಮತ್ತು 4 ಹೇಳಿಕೆಗಳು ಮಾತ್ರ ಸರಿಯಾಗಿವೆ</p>.<p>ಉತ್ತರ: ಬಿ</p>.<p>6) ಅಕ್ಟೋಬರ್ 31 ಅನ್ನು ರಾಷ್ಟ್ರೀಯ ಏಕತಾ ದಿನ ಎಂದು ಆಚರಿಸಲಾಗುತ್ತದೆ. ಹಾಗಾದರೆ ಈ ದಿನ ಯಾರ ಜನ್ಮದಿನವಾಗಿದೆ?</p>.<p>ಎ) ಸರ್ದಾರ್ ವಲ್ಲಭಭಾಯಿ ಪಟೇಲ್</p>.<p>ಬಿ) ಜವಾಹರ ಲಾಲ್ ನೆಹರು</p>.<p>ಸಿ) ಇಂದಿರಾ ಗಾಂಧಿ</p>.<p>ಡಿ) ಅಟಲ್ ಬಿಹಾರಿ ವಾಜಪೇಯಿ</p>.<p>ಉತ್ತರ: ಎ</p>.<p>7) ಕೆಳಗಿನ ಹೇಳಿಕೆಗಳನ್ನು ಗಮನಿಸಿ</p>.<p>1) ಫೊರೆನ್ಸಿಕ್ಸ್ ಮೆಡಿಸಿನ್(ನ್ಯಾಯ ವೈದ್ಯ ಶಾಸ್ತ್ರ) ತಂಡದಿಂದ ಡಯಾಟಮ್ ಟೆಸ್ಟ್ ನಡೆಸಲಾಗುತ್ತದೆ.</p>.<p>2) ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣಗಳಲ್ಲಿ ಕೊಲೆಯಾಗಿರುವ ಅನುಮಾನಗಳಿದ್ದರೆ ಡಯಾಟಮ್ ಟೆಸ್ಟ್(ಪರೀಕ್ಷೆ)ಯನ್ನು ನಡೆಸಲಾಗುತ್ತದೆ. ಆಗ ಮೃತರ ಬಟ್ಟೆಗಳು, ಬೂಟು ಇಲ್ಲವೇ ಚಪ್ಪಲಿ ವಾಹನಗಳು ಇತ್ಯಾದಿಗಳಲ್ಲಿ ಸಿಲುಕಿರುವ ಮಣ್ಣು, ತ್ಯಾಜ್ಯವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತದೆ.</p>.<p>3) ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶವದ ಅಂಗಾಂಗ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆ ವ್ಯಕ್ತಿಯ ಶ್ವಾಸಕೋಶದೊಳಗೆ ಡಯಾಟಮ್ ಅಂಶವು ಪತ್ತೆಯಾದರೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ದೃಢವಾಗುತ್ತದೆ. ಒಂದು ವೇಳೆ ಡಯಾಟಮ್ ಅಂಶಗಳು ಇಲ್ಲದೇ ಹೋದರೆ ಆ ವ್ಯಕ್ತಿಯನ್ನು ಯಾರೋ ಸಾಯಿಸಿ ನೀರಿಗೆ ಹಾಕಿದ್ದಾರೆಂಬ ನಿರ್ಧಾರಕ್ಕೆ ಬರಲಾಗುತ್ತದೆ.</p>.<p>ಉತ್ತರ ಸಂಕೇತಗಳು:</p>.<p>ಎ) 1, 2, ಮತ್ತು 3 ಹೇಳಿಕೆಗಳು ಸರಿಯಾಗಿವೆ<br />ಬಿ) 1 ಮತ್ತು 2 ಹೇಳಿಕೆ ಮಾತ್ರ ಸರಿಯಾಗಿವೆ<br />ಸಿ) 1 ಮತ್ತು 3 ಹೇಳಿಕೆ ಮಾತ್ರ ಸರಿಯಾಗಿವೆ.<br />ಡಿ) 1 ರಿಂದ 3ರ ತನಕ ಎಲ್ಲ ಹೇಳಿಕೆಗಳು ತಪ್ಪಾಗಿವೆ</p>.<p>ಉತ್ತರ: ಎ</p>.<p>(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>