<h2>ಹೂಗುಚ್ಛ ಬೇಡ</h2><p><strong>ಮುಂಬೈ: </strong>ಅಧಿಕೃತ ಕಾರ್ಯಕ್ರಮಗಳಲ್ಲಿ ಹೂಗುಚ್ಛದ ಬದಲಿಗೆ ನೋಟ್ಪುಸ್ತಕ ನೀಡುವ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲಾ ಪರಿಷತ್ನ ಸಿಇಒ ರವೀಂದ್ರ.</p><p>ಈ ವರ್ಷದ ಫೆಬ್ರುವರಿಯಲ್ಲಿ ಅವರು ಈ ಹುದ್ದೆಗೆ ವರ್ಗವಾಗಿ ಬಂದಾಗಿನಿಂದ ಈವರೆಗೆ 2,000 ನೋಟ್ಪುಸ್ತಕಗಳು ಸಂಗ್ರಹವಾಗಿದ್ದು, ಅವುಗಳನ್ನು ಬಡಮಕ್ಕಳಿಗೆ ವಿತರಿಸಲಾಗಿದೆ.</p>.<p>ಅಹೋರಾತ್ರಿ ಪಾದಯಾತ್ರೆ</p>.<p><strong>ಇಟಾನಗರ: </strong>ಬಹುಕಾಲದಿಂದ ಇರುವ ಶಿಕ್ಷಕರ ಕೊರತೆ ನೀಗಿಸುವಂತೆ ಆಗ್ರಹಿಸಿ, ಅರುಣಾಚಲ ಪ್ರದೇಶದ ಪಕ್ಕೆ ಕೆಸ್ಸಾಂಗ್ ಜಿಲ್ಲೆಯ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ಸುಮಾರು 90 ವಿದ್ಯಾರ್ಥಿನಿಯರು ಇತ್ತೀಚೆಗೆ 65 ಕಿ.ಮೀ ದೂರದವರೆಗೆ ಮೆರವಣಿಗೆ ನಡೆಸಿದರು.</p><p>ಹಗಲೂ ರಾತ್ರಿ ಪಾದಯಾತ್ರೆ ನಡೆಸಿ ಜಿಲ್ಲಾ ಕೇಂದ್ರಕ್ಕೆ ಬಂದು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅವರು ಹಿಡಿದಿದ್ದ ‘ಶಿಕ್ಷಕ ರಿಲ್ಲದ ಶಾಲೆಯು ಬರೀ ಕಟ್ಟಡದಂತೆ’ ಎಂಬ ಫಲಕಗಳು ಗಮನ ಸೆಳೆದವು. ಬಾಲಕಿಯರ ಈ ದಿಢೀರ್ ಪಾದಯಾತ್ರೆಯು ಪೋಷಕರು, ಅಧಿಕಾರಿಗಳು ಹಾಗೂ ಜನಸಾಮಾನ್ಯರಲ್ಲಿ ಅಚ್ಚರಿ ಹಾಗೂ ಆಘಾತ ಉಂಟು ಮಾಡಿತು. ತಕ್ಷಣವೇ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅಧಿಕಾರಿಗಳು, ವಾಹನದ ಮೂಲಕ ಮಕ್ಕಳನ್ನು ವಾಪಸ್ ಕಳುಹಿಸಿ<br>ಕೊಟ್ಟರು. ಸ್ವಯಂಸೇವಾ ಸಂಸ್ಥೆಯೊಂದು ಈ ಶಾಲೆಯನ್ನು ನಡೆಸುತ್ತಿದೆ.</p>.<h2>ಲಕ್ಷಾಂತರ ಮಂದಿಗೆ ಪರೀಕ್ಷೆ</h2>.<p><strong>ಕೋಲ್ಕತ್ತ: </strong>ಪಶ್ಚಿಮ ಬಂಗಾಳದ 11 ಮತ್ತು 12ನೇ ತರಗತಿಯ ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿಗಾಗಿ ಇತ್ತೀಚೆಗೆ ನಡೆದ ಪರೀಕ್ಷೆಗೆ 2.20 ಲಕ್ಷ ಮಂದಿ ಹಾಜರಾಗಿದ್ದರು. ಇವರಲ್ಲಿ ಸಾವಿರಾರು ಮಂದಿ ನೆರೆಯ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಸೇರಿದವರು.</p><p>ಇದೇ ತಿಂಗಳ ಆರಂಭದಲ್ಲಿ 9 ಮತ್ತು 10ನೇ ತರಗತಿಯ ಶಿಕ್ಷಕರ ನೇಮಕಾತಿಗಾಗಿ ನಡೆದಿದ್ದ ಪರೀಕ್ಷೆಯನ್ನು ಸುಮಾರು 3 ಲಕ್ಷ ಮಂದಿ ಬರೆದಿದ್ದರು. </p><p>2016ರ ನೇಮಕಾತಿ ಪ್ರಕ್ರಿಯೆ ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿತ್ತ ಬಳಿಕ, 26,000 ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಅವರ ಜಾಗಕ್ಕೆ ಈ ಹೊಸ ನೇಮಕಾತಿ ಪ್ರಕ್ರಿಯೆ ನಡೆದಿದೆ.</p>. <h2>ಕಾಲು ಮುಟ್ಟದೆ ಹೊಡೆತ ತಿಂದರು</h2>.<p><strong>ಬಾರೀಪದಾ(ಒಡಿಶಾ): </strong>ತಮ್ಮ ಕಾಲು ಮುಟ್ಟಿ ನಮಸ್ಕರಿಸದ ವಿದ್ಯಾರ್ಥಿಗಳನ್ನು ಥಳಿಸಿದ ಮಯೂರ್ಭಂಜ್ ಜಿಲ್ಲೆಯ ಗ್ರಾಮವೊಂದರ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.</p>. <p>ಬೆಳಗಿನ ಪ್ರಾರ್ಥನೆಯ ಬಳಿಕ ವಿದ್ಯಾರ್ಥಿಗಳು ಶಿಕ್ಷಕರ ಪಾದ ಮುಟ್ಟಿ ಗೌರವ ಸಲ್ಲಿಸುವುದು ಈ ಶಾಲೆಯಲ್ಲಿ ರೂಢಿಯಲ್ಲಿದೆ. ಆದರೆ ಅಂದು ಶಿಕ್ಷಕಿ ಸುಕಾಂತಿ ಕರ್ ಶಾಲೆಗೆ ತಡವಾಗಿ ಬಂದಿದ್ದು, ಅಷ್ಟರಲ್ಲಿ ಪ್ರಾರ್ಥನೆ ಮುಗಿದಿತ್ತು. ಹೀಗಾಗಿ, ಮಕ್ಕಳು ಅವರ ಕಾಲಿಗೆ ನಮಸ್ಕರಿಸಲಿಲ್ಲ. ಇದರಿಂದ ಸಿಟ್ಟಿಗೆದ್ದ ಶಿಕ್ಷಕಿ, 6, 7 ಮತ್ತು 8ನೇ ತರಗತಿಯ 31 ಮಕ್ಕಳಿಗೆ ಬಿದಿರುಕೋಲಿನಿಂದ ಹೊಡೆದಿದ್ದರು. ಇದರಿಂದ ಹಲವರ ಕೈಗಳು ಮತ್ತು ಬೆನ್ನಿನಲ್ಲಿ ಬರೆ ಬಂದಿತ್ತು. ಒಬ್ಬ ಬಾಲಕನ ಕೈಮೂಳೆ ಮುರಿದಿತ್ತು. ಪ್ರಜ್ಞಾಹೀನಳಾದ </p>.<p>ವಿದ್ಯಾರ್ಥಿನಿಯೊಬ್ಬಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಗಿ ಬಂದಿತ್ತು. ಶಾಲಾ ಆಡಳಿತ ಮಂಡಳಿ ನಡೆಸಿದ ತನಿಖೆಯಿಂದ ಈ ಸಂಗತಿಗಳು ಹೊರಬಂದಿದ್ದವು. ಶಾಲಾ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದನ್ನು ಒಡಿಶಾ ಸರ್ಕಾರ 2004ರಲ್ಲೇ ನಿಷೇಧಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಹೂಗುಚ್ಛ ಬೇಡ</h2><p><strong>ಮುಂಬೈ: </strong>ಅಧಿಕೃತ ಕಾರ್ಯಕ್ರಮಗಳಲ್ಲಿ ಹೂಗುಚ್ಛದ ಬದಲಿಗೆ ನೋಟ್ಪುಸ್ತಕ ನೀಡುವ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲಾ ಪರಿಷತ್ನ ಸಿಇಒ ರವೀಂದ್ರ.</p><p>ಈ ವರ್ಷದ ಫೆಬ್ರುವರಿಯಲ್ಲಿ ಅವರು ಈ ಹುದ್ದೆಗೆ ವರ್ಗವಾಗಿ ಬಂದಾಗಿನಿಂದ ಈವರೆಗೆ 2,000 ನೋಟ್ಪುಸ್ತಕಗಳು ಸಂಗ್ರಹವಾಗಿದ್ದು, ಅವುಗಳನ್ನು ಬಡಮಕ್ಕಳಿಗೆ ವಿತರಿಸಲಾಗಿದೆ.</p>.<p>ಅಹೋರಾತ್ರಿ ಪಾದಯಾತ್ರೆ</p>.<p><strong>ಇಟಾನಗರ: </strong>ಬಹುಕಾಲದಿಂದ ಇರುವ ಶಿಕ್ಷಕರ ಕೊರತೆ ನೀಗಿಸುವಂತೆ ಆಗ್ರಹಿಸಿ, ಅರುಣಾಚಲ ಪ್ರದೇಶದ ಪಕ್ಕೆ ಕೆಸ್ಸಾಂಗ್ ಜಿಲ್ಲೆಯ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ಸುಮಾರು 90 ವಿದ್ಯಾರ್ಥಿನಿಯರು ಇತ್ತೀಚೆಗೆ 65 ಕಿ.ಮೀ ದೂರದವರೆಗೆ ಮೆರವಣಿಗೆ ನಡೆಸಿದರು.</p><p>ಹಗಲೂ ರಾತ್ರಿ ಪಾದಯಾತ್ರೆ ನಡೆಸಿ ಜಿಲ್ಲಾ ಕೇಂದ್ರಕ್ಕೆ ಬಂದು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅವರು ಹಿಡಿದಿದ್ದ ‘ಶಿಕ್ಷಕ ರಿಲ್ಲದ ಶಾಲೆಯು ಬರೀ ಕಟ್ಟಡದಂತೆ’ ಎಂಬ ಫಲಕಗಳು ಗಮನ ಸೆಳೆದವು. ಬಾಲಕಿಯರ ಈ ದಿಢೀರ್ ಪಾದಯಾತ್ರೆಯು ಪೋಷಕರು, ಅಧಿಕಾರಿಗಳು ಹಾಗೂ ಜನಸಾಮಾನ್ಯರಲ್ಲಿ ಅಚ್ಚರಿ ಹಾಗೂ ಆಘಾತ ಉಂಟು ಮಾಡಿತು. ತಕ್ಷಣವೇ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅಧಿಕಾರಿಗಳು, ವಾಹನದ ಮೂಲಕ ಮಕ್ಕಳನ್ನು ವಾಪಸ್ ಕಳುಹಿಸಿ<br>ಕೊಟ್ಟರು. ಸ್ವಯಂಸೇವಾ ಸಂಸ್ಥೆಯೊಂದು ಈ ಶಾಲೆಯನ್ನು ನಡೆಸುತ್ತಿದೆ.</p>.<h2>ಲಕ್ಷಾಂತರ ಮಂದಿಗೆ ಪರೀಕ್ಷೆ</h2>.<p><strong>ಕೋಲ್ಕತ್ತ: </strong>ಪಶ್ಚಿಮ ಬಂಗಾಳದ 11 ಮತ್ತು 12ನೇ ತರಗತಿಯ ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿಗಾಗಿ ಇತ್ತೀಚೆಗೆ ನಡೆದ ಪರೀಕ್ಷೆಗೆ 2.20 ಲಕ್ಷ ಮಂದಿ ಹಾಜರಾಗಿದ್ದರು. ಇವರಲ್ಲಿ ಸಾವಿರಾರು ಮಂದಿ ನೆರೆಯ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಸೇರಿದವರು.</p><p>ಇದೇ ತಿಂಗಳ ಆರಂಭದಲ್ಲಿ 9 ಮತ್ತು 10ನೇ ತರಗತಿಯ ಶಿಕ್ಷಕರ ನೇಮಕಾತಿಗಾಗಿ ನಡೆದಿದ್ದ ಪರೀಕ್ಷೆಯನ್ನು ಸುಮಾರು 3 ಲಕ್ಷ ಮಂದಿ ಬರೆದಿದ್ದರು. </p><p>2016ರ ನೇಮಕಾತಿ ಪ್ರಕ್ರಿಯೆ ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿತ್ತ ಬಳಿಕ, 26,000 ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಅವರ ಜಾಗಕ್ಕೆ ಈ ಹೊಸ ನೇಮಕಾತಿ ಪ್ರಕ್ರಿಯೆ ನಡೆದಿದೆ.</p>. <h2>ಕಾಲು ಮುಟ್ಟದೆ ಹೊಡೆತ ತಿಂದರು</h2>.<p><strong>ಬಾರೀಪದಾ(ಒಡಿಶಾ): </strong>ತಮ್ಮ ಕಾಲು ಮುಟ್ಟಿ ನಮಸ್ಕರಿಸದ ವಿದ್ಯಾರ್ಥಿಗಳನ್ನು ಥಳಿಸಿದ ಮಯೂರ್ಭಂಜ್ ಜಿಲ್ಲೆಯ ಗ್ರಾಮವೊಂದರ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.</p>. <p>ಬೆಳಗಿನ ಪ್ರಾರ್ಥನೆಯ ಬಳಿಕ ವಿದ್ಯಾರ್ಥಿಗಳು ಶಿಕ್ಷಕರ ಪಾದ ಮುಟ್ಟಿ ಗೌರವ ಸಲ್ಲಿಸುವುದು ಈ ಶಾಲೆಯಲ್ಲಿ ರೂಢಿಯಲ್ಲಿದೆ. ಆದರೆ ಅಂದು ಶಿಕ್ಷಕಿ ಸುಕಾಂತಿ ಕರ್ ಶಾಲೆಗೆ ತಡವಾಗಿ ಬಂದಿದ್ದು, ಅಷ್ಟರಲ್ಲಿ ಪ್ರಾರ್ಥನೆ ಮುಗಿದಿತ್ತು. ಹೀಗಾಗಿ, ಮಕ್ಕಳು ಅವರ ಕಾಲಿಗೆ ನಮಸ್ಕರಿಸಲಿಲ್ಲ. ಇದರಿಂದ ಸಿಟ್ಟಿಗೆದ್ದ ಶಿಕ್ಷಕಿ, 6, 7 ಮತ್ತು 8ನೇ ತರಗತಿಯ 31 ಮಕ್ಕಳಿಗೆ ಬಿದಿರುಕೋಲಿನಿಂದ ಹೊಡೆದಿದ್ದರು. ಇದರಿಂದ ಹಲವರ ಕೈಗಳು ಮತ್ತು ಬೆನ್ನಿನಲ್ಲಿ ಬರೆ ಬಂದಿತ್ತು. ಒಬ್ಬ ಬಾಲಕನ ಕೈಮೂಳೆ ಮುರಿದಿತ್ತು. ಪ್ರಜ್ಞಾಹೀನಳಾದ </p>.<p>ವಿದ್ಯಾರ್ಥಿನಿಯೊಬ್ಬಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಗಿ ಬಂದಿತ್ತು. ಶಾಲಾ ಆಡಳಿತ ಮಂಡಳಿ ನಡೆಸಿದ ತನಿಖೆಯಿಂದ ಈ ಸಂಗತಿಗಳು ಹೊರಬಂದಿದ್ದವು. ಶಾಲಾ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದನ್ನು ಒಡಿಶಾ ಸರ್ಕಾರ 2004ರಲ್ಲೇ ನಿಷೇಧಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>