<p>(ಮುಂದುವರಿದ ಭಾಗ)</p>.<p><strong>16)→ಕೆಳಗಿನ ಯಾವುದು ಭಾರತದಲ್ಲಿ ಇರುವ ಮಧ್ಯಶಿಲಾಯುಗದ ಪ್ರಮುಖ ತಾಣವಾಗಿದೆ?</strong></p>.<p>→ಎ) ಗುಜರಾತಿನ ಸಬರಮತಿ→ಬಿ) ಮಹಾರಾಷ್ಟ್ರದ ಅಹ್ಮದ್ನಗರ</p>.<p>→ಸಿ) ಕರ್ನಾಟಕದ ಬಳ್ಳಾರಿ→ಡಿ) ಮೇಲಿನ ಎಲ್ಲವೂ</p>.<p><strong>ಉತ್ತರ: (ಡಿ)</strong></p>.<p>ವಿವರಣೆ: ರಾಜಸ್ಥಾನದ ಅಜ್ಮೀರ, ಗುಜರಾತಿನ ಸಬರಮತಿ, ಮಹಾರಾಷ್ಟ್ರದ ಅಹ್ಮದ್ನಗರ, ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಮತ್ತು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಭಾರತದಲ್ಲಿದ್ದ ಮಧ್ಯಶಿಲಾಯುಗದ ಪ್ರಮುಖ ತಾಣಗಳಾಗಿವೆ.</p>.<p><strong>17) ಸ್ವಾಮಿ ದಯಾನಂದ ಸರಸ್ವತಿಯವರ ಪ್ರಕಾರ ಆರ್ಯರ ಮೂಲ ಯಾವುದು?</strong></p>.<p>ಎ) ಟಿಬೆಟ್→ಬಿ) ಉತ್ತರ ಧ್ರುವ</p>.<p>ಸಿ) ಮಧ್ಯ ಏಷಿಯಾ→ಡಿ) ಆಗ್ನೇಯ ಏಷಿಯಾ</p>.<p><strong>ಉತ್ತರ: (ಎ)</strong></p>.<p>ವಿವರಣೆ: ಸ್ವಾಮಿ ದಯಾನಂದ ಸರಸ್ವತಿಯವರು ಆರ್ಯರ ಮೂಲ ಟಿಬೆಟ್ ಎಂದು ಹೇಳಿದ್ದಾರೆ.</p>.<p><strong>18)→ಇಮ್ಮಡಿ ಪುಲಿಕೇಶಿಯ ಆಸ್ಥಾನ ಕವಿಯಾಗಿದ್ದ ರವಿಕೀರ್ತಿಯು ಈ ಕೆಳಗಿನ ಯಾವ ದೇವಾಲಯವನ್ನು ನಿರ್ಮಿಸಿದನು?</strong></p>.<p>→ಎ) ವಿರೂಪಾಕ್ಷ ದೇವಾಲಯ→ಬಿ) ಮೇಗುತಿ ದೇವಾಲಯ</p>.<p>→ಸಿ) ಭೋಗ ನಂದೀಶ್ವರ ದೇವಾಲಯ→ಡಿ) ಕಲ್ಲೇಶ್ವರ ದೇವಾಲಯ</p>.<p><strong>ಉತ್ತರ: (ಬಿ)</strong></p>.<p>ವಿವರಣೆ: ಜೈನ ಮೆಗುತಿ ದೇವಸ್ಥಾನವು ಗಳಗನಾಥ ಸಮೂಹಕ್ಕೆ ಸೇರಿದ್ದು, ಐಹೊಳೆಯ ಸಣ್ಣ ಬೆಟ್ಟದ ತುದಿಯಲ್ಲಿದೆ. ಶಾಸನಗಳ ಪ್ರಕಾರ, ಈ ದೇವಾಲಯವನ್ನು ಕ್ರಿ.ಶ 634 ರಲ್ಲಿ 2ನೇ ಪುಲಕೇಶಿಯ ದಂಡನಾಯಕ ಮತ್ತು ಮಂತ್ರಿಯಾಗಿದ್ದ ರವಿಕೀರ್ತಿ ನಿರ್ಮಿಸಿದ್ದಾರೆ. ಈ ದೇವಾಲಯ ಪೂರ್ಣಗೊಂಡಿಲ್ಲವಾದರೂ, ಅವುಗಳ ಕೆತ್ತನೆ ಮತ್ತು ಶೈಲಿಯು ಬಾದಾಮಿ ಗುಹೆ ದೇವಾಲಯಗಳು ಮತ್ತು ಆ ಕಾಲದ ಇತರ ದೇವಾಲಯಗಳಿಗಿಂತ ಹೆಚ್ಚು ಪರಿಷ್ಕರಿಸಲ್ಪಟ್ಟಿದೆ.</p>.<p><strong>19)→ಶಾತವಾಹನರ ಕಾಲದಲ್ಲಿ ನಗರಾಡಳಿತವು ಈ ಕೆಳಗಿನ ಯಾರ ಕೈಯಲ್ಲಿತ್ತು.?</strong></p>.<p>→ಎ) ನಿಗಮ ಸಭಾ→ಬಿ) ಆಗಮ ಸಭಾ</p>.<p>→ಸಿ) ಸಮಿತಿ→ಡಿ) ವಿಧಾತಾ</p>.<p>ಉತ್ತರ : (ಎ)</p>.<p>ವಿವರಣೆ: ಶಾತವಾಹನರು ಶಾಸ್ತ್ರಗಳ ಆಡಳಿತ ಮಾರ್ಗಸೂಚಿಗಳನ್ನು ಅನುಸರಿಸಿದರು. ಶಾಸನಗಳು ನಗರ (ನಗರ), ನಿಗಮಾ (ಮಾರುಕಟ್ಟೆ ಪಟ್ಟಣ) ಮತ್ತು ಗಾಮಾ (ಗ್ರಾಮ) ಎಂಬ ಮೂರು ಬಗೆಯ ವಸಾಹತುಗಳನ್ನು ಉಲ್ಲೇಖಿಸುತ್ತವೆ. ಶಾತವಾಹನರ ಕಾಲದಲ್ಲಿ ಪಟ್ಟಣ ಆಡಳಿತವು ನಿಗಮಸಭೆಯ ಕೈಯಲ್ಲಿತ್ತು.</p>.<p><strong>20) ಹಲಾ ರಚಿಸಿದ ಕೃತಿ ‘ಗಾಥಾ ಸಪ್ತಶತಿ’ ಯಾವ ಭಾಷೆಯಲ್ಲಿದೆ?</strong></p>.<p>→ಎ) ಪ್ರಾಕೃತ→ಬಿ) ಸಂಸ್ಕೃತ→ಸಿ) ತಮಿಳು→ಡಿ) ಕನ್ನಡ</p>.<p><strong>ಉತ್ತರ : (ಎ)</strong></p>.<p>ವಿವರಣೆ: ‘ಗಥಾ ಸಪ್ತಶತಿ’ ಮಹಾರಾಷ್ಟ್ರ ಪ್ರಾಕೃತ ಭಾಷೆಯಲ್ಲಿರುವ ಭಾರತೀಯ ಕವನಗಳ ಪ್ರಾಚೀನ ಸಂಗ್ರಹವಾಗಿದೆ. ಕವನಗಳು ಪ್ರೀತಿ ಮತ್ತು ಪ್ರೀತಿಯ ಸಂತೋಷದ ಬಗ್ಗೆ ಇವೆ. ಈ ಸಂಗ್ರಹವು 1ನೇ ಶತಮಾನದಲ್ಲಿದ್ದ ರಾಜ ಹಲಾನ ಗುಣಲಕ್ಷಣ ಬಗ್ಗೆ ಇವೆ.</p>.<p><strong>21) ಕೆಳಗಿನ ಯಾವುದು ಬೌದ್ಧ ಧರ್ಮದ ನೀತಿ ಸಂಹಿತೆಯಲ್ಲಿ ಸೇರಿಲ್ಲ?</strong></p>.<p>→ಎ) ಹಳದಿ ಬಟ್ಟೆ→ಬಿ) ಭಿಕ್ಷಾಪಾತ್ರೆ</p>.<p>→ಸಿ) ಸೂಜಿ ದಾರ→ಡಿ) ದಿನಕ್ಕೆ ಎರಡು ಹೊತ್ತು ಊಟ</p>.<p><strong>ಉತ್ತರ : (ಡಿ)</strong></p>.<p>ವಿವರಣೆ: ಬೌದ್ಧ ಧರ್ಮದ ನೀತಿ ಸಂಹಿತೆ: 1. ಹಳದಿ ಬಟ್ಟೆ, 2. ಭಿಕ್ಷಾಪಾತ್ರೆ, 3. ಸೂಜಿ ದಾರ 4. ದಿನಕ್ಕೆ ಒಂದು ಹೊತ್ತು ಊಟ.</p>.<p><strong>22) ‘ಪಬ್ಬಜ್ಜಾ’ ಎಂಬುದು ಏನು?</strong></p>.<p>→ಎ) ಬೌದ್ಧ ಸಂಘದಲ್ಲಿ ತೆಗೆದುಕೊಳ್ಳುವ ಆರಂಭಿಕ ದೀಕ್ಷೆ</p>.<p>→ಬಿ) ಜೈನ ಧರ್ಮದಲ್ಲಿ ಕೈಗೊಳ್ಳುವ ಸಲ್ಲೇಖನ ವ್ರತ</p>.<p>→ಸಿ) ಬೌದ್ಧ ಮಂದಿರದ ಹೆಸರು</p>.<p>→ಡಿ) ಮೇಲಿನ ಯಾವುದೂ ಅಲ್ಲ</p>.<p><strong>ಉತ್ತರ : (ಎ)</strong></p>.<p>ವಿವರಣೆ: ಬುದ್ಧನು ತನ್ನ ಅನುಯಾಯಿಗಳು ಪಬ್ಬಜ್ಜಾ ಮತ್ತು ಉಪಸಂಪದಾ ಉನ್ನತ ದೀಕ್ಷೆಗಳನ್ನು ಕೈಗೊಳ್ಳಬೇಕೆಂದು ಅಪೇಕ್ಷಿಸಿದ್ದನು, ಪಬ್ಬಜ್ಜಾ ಎಂದರೆ ಗೃಹಸ್ಥರು ಭಿಕ್ಷುಗಳ ಸಂಘ ಜೀವನದೊಳಗೆ ಕಾಲಿರಿಸುವ ಆರಂಭಿಕ ಶಿಷ್ಯತ್ವದ ಮಾರ್ಗವಾಗಿದೆ.</p>.<p><em>(ಪ್ರಶ್ನೋತ್ತರ ಸಂಯೋಜನೆ: www.iasjnana.com, 9916399276)</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>(ಮುಂದುವರಿದ ಭಾಗ)</p>.<p><strong>16)→ಕೆಳಗಿನ ಯಾವುದು ಭಾರತದಲ್ಲಿ ಇರುವ ಮಧ್ಯಶಿಲಾಯುಗದ ಪ್ರಮುಖ ತಾಣವಾಗಿದೆ?</strong></p>.<p>→ಎ) ಗುಜರಾತಿನ ಸಬರಮತಿ→ಬಿ) ಮಹಾರಾಷ್ಟ್ರದ ಅಹ್ಮದ್ನಗರ</p>.<p>→ಸಿ) ಕರ್ನಾಟಕದ ಬಳ್ಳಾರಿ→ಡಿ) ಮೇಲಿನ ಎಲ್ಲವೂ</p>.<p><strong>ಉತ್ತರ: (ಡಿ)</strong></p>.<p>ವಿವರಣೆ: ರಾಜಸ್ಥಾನದ ಅಜ್ಮೀರ, ಗುಜರಾತಿನ ಸಬರಮತಿ, ಮಹಾರಾಷ್ಟ್ರದ ಅಹ್ಮದ್ನಗರ, ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಮತ್ತು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಭಾರತದಲ್ಲಿದ್ದ ಮಧ್ಯಶಿಲಾಯುಗದ ಪ್ರಮುಖ ತಾಣಗಳಾಗಿವೆ.</p>.<p><strong>17) ಸ್ವಾಮಿ ದಯಾನಂದ ಸರಸ್ವತಿಯವರ ಪ್ರಕಾರ ಆರ್ಯರ ಮೂಲ ಯಾವುದು?</strong></p>.<p>ಎ) ಟಿಬೆಟ್→ಬಿ) ಉತ್ತರ ಧ್ರುವ</p>.<p>ಸಿ) ಮಧ್ಯ ಏಷಿಯಾ→ಡಿ) ಆಗ್ನೇಯ ಏಷಿಯಾ</p>.<p><strong>ಉತ್ತರ: (ಎ)</strong></p>.<p>ವಿವರಣೆ: ಸ್ವಾಮಿ ದಯಾನಂದ ಸರಸ್ವತಿಯವರು ಆರ್ಯರ ಮೂಲ ಟಿಬೆಟ್ ಎಂದು ಹೇಳಿದ್ದಾರೆ.</p>.<p><strong>18)→ಇಮ್ಮಡಿ ಪುಲಿಕೇಶಿಯ ಆಸ್ಥಾನ ಕವಿಯಾಗಿದ್ದ ರವಿಕೀರ್ತಿಯು ಈ ಕೆಳಗಿನ ಯಾವ ದೇವಾಲಯವನ್ನು ನಿರ್ಮಿಸಿದನು?</strong></p>.<p>→ಎ) ವಿರೂಪಾಕ್ಷ ದೇವಾಲಯ→ಬಿ) ಮೇಗುತಿ ದೇವಾಲಯ</p>.<p>→ಸಿ) ಭೋಗ ನಂದೀಶ್ವರ ದೇವಾಲಯ→ಡಿ) ಕಲ್ಲೇಶ್ವರ ದೇವಾಲಯ</p>.<p><strong>ಉತ್ತರ: (ಬಿ)</strong></p>.<p>ವಿವರಣೆ: ಜೈನ ಮೆಗುತಿ ದೇವಸ್ಥಾನವು ಗಳಗನಾಥ ಸಮೂಹಕ್ಕೆ ಸೇರಿದ್ದು, ಐಹೊಳೆಯ ಸಣ್ಣ ಬೆಟ್ಟದ ತುದಿಯಲ್ಲಿದೆ. ಶಾಸನಗಳ ಪ್ರಕಾರ, ಈ ದೇವಾಲಯವನ್ನು ಕ್ರಿ.ಶ 634 ರಲ್ಲಿ 2ನೇ ಪುಲಕೇಶಿಯ ದಂಡನಾಯಕ ಮತ್ತು ಮಂತ್ರಿಯಾಗಿದ್ದ ರವಿಕೀರ್ತಿ ನಿರ್ಮಿಸಿದ್ದಾರೆ. ಈ ದೇವಾಲಯ ಪೂರ್ಣಗೊಂಡಿಲ್ಲವಾದರೂ, ಅವುಗಳ ಕೆತ್ತನೆ ಮತ್ತು ಶೈಲಿಯು ಬಾದಾಮಿ ಗುಹೆ ದೇವಾಲಯಗಳು ಮತ್ತು ಆ ಕಾಲದ ಇತರ ದೇವಾಲಯಗಳಿಗಿಂತ ಹೆಚ್ಚು ಪರಿಷ್ಕರಿಸಲ್ಪಟ್ಟಿದೆ.</p>.<p><strong>19)→ಶಾತವಾಹನರ ಕಾಲದಲ್ಲಿ ನಗರಾಡಳಿತವು ಈ ಕೆಳಗಿನ ಯಾರ ಕೈಯಲ್ಲಿತ್ತು.?</strong></p>.<p>→ಎ) ನಿಗಮ ಸಭಾ→ಬಿ) ಆಗಮ ಸಭಾ</p>.<p>→ಸಿ) ಸಮಿತಿ→ಡಿ) ವಿಧಾತಾ</p>.<p>ಉತ್ತರ : (ಎ)</p>.<p>ವಿವರಣೆ: ಶಾತವಾಹನರು ಶಾಸ್ತ್ರಗಳ ಆಡಳಿತ ಮಾರ್ಗಸೂಚಿಗಳನ್ನು ಅನುಸರಿಸಿದರು. ಶಾಸನಗಳು ನಗರ (ನಗರ), ನಿಗಮಾ (ಮಾರುಕಟ್ಟೆ ಪಟ್ಟಣ) ಮತ್ತು ಗಾಮಾ (ಗ್ರಾಮ) ಎಂಬ ಮೂರು ಬಗೆಯ ವಸಾಹತುಗಳನ್ನು ಉಲ್ಲೇಖಿಸುತ್ತವೆ. ಶಾತವಾಹನರ ಕಾಲದಲ್ಲಿ ಪಟ್ಟಣ ಆಡಳಿತವು ನಿಗಮಸಭೆಯ ಕೈಯಲ್ಲಿತ್ತು.</p>.<p><strong>20) ಹಲಾ ರಚಿಸಿದ ಕೃತಿ ‘ಗಾಥಾ ಸಪ್ತಶತಿ’ ಯಾವ ಭಾಷೆಯಲ್ಲಿದೆ?</strong></p>.<p>→ಎ) ಪ್ರಾಕೃತ→ಬಿ) ಸಂಸ್ಕೃತ→ಸಿ) ತಮಿಳು→ಡಿ) ಕನ್ನಡ</p>.<p><strong>ಉತ್ತರ : (ಎ)</strong></p>.<p>ವಿವರಣೆ: ‘ಗಥಾ ಸಪ್ತಶತಿ’ ಮಹಾರಾಷ್ಟ್ರ ಪ್ರಾಕೃತ ಭಾಷೆಯಲ್ಲಿರುವ ಭಾರತೀಯ ಕವನಗಳ ಪ್ರಾಚೀನ ಸಂಗ್ರಹವಾಗಿದೆ. ಕವನಗಳು ಪ್ರೀತಿ ಮತ್ತು ಪ್ರೀತಿಯ ಸಂತೋಷದ ಬಗ್ಗೆ ಇವೆ. ಈ ಸಂಗ್ರಹವು 1ನೇ ಶತಮಾನದಲ್ಲಿದ್ದ ರಾಜ ಹಲಾನ ಗುಣಲಕ್ಷಣ ಬಗ್ಗೆ ಇವೆ.</p>.<p><strong>21) ಕೆಳಗಿನ ಯಾವುದು ಬೌದ್ಧ ಧರ್ಮದ ನೀತಿ ಸಂಹಿತೆಯಲ್ಲಿ ಸೇರಿಲ್ಲ?</strong></p>.<p>→ಎ) ಹಳದಿ ಬಟ್ಟೆ→ಬಿ) ಭಿಕ್ಷಾಪಾತ್ರೆ</p>.<p>→ಸಿ) ಸೂಜಿ ದಾರ→ಡಿ) ದಿನಕ್ಕೆ ಎರಡು ಹೊತ್ತು ಊಟ</p>.<p><strong>ಉತ್ತರ : (ಡಿ)</strong></p>.<p>ವಿವರಣೆ: ಬೌದ್ಧ ಧರ್ಮದ ನೀತಿ ಸಂಹಿತೆ: 1. ಹಳದಿ ಬಟ್ಟೆ, 2. ಭಿಕ್ಷಾಪಾತ್ರೆ, 3. ಸೂಜಿ ದಾರ 4. ದಿನಕ್ಕೆ ಒಂದು ಹೊತ್ತು ಊಟ.</p>.<p><strong>22) ‘ಪಬ್ಬಜ್ಜಾ’ ಎಂಬುದು ಏನು?</strong></p>.<p>→ಎ) ಬೌದ್ಧ ಸಂಘದಲ್ಲಿ ತೆಗೆದುಕೊಳ್ಳುವ ಆರಂಭಿಕ ದೀಕ್ಷೆ</p>.<p>→ಬಿ) ಜೈನ ಧರ್ಮದಲ್ಲಿ ಕೈಗೊಳ್ಳುವ ಸಲ್ಲೇಖನ ವ್ರತ</p>.<p>→ಸಿ) ಬೌದ್ಧ ಮಂದಿರದ ಹೆಸರು</p>.<p>→ಡಿ) ಮೇಲಿನ ಯಾವುದೂ ಅಲ್ಲ</p>.<p><strong>ಉತ್ತರ : (ಎ)</strong></p>.<p>ವಿವರಣೆ: ಬುದ್ಧನು ತನ್ನ ಅನುಯಾಯಿಗಳು ಪಬ್ಬಜ್ಜಾ ಮತ್ತು ಉಪಸಂಪದಾ ಉನ್ನತ ದೀಕ್ಷೆಗಳನ್ನು ಕೈಗೊಳ್ಳಬೇಕೆಂದು ಅಪೇಕ್ಷಿಸಿದ್ದನು, ಪಬ್ಬಜ್ಜಾ ಎಂದರೆ ಗೃಹಸ್ಥರು ಭಿಕ್ಷುಗಳ ಸಂಘ ಜೀವನದೊಳಗೆ ಕಾಲಿರಿಸುವ ಆರಂಭಿಕ ಶಿಷ್ಯತ್ವದ ಮಾರ್ಗವಾಗಿದೆ.</p>.<p><em>(ಪ್ರಶ್ನೋತ್ತರ ಸಂಯೋಜನೆ: www.iasjnana.com, 9916399276)</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>