ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಹೋದಲೆಲ್ಲ ಮಂಗಳಸೂತ್ರದ ಬಗ್ಗೆ ಮಾತನಾಡುತ್ತಾರೆ. ಮಂಗಳಸೂತ್ರ ಏನು ಎನ್ನುವುದು ಗೊತ್ತೆ? ಅವರು ಎಂದಾದರೂ ಅದನ್ನು ಧರಿಸಿದ್ದಾರೆಯೇ? ಅದರ ಬೆಲೆ ಅವರಿಗೆ ಹೇಗೆ ಗೊತ್ತಾಗಬೇಕು? ಅವರ ಸಹೋದರ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಉಡಾಳರಂತೆ ಕಣ್ಣು ಹೊಡೆಯುತ್ತಾರೆ. ಅದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೇಸರದಿಂದ ಓಟು ಹಾಕದಿದ್ದರೂ ನಾನು ಸತ್ತಾಗ ಬನ್ನಿ ಎಂದು ನೋವಿನಿಂದ ಹೇಳಿದ್ದಾರೆ
ನಾರಾಯಣ ಭಾಂಡಗೆ, ರಾಜ್ಯಸಭೆ ಸದಸ್ಯ
ಬಿಜೆಪಿಯವರು ಮಹಿಳಾ ವಿರೋಧಿಗಳು. ಮಣಿಪುರದಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದಾಗ, ಹತ್ಯೆಯಾದಾಗ, ಹಾಸನದ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನೊಂದ ಮಹಿಳೆಯ ಪರವಾಗಿ ಧ್ವನಿ ಎತ್ತದ ಅಮಿತ್ ಶಾ ಅವರ ‘ಮಾತೃ ಶಕ್ತಿ’ ಎಲ್ಲಿ ಹೋಯಿತು? ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಬಾಂಬ್ ಸ್ಫೋಟದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ, ಅವರದೇ ಪಕ್ಷದ ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯದಲ್ಲಿ ಒಟ್ಟು ಆರು ಬಾರಿ ಬಾಂಬ್ ಸ್ಫೋಟ ಆಗಿದೆ. ಈ ಬಗ್ಗೆ ಮೋದಿ ಅವರು ಏಕೆ ಬಾಯಿ ಬಿಡುತ್ತಿಲ್ಲ?
ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ