ಪುರಾಣಗಳಲ್ಲಿ ರಾಮಾಂಜನೇಯ ಯುದ್ಧ ನಡೆದ ಕಥೆಗಳಿವೆ. ಆದರೆ, ರಾಮ–ಲಕ್ಷ್ಮಣರ ಮಧ್ಯೆ ಬರಿ ಪ್ರೀತಿಯದೇ ಕಥನ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಂದೆ ಮತ್ತು ನಾನು ರಾಮ–ಲಕ್ಷ್ಮಣರ ರೀತಿ ಊರೂರು ತಿರುಗಿ ಪಕ್ಷ ಕಟ್ಟಿ, ಬೆಳೆಸಿದ್ದೆವು ಎಂದು ಸದಾ ಕನವರಿಸುತ್ತಿದ್ದವರೇ ಈಗ ರಾಮನ ವಿರುದ್ಧ ಪರೋಕ್ಷ ‘ಸಮರ’ ಸಾರಿರುವುದು ದಿನಕ್ಕೊಂದು ‘ರಾಮಾಯಣ’ಕ್ಕೆ ದಾರಿಯಾಗಿದೆಯಂತೆ.