ಭಗವಾನ್ ರಾಮ ನಮ್ಮ ನಂಬಿಕೆಯ ಕೇಂದ್ರ ಎಂದು ನಾವು ಹೇಳಿದ್ದೆವು. ನಮಗೆ ಬಹುಮತ ಬಂದರೆ, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವನ್ನು ನಿರ್ಮಿಸಲಾಗುವುದು ಎಂಬ ಭರವಸೆ ಕೊಟ್ಟಿದ್ದೆವು. ಈಗ ನೀವೆಲ್ಲರೂ ನೋಡಿದ್ದೀರಿ, ರಾಮಮಂದಿರ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ಭಗವಾನ್ ರಾಮನು ಗುಡಿಸಲಿನಿಂದ ಹೊರಬಂದು ಅರಮನೆ ಪ್ರವೇಶಿಸಿದ್ದಾನೆ ಎಂದು ನನಗನಿಸುತ್ತಿದೆ. ದೇಶದಲ್ಲಿ ರಾಮರಾಜ್ಯ ಆರಂಭವಾಗಲಿದೆ ಎಂಬುದು ನನ್ನ ದೃಢವಾದ ನಂಬಿಕೆ