‘ಪ್ರಧಾನಿ ಮೋದಿ ಅವರ ಇಂಥ ದ್ವೇಷದ ಭಾಷಣಕ್ಕೆ ಚುನಾವಣಾ ಆಯೋಗವೂ ತಟಸ್ಥ ಧೋರಣೆ ಅಳವಡಿಸಿಕೊಂಡಿದ್ದು ನಾಚಿಕೆಗೇಡಿನ ಸಂಗತಿ. ಇಂಡಿಯಾ ಒಕ್ಕೂಟವು ಜಾತಿ ಜನಗಣತಿಯ ಭರವಸೆ ನೀಡಿದೆ. ಇದು ಬಹುದಿನಗಳ ಬೇಡಿಕೆಯಾಗಿದ್ದು, ಇದು ಸಮ ಸಮಾಜ ನಿರ್ಮಾಣದ ಪ್ರಯತ್ನವಾಗಿದೆ. ಆದರೆ ಪ್ರಧಾನಿ ಇದನ್ನು ತಿರುಚುವ ಮೂಲಕ, ಸಮಾಜದಲ್ಲಿನ ಕೆಲ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಶಿಕ್ಷಣ, ಉದ್ಯೋಗ ಹಾಗೂ ಅಧಿಕಾರಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ಧಾರೆ’ ಎಂದು ದೂರಿದ್ದಾರೆ.
‘ಸಮಾಜವನ್ನು ಒಡೆದು ಆಳುವ ಬಿಜೆಪಿಯ ತಂತ್ರದ ವಿರುದ್ಧ ನಾವೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಆ ಮೂಲಕ ಮೋದಿ ಅವರ ವೈಫಲ್ಯಗಳನ್ನು ಬಿಚ್ಚಿಡಬೇಕಿದೆ’ ಎಂದು ಸ್ಟಾಲಿನ್ ಇಂಡಿಯಾ ಒಕ್ಕೂಟದ ಸದಸ್ಯರಿಗೆ ಹೇಳಿದ್ದಾರೆ.