ಗುಜರಾತ್ ರಾಜ್ಯದ 26 ಲೋಕಸಭಾ ಕ್ಷೇತ್ರಗಳಲ್ಲಿ ಈ ಸಲವೂ ಗೆಲುವು ಖಚಿತ ಎಂದು ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ಆದರೆ, ರಜಪೂತರು (ಕ್ಷತ್ರಿಯರ) ಮುನಿಸಿಕೊಂಡಿರುವುದು ಪಕ್ಷಕ್ಕೆ ತಲೆಬಿಸಿ ತಂದೊಡ್ಡಿದೆ. ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಕೆಲವೇ ದಿನಗಳು ಉಳಿದಿರುವ ಹೊತ್ತಿನಲ್ಲಿ ಕ್ಷತ್ರಿಯರ ಹೋರಾಟದ ನೆಲೆ ವಿಸ್ತರಿಸುತ್ತಿರುವುದು ಬಿಜೆಪಿ ಪಾಲಿಗೆ ಕೆಟ್ಟ ಸುದ್ದಿ.