<p><strong>ನವದೆಹಲಿ</strong>: ಲೋಕಸಭೆ ಚುನಾವಣೆಯ ಮೊದಲ ಎರಡು ಹಂತಗಳಲ್ಲಿ ಕ್ರಮವಾಗಿ ಶೇ 66.14 ಮತ್ತು ಶೇ 66.71ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗವು ಮಂಗಳವಾರ ಪ್ರಕಟಿಸಿದೆ.</p>.<p>ಮೊದಲಹಂತದ ಮತದಾನ ಪ್ರಕ್ರಿಯೆಯು ಪೂರ್ಣಗೊಂಡ 11 ದಿನಗಳ ನಂತರ, ಅಂತಿಮ ಶೇಕಡಾವಾರು ವಿವರ ಪ್ರಕಟಿಸಿರುವ ಆಯೋಗದ ನಡೆಯನ್ನು ವಿರೋಧಪಕ್ಷಗಳು ಪ್ರಶ್ನಿಸಿವೆ.</p>.<p>ಮತದಾನದ ಅಂತಿಮ ಪ್ರಮಾಣ ಹಂಚಿಕೊಡಿರುವ ಆಯೋಗವು, ಮೊದಲ ಹಂತದಲ್ಲಿ ಶೇ 66.22ರಷ್ಟು ಪುರುಷರು, 66.07ರಷ್ಟು ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಹಕ್ಕು ಚಲಾಯಿಸಿರುವ ಲಿಂಗತ್ವ ಅಲ್ಪಸಂಖ್ಯಾತರ ಪ್ರಮಾಣ ಶೇ 31.22ರಷ್ಟು ಎಂದು ತಿಳಿಸಿದೆ.</p>.<p>ಏ.26ರಂದು ನಡೆದಿದ್ದ ಎರಡನೇ ಹಂತದ ಮತದಾನದಲ್ಲಿ ಶೇ 66.99ರಷ್ಟು ಪುರುಷರು, ಶೇ 66.42ರಷ್ಟು ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರ ಪ್ರಮಾಣಶೇ 23.86ರಷ್ಟು ಎಂದು ವಿವರಿಸಿದೆ. </p>.<p>ವಿರೋಧಪಕ್ಷಗಳ ಪ್ರಶ್ನೆ: ವಿಳಂಬವಾಗಿ ಮತದಾನದ ಪ್ರಮಾಣವನ್ನು ಪ್ರಕಟಿಸಿರುವ ಆಯೋಗದ ನಡೆಯನ್ನು ಕಾಂಗ್ರೆಸ್, ಸಿಪಿಎಂ, ಟಿಎಂಸಿ ಪ್ರಶ್ನಿಸಿದೆ.</p>.<p>ಸಕಾಲದಲ್ಲಿ ಹಾಗೂ ಪಾರದರ್ಶಕವಾದ ಕ್ರಮದಲ್ಲಿ ಅಂಕಿ ಅಂಶ ಪ್ರಕಟಿಸುವುದು ಅಗತ್ಯ. ಇದೇ ಮೊದಲ ಬಾರಿಗೆ 11 ದಿನ ತಡವಾಗಿ ವಿವರ ಪ್ರಕಟಿಸಲಾಗಿದೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಆಕ್ಷೇಪಿಸಿದ್ದಾರೆ.</p>.<p>ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರಯಾನ್ ಅವರು, ‘ತಮ್ಮದೇ ಅಂಪೈರ್ ಅನ್ನು ನೇಮಿಸಿಕೊಳ್ಳಲು ಹಾಗೂ ಆಯೋಗವನ್ನು ನಾಶಪಡಿಸಲು ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿಯೇ ಕಾಯ್ದೆಯನ್ನೇ ಬದಲಿಸಿಕೊಂಡರು’ ಎಂದು ಟೀಕಿಸಿದ್ದಾರೆ. </p>.<p>‘ಪ್ರತಿ ಹಂತದ ಮತದಾನ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಸುದ್ದಿಗೋಷ್ಠಿಯನ್ನು ನಡೆಸಿ ವಿವರಗಳನ್ನು ಪ್ರಕಟಿಸುವ ಕ್ರಮವನ್ನು ಏಕೆ ಪಾಲಿಸುತ್ತಿಲ್ಲ’ ಎಂದೂ ಪ್ರಶ್ನಿಸಿದ್ದಾರೆ.</p>.<p>ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ‘ಇದು ಬೇಸರ ಮೂಡಿಸುವ ಬೆಳವಣಿಗೆ, ಚುನಾವಣೆ ಫಲಿತಾಂಶಗಳನ್ನು ತಿರುಚಲಾಗುತ್ತಿದೆ ಎಂಬ ಬಗ್ಗೆ ಗಂಭೀರವಾದ ಅನುಮಾನಗಳನ್ನು ಇದು ಹುಟ್ಟಿಹಾಕಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಲೋಕಸಭೆ ಚುನಾವಣೆಯ ಮೊದಲ ಎರಡು ಹಂತಗಳಲ್ಲಿ ಕ್ರಮವಾಗಿ ಶೇ 66.14 ಮತ್ತು ಶೇ 66.71ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗವು ಮಂಗಳವಾರ ಪ್ರಕಟಿಸಿದೆ.</p>.<p>ಮೊದಲಹಂತದ ಮತದಾನ ಪ್ರಕ್ರಿಯೆಯು ಪೂರ್ಣಗೊಂಡ 11 ದಿನಗಳ ನಂತರ, ಅಂತಿಮ ಶೇಕಡಾವಾರು ವಿವರ ಪ್ರಕಟಿಸಿರುವ ಆಯೋಗದ ನಡೆಯನ್ನು ವಿರೋಧಪಕ್ಷಗಳು ಪ್ರಶ್ನಿಸಿವೆ.</p>.<p>ಮತದಾನದ ಅಂತಿಮ ಪ್ರಮಾಣ ಹಂಚಿಕೊಡಿರುವ ಆಯೋಗವು, ಮೊದಲ ಹಂತದಲ್ಲಿ ಶೇ 66.22ರಷ್ಟು ಪುರುಷರು, 66.07ರಷ್ಟು ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಹಕ್ಕು ಚಲಾಯಿಸಿರುವ ಲಿಂಗತ್ವ ಅಲ್ಪಸಂಖ್ಯಾತರ ಪ್ರಮಾಣ ಶೇ 31.22ರಷ್ಟು ಎಂದು ತಿಳಿಸಿದೆ.</p>.<p>ಏ.26ರಂದು ನಡೆದಿದ್ದ ಎರಡನೇ ಹಂತದ ಮತದಾನದಲ್ಲಿ ಶೇ 66.99ರಷ್ಟು ಪುರುಷರು, ಶೇ 66.42ರಷ್ಟು ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರ ಪ್ರಮಾಣಶೇ 23.86ರಷ್ಟು ಎಂದು ವಿವರಿಸಿದೆ. </p>.<p>ವಿರೋಧಪಕ್ಷಗಳ ಪ್ರಶ್ನೆ: ವಿಳಂಬವಾಗಿ ಮತದಾನದ ಪ್ರಮಾಣವನ್ನು ಪ್ರಕಟಿಸಿರುವ ಆಯೋಗದ ನಡೆಯನ್ನು ಕಾಂಗ್ರೆಸ್, ಸಿಪಿಎಂ, ಟಿಎಂಸಿ ಪ್ರಶ್ನಿಸಿದೆ.</p>.<p>ಸಕಾಲದಲ್ಲಿ ಹಾಗೂ ಪಾರದರ್ಶಕವಾದ ಕ್ರಮದಲ್ಲಿ ಅಂಕಿ ಅಂಶ ಪ್ರಕಟಿಸುವುದು ಅಗತ್ಯ. ಇದೇ ಮೊದಲ ಬಾರಿಗೆ 11 ದಿನ ತಡವಾಗಿ ವಿವರ ಪ್ರಕಟಿಸಲಾಗಿದೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಆಕ್ಷೇಪಿಸಿದ್ದಾರೆ.</p>.<p>ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರಯಾನ್ ಅವರು, ‘ತಮ್ಮದೇ ಅಂಪೈರ್ ಅನ್ನು ನೇಮಿಸಿಕೊಳ್ಳಲು ಹಾಗೂ ಆಯೋಗವನ್ನು ನಾಶಪಡಿಸಲು ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿಯೇ ಕಾಯ್ದೆಯನ್ನೇ ಬದಲಿಸಿಕೊಂಡರು’ ಎಂದು ಟೀಕಿಸಿದ್ದಾರೆ. </p>.<p>‘ಪ್ರತಿ ಹಂತದ ಮತದಾನ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಸುದ್ದಿಗೋಷ್ಠಿಯನ್ನು ನಡೆಸಿ ವಿವರಗಳನ್ನು ಪ್ರಕಟಿಸುವ ಕ್ರಮವನ್ನು ಏಕೆ ಪಾಲಿಸುತ್ತಿಲ್ಲ’ ಎಂದೂ ಪ್ರಶ್ನಿಸಿದ್ದಾರೆ.</p>.<p>ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ‘ಇದು ಬೇಸರ ಮೂಡಿಸುವ ಬೆಳವಣಿಗೆ, ಚುನಾವಣೆ ಫಲಿತಾಂಶಗಳನ್ನು ತಿರುಚಲಾಗುತ್ತಿದೆ ಎಂಬ ಬಗ್ಗೆ ಗಂಭೀರವಾದ ಅನುಮಾನಗಳನ್ನು ಇದು ಹುಟ್ಟಿಹಾಕಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>