ನವದೆಹಲಿ: ನಾವು ಎನ್ಡಿಎಯಲ್ಲೇ ಇದ್ದೇವೆ, ಎನ್ಡಿಎನಲ್ಲೇ ಉಳಿಯುತ್ತೇವೆ ಎಂದು ಜೆಡಿಯು ನಾಯಕ ಕೆ. ಸಿ. ತ್ಯಾಗಿ ಹೇಳಿದ್ದಾರೆ.
ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮುಂದಿನ ನಡೆಯ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದ ಕೆ. ಸಿ. ತ್ಯಾಗಿ ನಾವು ನ್ಡಿಎಯಲ್ಲೇ ಇದ್ದೇವೆ, ಎನ್ಡಿಎನಲ್ಲೇ ಉಳಿಯುತ್ತೇವೆ ಎಂದು ಹೇಳಿದರು.
ನೀವು ಮತ್ತೆ ಇಂಡಿಯಾ ಬಣಕ್ಕೆ ಹೋಗುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ ನಾವು ಎನ್ಡಿಎನಲ್ಲಿ ಇರುವುದು ನಮ್ಮ ಅಂತಿಮ ನಿರ್ಧಾರ ಎಂದು ಅವರು ಹೇಳಿದರು.
ಇತ್ತೀಚಿನ ವರದಿಗಳ ಪ್ರಕಾರ ಎನ್ಡಿಎ 296, ಇಂಡಿಯಾ 232 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.