‘ಕೆಲವರ ಪಿತೂರಿಯಿಂದಾಗಿ ನಮ್ಮ ಕುಟುಂಬ ಕಣ್ಣೀರು ಹಾಕುವಂತಾಯಿತು. ರಾಜಕೀಯವಾಗಿ ನಮ್ಮ ಕುಟುಂಬವನ್ನು ತುಳಿಯಲು ಹುನ್ನಾರ ನಡೆದಿದೆ. ವಯಸ್ಸಾಗಿರುವ ಕಾರಣ ಮಗನಿಗೆ ಟಿಕೆಟ್ ಕೊಡುವಂತೆ ತಂದೆಯವರು ಪಕ್ಷದ ವರಿಷ್ಠರನ್ನು ಕೋರಿದ್ದರು. ಆದರೆ, ಯಾವುದನ್ನೂ ಲೆಕ್ಕಿಸದೆ, ಜನರ ನಾಡಿಮಿಡಿತ ಗೊತ್ತಿಲ್ಲದಿರುವವರಿಗೆ ಟಿಕೆಟ್ ನೀಡಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.