ತೀರ್ಥಹಳ್ಳಿಯಿಂದ ಗೃಹ ಸಚಿವ ಆರಗ ಜ್ಞಾನೇಂದ್ರ, ಸಾಗರ, ಸೊರಬ ಹಾಗೂ ಶಿವಮೊಗ್ಗ ಗ್ರಾಮೀಣದಿಂದ ಹಾಲಿ ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಅಶೋಕ ನಾಯ್ಕ ಹಾಗೂ ಭದ್ರಾವತಿಯಲ್ಲಿ ಹೊಸ ಮುಖ ಮಂಗೋಟಿ ರುದ್ರೇಶ್ ಅವರಿಗೆ ಮಣೆ ಹಾಕಿದೆ. ಅಲ್ಲಿ ಪ್ರಬಲ ಆಕಾಂಕ್ಷಿಗಳಾಗಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಸ್.ಕುಮಾರ್ ಹಾಗೂ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರನ್ನು ನಿರಾಶೆಗೊಳಿಸಿದೆ. ಶಿವಮೊಗ್ಗ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಮಂಗೋಟಿ ಗ್ರಾಮದ ರುದ್ರೇಶ್ ಮೊದಲು ಜೆಡಿಎಸ್ನಲ್ಲಿದ್ದರು. ಈಗ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ.