ಎಲ್ಲ ಸ್ಥಾನಮಾನ ನೀಡಿದ್ದರೂ ಶೆಟ್ಟರ್ ಪಕ್ಷಕ್ಕೆ ದ್ರೋಹ ಮಾಡಿದರು ಎಂದು ಪ್ರಚಾರ ಮಾಡಿತು. ಸಮುದಾಯದ ಮತಗಳು ಹೊರಹೋಗದಂತೆ ತಡೆಯಲು ಬಿ.ಎಸ್.ಯಡಿಯೂರಪ್ಪ ಅವರಿಂದ ಸಭೆ ನಡೆಸಿದ್ದು ಫಲ ನೀಡಿತು. ಅಮಿತ್ ಶಾ, ಬಿ.ಎಸ್. ಯಡಿಯೂರಪ್ಪ, ಪ್ರಲ್ಹಾದ ಜೋಶಿ ಸೇರಿದಂತೆ ರಾಜ್ಯ, ರಾಷ್ಟ್ರನಾಯಕರು ಪ್ರಚಾರ ಮಾಡಿದ್ದು ಹಾಗೂ ಪ್ರಧಾನಿ ಮೋದಿ ಅವರ ಪ್ರಭಾವಳಿ ಕೂಡ ನೆರವಾಯಿತು.