ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕೋಲಾರ: ರಾಜಕೀಯ ವೈಮನಸ್ಯ ಮತ್ತೆ ಸ್ಫೋಟ!

16 ವರ್ಷಗಳಿಂದ ರಮೇಶ್‌ ಕುಮಾರ್‌–ಕೆ.ಎಚ್‌.ಮುನಿಯಪ್ಪ ನಡುವೆ ಶೀತಲ ಸಮರ
Published : 28 ಮಾರ್ಚ್ 2024, 6:41 IST
Last Updated : 28 ಮಾರ್ಚ್ 2024, 6:41 IST
ಫಾಲೋ ಮಾಡಿ
Comments
ಕೆ.ಎಚ್‌.ಮುನಿಯಪ್ಪ
ಕೆ.ಎಚ್‌.ಮುನಿಯಪ್ಪ
2008ರಲ್ಲಿ ರಮೇಶ್‌ ಕುಮಾರ‌ ಸೋತ ಬಳಿಕ ಉಭಯರ ನಡುವೆ ಒಳಜಗಳ ಕೆ.ಸಿ.ವ್ಯಾಲಿ ಯೋಜನೆ ರೂವಾರಿ ಯಾರೆಂದು ‘ಕ್ರೆಡಿಟ್‌ ವಾರ್’ 2019ರಲ್ಲಿ ಕೆ.ಎಚ್‌.ಮುನಿಯಪ್ಪ ಸೋಲಿಗೆ ಸಂಚು ಆರೋಪ
ಕೆ.ಎಚ್‌.ಮುನಿಯಪ್ಪ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್‌ ಕೋರಿದ್ದೆವು. ಬ್ಲ್ಯಾಕ್‌ಮೇಲ್‌ ಮಾಡುತ್ತಿಲ್ಲ. ಅಭಿಪ್ರಾಯಕ್ಕೆ ವಿರುದ್ಧವಾಗಿ ಟಿಕೆಟ್‌ ನೀಡುತ್ತಿರುವುದು ಬೇಸರ ತಂದಿದೆ
ಕೆ.ವೈ.ನಂಜೇಗೌಡ ಮಾಲೂರು ಶಾಸಕ
ನಾನು ಮಂತ್ರಿಯಾಗಿದ್ದಾಗ ಕೆ.ಎಚ್‌.ಮುನಿಯಪ್ಪ ಪುಟ್ಗೋಸಿ ಬ್ಯಾಗ್‌ ಹಿಡಿದು ನನ್ನ ಹಿಂದೆ ಬರುತ್ತಿದ್ದರು. ಈಗ ಏಕೆ ಮರೆತಿದ್ದಾರೆ ಕೇಳಿ. ಅವರಿಗೆ ಮೊದಲು ಟಿಕೆಟ್‌ ಕೊಡಿಸಿದ್ದು ನಾನೇ
ನಸೀರ್‌ ಅಹ್ಮದ್‌ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ
ಇಬ್ಬರ ಕಿತ್ತಾಟ; ಮೂರನೇಯವರಿಗೆ ಲಾಭ?
ಇಬ್ಬರ ಕಿತ್ತಾಟದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ಬಣಗಳ ಜಗಳ ಈಗ ಉಭಯರಿಗೂ ಕುತ್ತು ತರುವ ಸಾಧ್ಯತೆ ಇದೆ. ಏಕೆಂದರೆ ಕೆ.ಜಿ.ಚಿಕ್ಕಪೆದ್ದಣ್ಣ (ಕೆ.ಎಚ್‌.ಮುನಿಯಪ್ಪ ಅಳಿಯ) ಹಾಗೂ ಸಿ.ಎಂ.ಮುನಿಯಪ್ಪ (ರಮೇಶ್‌ ಕುಮಾರ್‌ ಬಣ) ಯಾರಿಗೆ ಟಿಕೆಟ್‌ ಕೊಟ್ಟರೂ ಮತ್ತೊಂದು ಬಣದ ಅಸಮಾಧಾನಕ್ಕೆ ಕಾರಣವಾಗಲಿದೆ. ಹೀಗಾಗಿ ರಾಜ್ಯಸಭೆ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಅವರನ್ನು ಈಗಾಗಲೇ ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಯಾರೀ ಸಿ.ಎಂ.ಮುನಿಯಪ್ಪ?
ಸಿ.ಎಂ.ಮುನಿಯಪ್ಪ ಕೋಲಾರದಲ್ಲಿ ನಾಲ್ಕು ದಶಕಗಳಿಂದ ದಲಿತ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರ ಹೋರಾಟ ಗುರುತಿಸಿ ಈಚೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿ ಕೂಡ ನೀಡಿತ್ತು. ‘ಸಂಚಿಕೆ’  ಪತ್ರಿಕೆ ಸಂಪಾದಕ ಕೂಡ. ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಮುಖಂಡ. ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲದ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್‌ ಪರ ಪ್ರಚಾರ ನಡೆಸಿದ್ದರು. ಅವರಿಗೆ ಕೋಲಾರ ಟಿಕೆಟ್‌ ಕೊಡಿಸಲು ಕೆ.ಆರ್‌.ರಮೇಶ್‌ ಕುಮಾರ್ ಬಣ ಲಾಬಿ ನಡೆಸಿದೆ.
ಹಿರಿಯ ಉಪನೋಂದಣಾಧಿಕಾರಿ ಚಿಕ್ಕಪೆದ್ದಣ್ಣ
ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಸೇರಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೋಡಿಗಲ್‌ ಗ್ರಾಮದ ಕೆ.ಜಿ.ಚಿಕ್ಕಪೆದ್ದಣ್ಣ ಕಂದಾಯ ಇಲಾಖೆಯ ಉದ್ಯೋಗಿ. ಕೆ.ಆರ್‌.ಪುರಂನಲ್ಲಿ ಹಿರಿಯ ಉಪನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುನಿಯಪ್ಪ ಅವರ ಪುತ್ರಿ ನಂದಿನಿ ಅವರನ್ನು ವಿವಾಹವಾಗಿದ್ದಾರೆ. ಮಾವನ ಜೊತೆ ರಾಜಕೀಯ ಒಡನಾಟ ಇಟ್ಟುಕೊಂಡಿರುವ ಅವರು ಕೋಲಾರ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಟಿಕೆಟ್‌ ಅರ್ಜಿ ಸಲ್ಲಿಸಿ ಪ್ರಯತ್ನ ನಡೆಸಿದ್ದಾರೆ.
ಗೋ ಬ್ಯಾಕ್‌ ಅಭಿಯಾನ
ಕೋಲಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗೋಬ್ಯಾಕ್‌ ಅಭಿಯಾನ ಶುರುವಾಗಿದೆ. ‘ಪೆದ್ದಣ್ಣ ನಿಕಿ ಸೀಟು ವದ್ದನ್ನ’ ‘ಗೋ ಬ್ಯಾಕ್‌ ಕೆ.ಎಚ್‌.ಮುನಿಯಪ್ಪ ಅಂಡ್‌ ‌ಫ್ಯಾಮಿಲಿ’ ಎಂದು ಫೇಸ್‌ಬುಕ್ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ. ‘ಎಡಗೈಗೆ ಟಿಕೆಟ್‌ ನೀಡಿ ಸಾಮಾಜಿಕ ನ್ಯಾಯ ಕಲ್ಪಿಸಿ’ ಎಂದು ಚಿಕ್ಕಪೆದ್ದಣ್ಣ ಪರವಾಗಿಯೂ ಪೋಸ್ಟ್‌ಗಳು ಕಾಣಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT