ಬಿಜೆಪಿ–ಜೆಡಿಎಸ್ ಮಧ್ಯೆ ಮೈತ್ರಿಯಾಗಿದ್ದರೂ, ಜೆಡಿಎಸ್ ಎರಡನೇ ಹಂತದಲ್ಲಿ ಮತದಾನ ನಡೆಯುವ ಯಾವ ಕ್ಷೇತ್ರದಲ್ಲೂ ಸ್ಪರ್ಧಿಸಿಲ್ಲ. ಹಾಗಾಗಿ, ಎಲ್ಲ 14 ಕ್ಷೇತ್ರಗಳಲ್ಲೂ ಕಾಂಗ್ರೆಸ್–ಬಿಜೆಪಿ ಅಭ್ಯರ್ಥಿಗಳು ಸೆಣಸಲಿದ್ದಾರೆ. ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ (ಬಿಜೆಪಿ), ರಾಯಚೂರಿನಲ್ಲಿ ಬಿ.ವಿ. ನಾಯಕ (ಬಿಜೆಪಿ) ದಾವಣಗೆರೆಯಲ್ಲಿ ವಿನಯ್ಕುಮಾರ್ (ಕಾಂಗ್ರೆಸ್) ಬಂಡಾಯ ಅಭ್ಯರ್ಥಿಗಳಾಗಿ, ಧಾರವಾಡದಲ್ಲಿ ದಿಂಗಾಲೇಶ್ವರ ಶ್ರೀ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ.