<blockquote>ರಾಜೀವ್ ಪ್ರತಾಪ್ ರೂಡಿ: ಬಿಜೆಪಿ</blockquote>.<p>ಬಿಹಾರದ ಸಾರಣ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಕೇಂದ್ರದ ಮಾಜಿ ಸಚಿವ, ಹಿರಿಯ ಮುಖಂಡ ರಾಜೀವ್ ಪ್ರತಾಪ್ ರೂಡಿ ಅವರನ್ನು ಮತ್ತೆ ಕಣಕ್ಕಿಳಿಸಿದೆ.</p><p> 2014 ಮತ್ತು 2019ರಲ್ಲಿ ಇಲ್ಲಿಂದ ಜಯಿಸಿದ್ದ ಅವರು ‘ಹ್ಯಾಟ್ರಿಕ್’ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ರಾಜಕೀಯ ಅನುಭವ ಮತ್ತು ಕ್ಷೇತ್ರದಲ್ಲಿ ಹೊಂದಿರುವ ಪ್ರಭಾವದಿಂದ ರೂಡಿ ಮತ್ತೊಮ್ಮೆ ಗೆಲ್ಲಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.</p><p> ಕಳೆದ ಚುನಾವಣೆಯಲ್ಲಿ ಅವರು ಆರ್ಜೆಡಿಯ ಚಂದ್ರಿಕಾ ರಾಯ್ ವಿರುದ್ಧ 1,38,429 ಮತಗಳ ಅಂತರದಿಂದ ಗೆದ್ದಿದ್ದರು. 2014ರಲ್ಲಿ ಲಾಲು ಪ್ರಸಾದ್ ಪತ್ನಿ, ರಾಬ್ಡಿ ದೇವಿ ಅವರನ್ನು ಮಣಿಸಿದ್ದ ರೂಡಿ ಇದೀಗ ಮತ್ತೆ ಲಾಲು ಕುಟುಂಬದ ಸವಾಲು ಎದುರಿಸುತ್ತಿದ್ದಾರೆ.</p><p>ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಕೌಶಲಾಭಿವೃದ್ದಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು.</p>.<blockquote>ರೋಹಿಣಿ ಆಚಾರ್ಯ: ಆರ್ಜೆಡಿ</blockquote>.<p>ಸಾರಣ್ ಕ್ಷೇತ್ರದಿಂದ ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಯಾಗಿ ಆರ್ಜೆಡಿಯ ರೋಹಿಣಿ ಆಚಾರ್ಯ ಅಖಾಡಕ್ಕಿಳಿದಿದ್ದಾರೆ.</p><p> ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಕಿರಿಯ ಪುತ್ರಿಯಾಗಿರುವ ರೋಹಿಣಿ ಅವರು ಸಿಂಗಪುರದಲ್ಲಿ ನೆಲೆಸಿರುವರಾದರೂ, ಚುನಾವಣೆಯಲ್ಲಿ ಸ್ಪರ್ಧಿಸಲು ತವರಿಗೆ ಬಂದಿದ್ದಾರೆ.</p><p> ಲಾಲು ಪ್ರಸಾದ್ ಅವರು 1977ರಲ್ಲಿ ಮೊದಲ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅದೇ ಕ್ಷೇತ್ರದಿಂದ ರೋಹಿಣಿ ಕೂಡಾ ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಆಗ ಸಾರಣ್ ಲೋಕಸಭಾ ಕ್ಷೇತ್ರಕ್ಕೆ ಛಪ್ರಾ ಎಂಬ ಹೆಸರಿತ್ತು.</p><p>2009ರ ಕ್ಷೇತ್ರ ಮರುವಿಂಗಡಣೆ ಬಳಿಕ ಸಾರಣ್ ಎಂಬ ಹೆಸರು ಪಡೆದುಕೊಂಡಿತು. ರೋಹಿಣಿ ಅವರು 2022ರಲ್ಲಿ ತಮ್ಮ ಒಂದು ಕಿಡ್ನಿಯನ್ನು ತಂದೆಗೆ ದಾನವಾಗಿ ನೀಡಿದ್ದರು. ಲಾಲು ಅವರು ಮಗಳಿಗೆ ಟಿಕೆಟ್ ನೀಡಿ ‘ಕುಟುಂಬ ರಾಜಕಾರಣ’ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ರಾಜೀವ್ ಪ್ರತಾಪ್ ರೂಡಿ: ಬಿಜೆಪಿ</blockquote>.<p>ಬಿಹಾರದ ಸಾರಣ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಕೇಂದ್ರದ ಮಾಜಿ ಸಚಿವ, ಹಿರಿಯ ಮುಖಂಡ ರಾಜೀವ್ ಪ್ರತಾಪ್ ರೂಡಿ ಅವರನ್ನು ಮತ್ತೆ ಕಣಕ್ಕಿಳಿಸಿದೆ.</p><p> 2014 ಮತ್ತು 2019ರಲ್ಲಿ ಇಲ್ಲಿಂದ ಜಯಿಸಿದ್ದ ಅವರು ‘ಹ್ಯಾಟ್ರಿಕ್’ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ರಾಜಕೀಯ ಅನುಭವ ಮತ್ತು ಕ್ಷೇತ್ರದಲ್ಲಿ ಹೊಂದಿರುವ ಪ್ರಭಾವದಿಂದ ರೂಡಿ ಮತ್ತೊಮ್ಮೆ ಗೆಲ್ಲಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.</p><p> ಕಳೆದ ಚುನಾವಣೆಯಲ್ಲಿ ಅವರು ಆರ್ಜೆಡಿಯ ಚಂದ್ರಿಕಾ ರಾಯ್ ವಿರುದ್ಧ 1,38,429 ಮತಗಳ ಅಂತರದಿಂದ ಗೆದ್ದಿದ್ದರು. 2014ರಲ್ಲಿ ಲಾಲು ಪ್ರಸಾದ್ ಪತ್ನಿ, ರಾಬ್ಡಿ ದೇವಿ ಅವರನ್ನು ಮಣಿಸಿದ್ದ ರೂಡಿ ಇದೀಗ ಮತ್ತೆ ಲಾಲು ಕುಟುಂಬದ ಸವಾಲು ಎದುರಿಸುತ್ತಿದ್ದಾರೆ.</p><p>ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಕೌಶಲಾಭಿವೃದ್ದಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು.</p>.<blockquote>ರೋಹಿಣಿ ಆಚಾರ್ಯ: ಆರ್ಜೆಡಿ</blockquote>.<p>ಸಾರಣ್ ಕ್ಷೇತ್ರದಿಂದ ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಯಾಗಿ ಆರ್ಜೆಡಿಯ ರೋಹಿಣಿ ಆಚಾರ್ಯ ಅಖಾಡಕ್ಕಿಳಿದಿದ್ದಾರೆ.</p><p> ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಕಿರಿಯ ಪುತ್ರಿಯಾಗಿರುವ ರೋಹಿಣಿ ಅವರು ಸಿಂಗಪುರದಲ್ಲಿ ನೆಲೆಸಿರುವರಾದರೂ, ಚುನಾವಣೆಯಲ್ಲಿ ಸ್ಪರ್ಧಿಸಲು ತವರಿಗೆ ಬಂದಿದ್ದಾರೆ.</p><p> ಲಾಲು ಪ್ರಸಾದ್ ಅವರು 1977ರಲ್ಲಿ ಮೊದಲ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅದೇ ಕ್ಷೇತ್ರದಿಂದ ರೋಹಿಣಿ ಕೂಡಾ ಚುನಾವಣಾ ರಾಜಕೀಯಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಆಗ ಸಾರಣ್ ಲೋಕಸಭಾ ಕ್ಷೇತ್ರಕ್ಕೆ ಛಪ್ರಾ ಎಂಬ ಹೆಸರಿತ್ತು.</p><p>2009ರ ಕ್ಷೇತ್ರ ಮರುವಿಂಗಡಣೆ ಬಳಿಕ ಸಾರಣ್ ಎಂಬ ಹೆಸರು ಪಡೆದುಕೊಂಡಿತು. ರೋಹಿಣಿ ಅವರು 2022ರಲ್ಲಿ ತಮ್ಮ ಒಂದು ಕಿಡ್ನಿಯನ್ನು ತಂದೆಗೆ ದಾನವಾಗಿ ನೀಡಿದ್ದರು. ಲಾಲು ಅವರು ಮಗಳಿಗೆ ಟಿಕೆಟ್ ನೀಡಿ ‘ಕುಟುಂಬ ರಾಜಕಾರಣ’ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>