ಈ ವೇಳೆ ಚಿರಂಜೀವಿ ಹಾಗೂ ಅವರ ಕುಟುಂಬದ ಅನೇಕರು ಪವನ್ ಕಲ್ಯಾಣ್ ಅವರಿಗೆ ಹೂಮಳೆ ಸುರಿಸಿ, ಆರತಿ ಎತ್ತಿ ಭರ್ಜರಿ ಸ್ವಾಗತ ಕೋರಿದ್ದಾರೆ. ಸಹೋದರ ಹಾಗೂ ತಾಯಿಯ ಕಾಲಿಗೆರಗಿ ನಮಸ್ಕರಿಸಿದ ಪವನ್, ಕೆಲಹೊತ್ತು ಕುಟುಂಬದವರ ಜೊತೆ ಆತ್ಮೀಯವಾಗಿ ಕಾಲಕಳೆದರು.
ಈ ವೇಳೆ ಪವನ್ ಕಲ್ಯಾಣ ಅವರ ಪತ್ನಿ ರಷ್ಯಾ ಮೂಲದ ಅನ್ನಾ ಲೆಜ್ನೇವಾ ಅವರೂ ಹಾಜರಿದ್ದರು. ನಟ ರಾಮಚರಣ್, ಸಾಯಿ ಧರ್ಮತೇಜ ಸೇರಿದಂತೆ ಕೋನಿಡೇಲಾ ಕುಟುಂಬದ ಹಲವರು ಪವನ್ ಕಲ್ಯಾಣ್ ಅವರ ಸಾಧನೆಯನ್ನು ಸಂಭ್ರಮಿಸಿದರು.
ಈ ಕುರಿತ ವಿಡಿಯೊವನ್ನು ಚಿರಂಜೀವಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ರಿಯಲ್ ಸ್ಟಾರ್ಗೆ ಒಂದು ಭಾವನಾತ್ಮಕ ಸ್ವಾಗತ ನಮ್ಮಿಂದ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ 133, ಜನಸೇನಾ 21, ಬಿಜೆಪಿ 8 ಸ್ಥಾನಗಳನ್ನು ಗಳಿಸಿ ಮಿಂಚಿದರೆ ಆಡಳಿತಾರೂಢ ವೈಎಸ್ಆರ್ಸಿಪಿ 11 ಸೀಟುಗಳನ್ನು ಗೆಲ್ಲುವ ಮೂಲಕ ಹೀನಾಯ ಸೋಲುಂಡಿದೆ.