<p><strong>ಮುಂಬೈ: </strong>ಸಣ್ಣ ಪಟ್ಟಣಗಳ ಕಥೆಗಳನ್ನು ಆಧರಿಸಿರುವ ಸಿನಿಮಾಗಳು ಈಗಿನ ಸಂದರ್ಭದಲ್ಲಿ ಹೆಚ್ಚು ಜನಪ್ರಿಯ ಆಗುತ್ತಿವೆ ಎಂದು ನಟ ಜಿತೇಂದ್ರ ಕುಮಾರ್ ಹೇಳುತ್ತಾರೆ. ಇಂತಹ ಕಥೆಗಳು ವೀಕ್ಷಕರಿಂದ ಒಳ್ಳೆಯ ಸ್ಪಂದನ ಪಡೆಯುತ್ತವೆ ಎನ್ನುವುದು ಜಿತೇಂದ್ರ ಅವರ ಮಾತು.</p>.<p>‘ಶುಭ್ ಮಂಗಲ್ ಜ್ಯಾದಾ ಸಾವಧಾನ್’ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಜೊತೆ ಅಭಿನಯಿಸಿದ ಜಿತೇಂದ್ರ ಅವರು ನಂತರ ಅಮೆಜಾನ್ ಪ್ರೈಮ್ನ ‘ಪಂಚಾಯತ್’ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಈಗ ಅವರು ನೆಟ್ಫ್ಲಿಕ್ಸ್ ಸಿನಿಮಾ ‘ಚಮನ್ ಬಹಾರ್’ನಲ್ಲಿ ನಟಿಸಿದ್ದಾರೆ.</p>.<p>‘ಪಾತ್ರಗಳನ್ನು ನಿಭಾಯಿಸುವಾಗ ಕಲಾವಿದನಾಗಿ ನನ್ನ ಮೊದಲ ಆದ್ಯತೆಯು, ಆ ಪಾತ್ರಗಳು ವಾಸ್ತವಕ್ಕೆ ಹತ್ತಿರವಾಗಿ ಇರುವಂತೆ ನೋಡಿಕೊಳ್ಳುವುದಾಗಿರುತ್ತದೆ. ಶೂಟಿಂಗ್ಗೆ ತೆರಳುವ ಮೊದಲು, ನನಗೆ ನೀಡಿರುವ ಪಾತ್ರವನ್ನು ಅಭಿನಯಿಸಲು ಅಗತ್ಯ ಸಿದ್ಧತೆಗಳನ್ನು ನಡೆಸುತ್ತೇನೆ. ಅದಕ್ಕಾಗಿ ಬಹಳಷ್ಟು ಸಮಯ ಮೀಸಲಿಡುತ್ತೇನೆ’ ಎಂದು ಅವರು ಹೇಳಿದ್ದಾರೆ.</p>.<p>‘ಚಮನ್ ಬಹಾರ್’ ಚಿತ್ರವು ಬಿಲ್ಲು ಎನ್ನುವ ಪಾನ್ ಅಂಗಡಿ ಮಾಲೀಕನ ಕಥೆ. ಇದನ್ನು ವಾಸ್ತವಕ್ಕೆ ಹತ್ತಿರವಾಗಿ ಇರುವಂತೆ ರೂಪಿಸಲಾಗಿದೆ. ಇದರಲ್ಲಿ ಬಿಲ್ಲು, ಒಬ್ಬಳು ಹುಡುಗಿಯೆಡೆಗೆ ಆಕರ್ಷಿತನಾಗಿರುತ್ತಾನೆ. ಆದರೆ, ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳುವುದಿರಲಿ, ಆಕೆಯ ಜೊತೆ ಮಾತು ಆರಂಭಿಸಲು ಕೂಡ ಅವನಿಗೆ ಸಾಧ್ಯವಾಗಿರುವುದಿಲ್ಲ.</p>.<p>‘ಸಣ್ಣ ಪಟ್ಟಣಗಳಿಗೆ ಸಂಬಂಧಿಸಿದ ಕಥೆಗಳನ್ನು ವೀಕ್ಷಕರು ಹೆಚ್ಚು ತೀವ್ರವಾಗಿ ತಮ್ಮದಾಗಿಸಿಕೊಳ್ಳುತ್ತಾರೆ. ಅಂತಹ ಕಥೆಗಳಲ್ಲಿ ನಾವು ಪಾತ್ರ ನಿಭಾಯಿಸಿದಾಗ ಭಿನ್ನ ಸಂಸ್ಕೃತಿಗಳ ನಡುವೆ ಸೇತುವೆಯಂತೆ ಕೆಲಸ ಮಾಡಿದಂತೆಯೂ ಆಗುತ್ತದೆ. ಇದೊಂದು ಬಹಳ ವಿಶಿಷ್ಟವಾದ ಅನುಭವ’ ಎಂದು ಅವರು ಹೇಳಿದ್ದಾರೆ.</p>.<p>‘ಚಮನ್ ಬಹಾರ್’ ಚಿತ್ರವು ಪ್ರೀತಿಯ ಭಿನ್ನ ರೂಪಗಳ ಮೇಲೆ ಬೆಳಕು ಚೆಲ್ಲುವ, ಮನರಂಜನೆ ನೀಡುವ ಪ್ರೇಮಕಥೆ ಎಂದು ಜಿತೇಂದ್ರ ಬಣ್ಣಿಸಿದ್ದಾರೆ. ಈ ಚಿತ್ರವು ನೆಟ್ಫ್ಲಿಕ್ಸ್ನಲ್ಲಿ ಶುಕ್ರವಾರ ಬಿಡುಗಡೆ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಸಣ್ಣ ಪಟ್ಟಣಗಳ ಕಥೆಗಳನ್ನು ಆಧರಿಸಿರುವ ಸಿನಿಮಾಗಳು ಈಗಿನ ಸಂದರ್ಭದಲ್ಲಿ ಹೆಚ್ಚು ಜನಪ್ರಿಯ ಆಗುತ್ತಿವೆ ಎಂದು ನಟ ಜಿತೇಂದ್ರ ಕುಮಾರ್ ಹೇಳುತ್ತಾರೆ. ಇಂತಹ ಕಥೆಗಳು ವೀಕ್ಷಕರಿಂದ ಒಳ್ಳೆಯ ಸ್ಪಂದನ ಪಡೆಯುತ್ತವೆ ಎನ್ನುವುದು ಜಿತೇಂದ್ರ ಅವರ ಮಾತು.</p>.<p>‘ಶುಭ್ ಮಂಗಲ್ ಜ್ಯಾದಾ ಸಾವಧಾನ್’ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಜೊತೆ ಅಭಿನಯಿಸಿದ ಜಿತೇಂದ್ರ ಅವರು ನಂತರ ಅಮೆಜಾನ್ ಪ್ರೈಮ್ನ ‘ಪಂಚಾಯತ್’ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಈಗ ಅವರು ನೆಟ್ಫ್ಲಿಕ್ಸ್ ಸಿನಿಮಾ ‘ಚಮನ್ ಬಹಾರ್’ನಲ್ಲಿ ನಟಿಸಿದ್ದಾರೆ.</p>.<p>‘ಪಾತ್ರಗಳನ್ನು ನಿಭಾಯಿಸುವಾಗ ಕಲಾವಿದನಾಗಿ ನನ್ನ ಮೊದಲ ಆದ್ಯತೆಯು, ಆ ಪಾತ್ರಗಳು ವಾಸ್ತವಕ್ಕೆ ಹತ್ತಿರವಾಗಿ ಇರುವಂತೆ ನೋಡಿಕೊಳ್ಳುವುದಾಗಿರುತ್ತದೆ. ಶೂಟಿಂಗ್ಗೆ ತೆರಳುವ ಮೊದಲು, ನನಗೆ ನೀಡಿರುವ ಪಾತ್ರವನ್ನು ಅಭಿನಯಿಸಲು ಅಗತ್ಯ ಸಿದ್ಧತೆಗಳನ್ನು ನಡೆಸುತ್ತೇನೆ. ಅದಕ್ಕಾಗಿ ಬಹಳಷ್ಟು ಸಮಯ ಮೀಸಲಿಡುತ್ತೇನೆ’ ಎಂದು ಅವರು ಹೇಳಿದ್ದಾರೆ.</p>.<p>‘ಚಮನ್ ಬಹಾರ್’ ಚಿತ್ರವು ಬಿಲ್ಲು ಎನ್ನುವ ಪಾನ್ ಅಂಗಡಿ ಮಾಲೀಕನ ಕಥೆ. ಇದನ್ನು ವಾಸ್ತವಕ್ಕೆ ಹತ್ತಿರವಾಗಿ ಇರುವಂತೆ ರೂಪಿಸಲಾಗಿದೆ. ಇದರಲ್ಲಿ ಬಿಲ್ಲು, ಒಬ್ಬಳು ಹುಡುಗಿಯೆಡೆಗೆ ಆಕರ್ಷಿತನಾಗಿರುತ್ತಾನೆ. ಆದರೆ, ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳುವುದಿರಲಿ, ಆಕೆಯ ಜೊತೆ ಮಾತು ಆರಂಭಿಸಲು ಕೂಡ ಅವನಿಗೆ ಸಾಧ್ಯವಾಗಿರುವುದಿಲ್ಲ.</p>.<p>‘ಸಣ್ಣ ಪಟ್ಟಣಗಳಿಗೆ ಸಂಬಂಧಿಸಿದ ಕಥೆಗಳನ್ನು ವೀಕ್ಷಕರು ಹೆಚ್ಚು ತೀವ್ರವಾಗಿ ತಮ್ಮದಾಗಿಸಿಕೊಳ್ಳುತ್ತಾರೆ. ಅಂತಹ ಕಥೆಗಳಲ್ಲಿ ನಾವು ಪಾತ್ರ ನಿಭಾಯಿಸಿದಾಗ ಭಿನ್ನ ಸಂಸ್ಕೃತಿಗಳ ನಡುವೆ ಸೇತುವೆಯಂತೆ ಕೆಲಸ ಮಾಡಿದಂತೆಯೂ ಆಗುತ್ತದೆ. ಇದೊಂದು ಬಹಳ ವಿಶಿಷ್ಟವಾದ ಅನುಭವ’ ಎಂದು ಅವರು ಹೇಳಿದ್ದಾರೆ.</p>.<p>‘ಚಮನ್ ಬಹಾರ್’ ಚಿತ್ರವು ಪ್ರೀತಿಯ ಭಿನ್ನ ರೂಪಗಳ ಮೇಲೆ ಬೆಳಕು ಚೆಲ್ಲುವ, ಮನರಂಜನೆ ನೀಡುವ ಪ್ರೇಮಕಥೆ ಎಂದು ಜಿತೇಂದ್ರ ಬಣ್ಣಿಸಿದ್ದಾರೆ. ಈ ಚಿತ್ರವು ನೆಟ್ಫ್ಲಿಕ್ಸ್ನಲ್ಲಿ ಶುಕ್ರವಾರ ಬಿಡುಗಡೆ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>