ಮುಂಬೈ: ಮಹಾಕಾವ್ಯ ‘ರಾಮಾಯಣ‘ದ ರಾಮನ ಪಾತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ನಟಿಸುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ನಟಿ ಕಂಗನಾ ರನೌತ್ ಪ್ರತಿಕ್ರಿಯಿಸಿದ್ದಾರೆ.
ಬಾಲಿವುಡ್ನ ತಾರಾ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ನಿತೀಶ್ ತಿವಾರಿ ನಿರ್ದೇಶನ ಮಾಡಲಿರುವ 'ರಾಮಾಯಣ' ಚಿತ್ರದಲ್ಲಿ ಸೀತೆ ಹಾಗೂ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯಿಸಿರುವ ಕಂಗನಾ, ‘ಇತ್ತೀಚಿಗೆ ಮತ್ತೊಂದು ‘ರಾಮಾಯಣ‘ ಚಿತ್ರ ನಿರ್ಮಾಣವಾಗುತ್ತಿದೆ, ರಾಮನ ಪಾತ್ರದಲ್ಲಿ ನಟ ರಣಬೀರ್ ಕಪೂರ್ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ‘ತೆಳ್ಳಗಿನ ಬಿಳಿ ಇಲಿ‘ (ರಣಬೀರ್ ಅವರನ್ನು ಉಲ್ಲೇಖಿಸಿ) ರಾಮನ ಪಾತ್ರದಲ್ಲಿ ಅಭಿನಯಿಸಲು ಸ್ವಲ್ವ ಸನ್ ಟ್ಯಾನ್ ಆಗಬೇಕಾಗುತ್ತದೆ ಮತ್ತು ಆತ್ಮಸಾಕ್ಷಿಯನ್ನು ಹೊಂದಿರಬೇಕಾಗುತ್ತದೆ‘ ಎಂದು ಕಿಚಾಯಿಸಿದ್ದಾರೆ.